ಕೊಪ್ಪಳ ಜಿಲ್ಲೆಯ ಹನುಮಸಾಗರ ಪೊಲೀಸ್ ಠಾಣೆಯ ಪೇದೆ ಬ್ರಹ್ಮಾನಂದ, ಇಲಾಖೆಯ ಕೆಲಸದ ಒತ್ತಡದಿಂದ ಬೇಸತ್ತು 'ಪೊಲೀಸ್ ಕೆಲಸಕ್ಕಿಂತ ಎಗ್‌ರೈಸ್‌ ಮಾರುವುದೇ ಲೇಸು' ಎಂದು ವಾಟ್ಸ್‌ಆ್ಯಪ್‌ ಸ್ಟೇಟಸ್ ಹಾಕಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಇದೀಗ ಕೊಪ್ಪಳ ಎಸ್‌ಪಿ ಅವರು ಪೇದೆಯ ವಿರುದ್ಧ ತನಿಖೆಗೆ ಆದೇಶ

ಹನುಮಸಾಗರ(ಫೆ.3): ಪೊಲೀಸ್ ಇಲಾಖೆಯ ಕೆಲಸದ ಒತ್ತಡ ಮತ್ತು ರಜೆ ರಹಿತ ದುಡಿಮೆಯ ಬಗ್ಗೆ ಅಸಮಾಧಾನಗೊಂಡು, ಪೊಲೀಸ್‌ ಕೆಲಸಕ್ಕಿಂತ ಎಗ್‌ರೈಸ್‌ ಮಾರಿಕೊಂಡು ಬದುಕುವುದು ಉತ್ತಮ ಎಂದು ವಾಟ್ಸ್‌ಆ್ಯಪ್‌ ಸ್ಟೇಟಸ್ ಹಾಕಿದ್ದ ಪೊಲೀಸ್ ಪೇದೆ ಬ್ರಹ್ಮಾನಂದ ಎಂಬುವರ ಪೋಸ್ಟ್‌ ಚರ್ಚೆಗೆ ಕಾರಣವಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನುಮಸಾಗರ ಪೊಲೀಸ್ ಠಾಣೆಯ ಪೇದೆ ಬ್ರಹ್ಮಾನಂದ ಎಂಬುವರು, ‘365 ದಿನವೂ ಡ್ಯೂಟಿ, ಒಂದು ದಿನವೂ ರಜೆ ಇಲ್ಲ. ಪೊಲೀಸ್ ಕರ್ತವ್ಯಕ್ಕೆ ಬರುವ ಮುನ್ನ ನೂರು ಬಾರಿ ಯೋಚಿಸಿ, ಬೇರೆ ಇಲಾಖೆಗೆ ಹೋಗುವುದು ಉತ್ತಮ’ಎಂದು ಮತ್ತೊಂದು ಸ್ಟೇಟಸ್‌ನಲ್ಲಿ ಅವರು ಉಲ್ಲೇಖಿಸಿದ್ದಾರೆ. 

ರಾಜ್ಯದಲ್ಲಿ 8,300 ಪೊಲೀಸ್ ಹುದ್ದೆಗಳ ನೇಮಕಾತಿ ಕುರಿತು ಡಿಜಿ–ಐಜಿಪಿ ಡಾ.ಎಂ.ಎ.ಸಲೀಂ(Dr MA Saleem DG-IGP) ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆಯಂತೆ ಈ ಸ್ಟೇಟಸ್ ಹಾಕಲಾಗಿದೆ ಎನ್ನಲಾಗಿದೆ. ಬ್ರಹ್ಮಾನಂದ ವಿರುದ್ಧ ಕೊಪ್ಪಳ ಎಸ್‌ಪಿ ತನಿಖೆಗೆ ಆದೇಶಿಸಿದ್ದಾರೆ.

ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರಿಕೊಂಡು ಬದುಕುವುದು ಉತ್ತಮ’ ಎಂದು ಸ್ಟೇಟಸ್ ಹಾಕಿದ್ದರು. ಅಲ್ಲದೇ,‘

ಈ ಮಧ್ಯೆ, ವಿಷಯ ಗಂಭೀರತೆ ಪಡೆದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ ಅವರು ಪೇದೆ ಬ್ರಹ್ಮಾನಂದ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

Better to sell egg rice than be a cop, says Karnataka Constable on WhatsApp status; probe ordered