ಇಷ್ಟು ದೊಡ್ಡ ಮೊತ್ತದ ಅಪಘಾತ ವಿಮೆ ನೀಡುತ್ತಿರುವ ದೇಶದ ಮೊದಲ ಸಾರಿಗೆ ಸಂಸ್ಥೆ ಕೆಎಸ್ಸಾರ್ಟಿಸಿಯಾಗಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಪ್ರೀಮಿಯಂರಹಿತ ವಿಮೆ ಅಡಿ 50 ಲಕ್ಷ ರು. ಹಾಗೂ ಯುನೈಟೆಡ್‌ ಇಂಡಿಯಾ ಇನ್‌ಶ್ಯೂರೆನ್ಸ್‌ನಿಂದ ವಾರ್ಷಿಕ 885 ರು. ಪ್ರಿಮಿಯಂ ಪಾವತಿ ಮೇರೆಗೆ 50 ಲಕ್ಷ ರು. ವಿಮಾ ಮೊತ್ತ ನೀಡಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಸಿಬ್ಬಂದಿ ಕರ್ತವ್ಯದಲ್ಲಿ ಇಲ್ಲದಿದ್ದ ಸಂದರ್ಭದಲ್ಲೂ ಅಪಘಾತಕ್ಕೆ ತುತ್ತಾಗಿ ಮೃತಪಟ್ಟರೆ ವಿಮಾ ಸೌಲಭ್ಯ ದೊರೆಯಲಿದೆ.

ಬೆಂಗಳೂರು(ಜು.16):  ಅಪಘಾತಕ್ಕೀಡಾಗಿ ಮೃತಪಟ್ಟ ಕೆಎಸ್‌ಆರ್‌ಟಿಸಿಯ ಇಬ್ಬರು ಸಿಬ್ಬಂದಿಯ ಕುಟುಂಬದವರಿಗೆ ಕಾರ್ಮಿಕ ಕಲ್ಯಾಣ ಯೋಜನೆಯಡಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ 1 ಕೋಟಿ ರು. ಮೊತ್ತದ ವಿಮಾ ಚೆಕ್‌ ಅನ್ನು ಶನಿವಾರ ವಿತರಿಸಿದರು.

ಇಷ್ಟು ದೊಡ್ಡ ಮೊತ್ತದ ಅಪಘಾತ ವಿಮೆ ನೀಡುತ್ತಿರುವ ದೇಶದ ಮೊದಲ ಸಾರಿಗೆ ಸಂಸ್ಥೆ ಕೆಎಸ್ಸಾರ್ಟಿಸಿಯಾಗಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಪ್ರೀಮಿಯಂರಹಿತ ವಿಮೆ ಅಡಿ 50 ಲಕ್ಷ ರು. ಹಾಗೂ ಯುನೈಟೆಡ್‌ ಇಂಡಿಯಾ ಇನ್‌ಶ್ಯೂರೆನ್ಸ್‌ನಿಂದ ವಾರ್ಷಿಕ 885 ರು. ಪ್ರಿಮಿಯಂ ಪಾವತಿ ಮೇರೆಗೆ 50 ಲಕ್ಷ ರು. ವಿಮಾ ಮೊತ್ತ ನೀಡಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಸಿಬ್ಬಂದಿ ಕರ್ತವ್ಯದಲ್ಲಿ ಇಲ್ಲದಿದ್ದ ಸಂದರ್ಭದಲ್ಲೂ ಅಪಘಾತಕ್ಕೆ ತುತ್ತಾಗಿ ಮೃತಪಟ್ಟರೆ ವಿಮಾ ಸೌಲಭ್ಯ ದೊರೆಯಲಿದೆ.

ಸಾರಿಗೆ ಸಚಿವರು ನೋಡಲೇಬೇಕಾದ ಸುದ್ದಿ, ಫುಟ್‌ಬೋರ್ಡ್‌ನಲ್ಲೇ ಮಗು ಹಿಡಿದು ಮಹಿಳೆ ಪ್ರಯಾಣ!

ಪ್ರಸಕ್ತ ವರ್ಷದಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಅಪಘಾತಕ್ಕೀಡಾಗಿ ಮೃತಪಟ್ಟಬೆಂಗಳೂರು ಕೇಂದ್ರೀಯ ವಿಭಾಗದ ಚಾಲಕ ಕಂ ನಿರ್ವಾಹಕ ಜಿ.ವಿ. ಚಲಪತಿ, ಹಾಸನ ವಿಭಾಗದ ಚಾಲಕ ಕಂ ನಿರ್ವಾಹಕ ಪಿ.ಎನ್‌. ನಾಗರಾಜು ಅವರ ಕುಟುಂಬದವರಿಗೆ ಸಚಿವರು ವಿಮಾ ಮೊತ್ತದ ಚೆಕ್‌ ನೀಡಲಾಯಿತು. ಇದೇ ವೇಳೆ ಮೃತರ ಕುಟುಂಬದವರಲ್ಲಿ ಒಬ್ಬರಿಗೆ ಅನುಕಂಪದ ಆಧಾರದಲ್ಲಿ ಕೆಲಸ ನೀಡಲು ಕ್ರಮ ಕೈಗೊಳ್ಳುವಂತೆ ಸಚಿವರು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.

ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌, ಕಾರ್ಮಿಕ ಸಂಘಟನೆ ಮುಖಂಡರಾದ ಎಚ್‌.ವಿ. ಅನಂತಸುಬ್ಬರಾವ್‌, ಬಿ. ಜಯದೇವರಾಜೇ ಅರಸು, ಜಿ.ಎಸ್‌. ಮಹದೇವಯ್ಯ, ಎಚ್‌.ಡಿ. ರೇವಪ್ಪ ಇತರರಿದ್ದರು.