Asianet Suvarna News Asianet Suvarna News

ಕಾನ್ಪುರದಲ್ಲಿ ಕ್ರಿಕೆಟಿಗರಿಗೆ ಅದ್ಧೂರಿ ಕೇಸರಿ ಸ್ವಾಗತ

ಸಾಮಾನ್ಯವಾಗಿ ಆಟಗಾರರು ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಆರತಿ ಬೆಳಗಿ, ಹೂವಿನ ಹಾರ ಹಾಕಿ ಸ್ವಾಗತ ಕೋರಲಾಗುವುದು. ಆದರೆ, ಆಟಗಾರರು ತಂಗಿರುವ ಹೋಟೆಲ್ ಸಿಬ್ಬಂದಿ, ಆಟಗಾರರಿಗೆ ಹಾರಕ್ಕೆ ಬದಲು ಕೇಸರಿ ಶಾಲು ಹೊದಿಸಿ ಸ್ವಾಗತ ಕೋರಿದ್ದಾರೆ.

Yogi Inspired Saffron Welcome for Both Teams in Kanpur

ಕಾನ್ಪುರ(ಅ.28): ಭಾನುವಾರ ನಡೆಯಲಿರುವ 3 ಏಕದಿನ ಪಂದ್ಯಗಳ ಸರಣಿಯ ಅಂತಿಮ ಪಂದ್ಯವನ್ನಾಡಲು ಕಾನ್ಪುರಕ್ಕೆ ಗುರುವಾರ ಸಂಜೆ ಆಗಮಿಸಿದ ಭಾರತ ಹಾಗೂ ನ್ಯೂಜಿಲೆಂಡ್ ತಂಡದ ಆಟಗಾರರಿಗೆ ಕೇಸರಿ ಸ್ವಾಗತ ದೊರೆಯಿತು.

ಸಾಮಾನ್ಯವಾಗಿ ಆಟಗಾರರು ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಆರತಿ ಬೆಳಗಿ, ಹೂವಿನ ಹಾರ ಹಾಕಿ ಸ್ವಾಗತ ಕೋರಲಾಗುವುದು. ಆದರೆ, ಆಟಗಾರರು ತಂಗಿರುವ ಹೋಟೆಲ್ ಸಿಬ್ಬಂದಿ, ಆಟಗಾರರಿಗೆ ಹಾರಕ್ಕೆ ಬದಲು ಕೇಸರಿ ಶಾಲು ಹೊದಿಸಿ ಸ್ವಾಗತ ಕೋರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹೋಟೆಲ್‌'ನ ವ್ಯವಸ್ಥಾಪಕ ನಿರ್ದೇಶಕ ವಿಕಾಸ್, ‘ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆಯಲ್ಲಿ ದೀಪಾವಳಿ ಆಚರಣೆಯಿಂದ ಪ್ರೇರಣೆಗೊಂಡು ಆಟಗಾರರಿಗೆ ಭಾರತೀಯ ಸಂಸ್ಕೃತಿಯ ಅನುಭವ ನೀಡುವ ಸಲುವಾಗಿ ಈ ರೀತಿಯ ಸ್ವಾಗತ ನೀಡಲಾಯಿತು’ ಎಂದಿದ್ದಾರೆ.

Follow Us:
Download App:
  • android
  • ios