Asianet Suvarna News Asianet Suvarna News

ಕೊರೋನಾ ಮತ್ತೆ ಶುರುವಾಯ್ತಾ ಅಬ್ಬರ : ಎಚ್ಚರ ವಹಿಸಿ

ರಾಜ್ಯದಲ್ಲಿ ಕೊರೋನಾಬ್ಬರ ಮುಂದುವರಿದಿದೆ. ಮತ್ತೆ ಸೋಂಕಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಜನರು ಎಚ್ಚರ ವಹಿಸುವ ಅಗತ್ಯವಿದೆ. 

8477 Corona Cases Reported in Karnataka On October 15 snr
Author
Bengaluru, First Published Oct 16, 2020, 7:29 AM IST

ಬೆಂಗಳೂರು (ಅ.16):  ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಮುಂದುವರಿದಿದ್ದು, ಗುರುವಾರ 8,477 ಕೊರೋನಾ ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿನಿಂದ 85 ಮಂದಿ ಮೃತರಾಗಿದ್ದಾರೆ. 8,841 ಮಂದಿ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಸದ್ಯ 1.13 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 939 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಒಟ್ಟು 7.43 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಈ ಪೈಕಿ 6.20 ಲಕ್ಷ ಮಂದಿ ಗುಣಮುಖರಾಗಿದ್ದಾರೆ.

ಕೊರೋನಾ ಲಸಿಕೆ ಹಾಗೂ ಸಂಶೋಧನೆ ಕುರಿತು ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ! ..

ರಾಜ್ಯದಲ್ಲಿ ಈವರೆಗೆ ಒಟ್ಟು 10,283 ಮಂದಿ ಕೊರೋನಾ ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಗುರುವಾರ 1.04 ಲಕ್ಷ ಕೊರೋನಾ ಪರೀಕ್ಷೆಗಳು ನಡೆದಿದೆ. ಒಟ್ಟು 63.55 ಲಕ್ಷ ಪರೀಕ್ಷೆಗಳನ್ನು ಈವರೆಗೆ ನಡೆಸಲಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 45, ಚಿಕ್ಕಬಳ್ಳಾಪುರ 4, ಶಿವಮೊಗ್ಗ, ತುಮಕೂರು, ಬಳ್ಳಾರಿ ಮತ್ತು ಬೆಳಗಾವಿಯಲ್ಲಿ ತಲಾ 3, ಚಾಮರಾಜನಗರ, ದಕ್ಷಿಣ ಕನ್ನಡ, ಧಾರವಾಡ, ಕೋಲಾರ, ಮಂಡ್ಯ, ಮೈಸೂರು, ಉಡುಪಿ, ಉತ್ತರ ಕನ್ನಡ ಮತ್ತು ವಿಜಯಪುರದಲ್ಲಿ ತಲಾ 2, ರಾಯಚೂರು, ಕೊಪ್ಪಳ, ಕಲಬುರಗಿ, ದಾವಣಗೆರೆ, ಬೀದರ್‌ ಮತ್ತು ಬಾಗಲಕೋಟೆಯಲ್ಲಿ ತಲಾ ಒಬ್ಬರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 3,788, ಬೆಂಗಳೂರು ಗ್ರಾಮಾಂತರ 454, ಹಾಸನ 440, ಮೈಸೂರು ಮತ್ತು ಬೆಳಗಾವಿಯಲ್ಲಿ ತಲಾ 303, ದಕ್ಷಿಣ ಕನ್ನಡ 301, ಬಳ್ಳಾರಿ 282, ತುಮಕೂರು 252, ಮಂಡ್ಯ ಮತ್ತು ಚಿಕ್ಕಬಳ್ಳಾಪುರ 230, ಉಡುಪಿ 179, ಶಿವಮೊಗ್ಗ 169, ಧಾರವಾಡ 164, ವಿಜಯಪುರ 160, ಚಿತ್ರದುರ್ಗ 159, ಕೊಡಗು 158, ಬಾಗಲಕೋಟೆ 133, ದಾವಣಗೆರೆ 103, ಚಿಕ್ಕಮಗಳೂರು 92, ಚಾಮರಾಜನಗರ 85, ಕೋಲಾರ 81, ರಾಮನಗರ 79, ಕೊಪ್ಪಳ 76, ರಾಯಚೂರು 59, ಉತ್ತರ ಕನ್ನಡ 57, ಕಲಬುರಗಿ 42, ಹಾವೇರಿ 41, ಗದಗ 40, ಬೀದರ್‌ 10, ಯಾದಗಿರಿ ಜಿಲ್ಲೆಯಲ್ಲಿ 7 ಮಂದಿಯಲ್ಲಿ ಕೊರೋನಾ ಸೋಂಕಿರುವುದು ಧೃಢವಾಗಿದೆ.

Follow Us:
Download App:
  • android
  • ios