Asianet Suvarna News Asianet Suvarna News

ಬಿಜೆಪಿ ಶಾಸಕರ ವಿರುದ್ಧ ಬಿಜೆಪಿಗರಿಂದಲೇ ಪರ್ಸೆಂಟೇಜ್ ಆರೋಪ

ಬಿಜೆಪಿ ಶಾಸಕರ ವಿರುದ್ಧ ಬಿಜೆಪಿ ಕಾರ್ಯಕರ್ತರೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿವಿಧ ಆರೋಪಗಳ ಸುರುಮಳೆಯನ್ನೇ ಸುರಿಸಿದ್ದಾರೆ.

BJP Workers Unhappy Over BJP MLA Basavaraj Dhadesugur
Author
Bengaluru, First Published Feb 2, 2019, 2:01 PM IST

ಕೊಪ್ಪಳ :  ಕೊಪ್ಪಳದಲ್ಲಿ ಬಿಜೆಪಿ ಶಾಸಕರ ವಿರುದ್ಧ ಬಿಜೆಪಿ ಕಾರ್ಯಕರ್ತರಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸೂಗೂರ್ ವಿರುದ್ಧ ಹರಿಹಾಯ್ದಿದ್ದು,  ಶಾಸಕರು‌ ಮಾಡೊದೆಲ್ಲಾ ಪರ್ಸೆಂಟೇಜ್ ಗಾಗಿ ಎಂದು ಆರೋಪಿಸಿದ್ದಾರೆ.  

"

ಸ್ಥಳೀಯರು ಹಾಜರಿಲ್ಲದ ವೇಳೆ ಬಸವರಾಜ ದಡೇಸೂಗೂರ್ ಕಾಮಗಾರಿಯೊಂದಕ್ಕೆ ಪೂಜೆ ಸಲ್ಲಿಸಿ ತೆರಳಿದ್ದ ಹಿನ್ನೆಲೆಯಲ್ಲಿ ಈ ಆರೋಪ ಹೇಳಿ ಬಂದಿದೆ. 

ಪಂಚಮಸಾಲಿ ವಾಟ್ಸಪ್ ಗ್ರೂಪ್ ಅಲ್ಲಿ ಶಾಸಕರ ವಿರುದ್ಧ ತೀವ್ರ ಚರ್ಚೆ ನಡೆದಿದ್ದು,  ಶಾಸಕ ಬಸವರಾಜ ದಡೇಸುಗೂರ್ ವಿರುದ್ಧ ನೇರವಾಗಿಯೇ ಪರ್ಸೆಂಟೇಜ್  ಆರೋಪ ಮಾಡಿದ್ದಾರೆ. 

70% ಕಮಿಷನ್ 20% ಕಾಮಗಾರಿ 10% ಕಾಂಟ್ರಕ್ಟರ್ ಇದು ಕಾಮಗಾರಿ ನೀಡಬೇಕಾದ ಕಮಿಷನ್ ಎಂದು ಹೇಳಿದ್ದು, ಕಮಿಷನ್ ಕೊಟ್ಟೋರಿಗೆ ಮಾತ್ರ ಕೆಲಸ ಕೊಡುತ್ತಾರೆ. ಇಲ್ಲಿ‌ ಎಲ್ಲಾ ನಡೆಯುತ್ತಿರುವುದು ದುಡ್ಡಿನ ಮೇಲೆ. ಬಿಜೆಪಿ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ.  ಪರ್ಸೆಂಟೇಜ್ ಇದ್ದರೆ ಅವರೊಇಗೆ ಜನರು ಬೇಡ ಎಂದು ಆರೋಪಿಸಿದ್ದಾರೆ. 

BJP Workers Unhappy Over BJP MLA Basavaraj Dhadesugur

Follow Us:
Download App:
  • android
  • ios