ಬಿಜೆಪಿ ಶಾಸಕರ ವಿರುದ್ಧ ಬಿಜೆಪಿಗರಿಂದಲೇ ಪರ್ಸೆಂಟೇಜ್ ಆರೋಪ
ಬಿಜೆಪಿ ಶಾಸಕರ ವಿರುದ್ಧ ಬಿಜೆಪಿ ಕಾರ್ಯಕರ್ತರೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿವಿಧ ಆರೋಪಗಳ ಸುರುಮಳೆಯನ್ನೇ ಸುರಿಸಿದ್ದಾರೆ.
ಕೊಪ್ಪಳ : ಕೊಪ್ಪಳದಲ್ಲಿ ಬಿಜೆಪಿ ಶಾಸಕರ ವಿರುದ್ಧ ಬಿಜೆಪಿ ಕಾರ್ಯಕರ್ತರಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸೂಗೂರ್ ವಿರುದ್ಧ ಹರಿಹಾಯ್ದಿದ್ದು, ಶಾಸಕರು ಮಾಡೊದೆಲ್ಲಾ ಪರ್ಸೆಂಟೇಜ್ ಗಾಗಿ ಎಂದು ಆರೋಪಿಸಿದ್ದಾರೆ.
"
ಸ್ಥಳೀಯರು ಹಾಜರಿಲ್ಲದ ವೇಳೆ ಬಸವರಾಜ ದಡೇಸೂಗೂರ್ ಕಾಮಗಾರಿಯೊಂದಕ್ಕೆ ಪೂಜೆ ಸಲ್ಲಿಸಿ ತೆರಳಿದ್ದ ಹಿನ್ನೆಲೆಯಲ್ಲಿ ಈ ಆರೋಪ ಹೇಳಿ ಬಂದಿದೆ.
ಪಂಚಮಸಾಲಿ ವಾಟ್ಸಪ್ ಗ್ರೂಪ್ ಅಲ್ಲಿ ಶಾಸಕರ ವಿರುದ್ಧ ತೀವ್ರ ಚರ್ಚೆ ನಡೆದಿದ್ದು, ಶಾಸಕ ಬಸವರಾಜ ದಡೇಸುಗೂರ್ ವಿರುದ್ಧ ನೇರವಾಗಿಯೇ ಪರ್ಸೆಂಟೇಜ್ ಆರೋಪ ಮಾಡಿದ್ದಾರೆ.
70% ಕಮಿಷನ್ 20% ಕಾಮಗಾರಿ 10% ಕಾಂಟ್ರಕ್ಟರ್ ಇದು ಕಾಮಗಾರಿ ನೀಡಬೇಕಾದ ಕಮಿಷನ್ ಎಂದು ಹೇಳಿದ್ದು, ಕಮಿಷನ್ ಕೊಟ್ಟೋರಿಗೆ ಮಾತ್ರ ಕೆಲಸ ಕೊಡುತ್ತಾರೆ. ಇಲ್ಲಿ ಎಲ್ಲಾ ನಡೆಯುತ್ತಿರುವುದು ದುಡ್ಡಿನ ಮೇಲೆ. ಬಿಜೆಪಿ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಪರ್ಸೆಂಟೇಜ್ ಇದ್ದರೆ ಅವರೊಇಗೆ ಜನರು ಬೇಡ ಎಂದು ಆರೋಪಿಸಿದ್ದಾರೆ.