ಪಾಕಿಸ್ತಾನದೆದುರು ಭಾರತ ಎಲ್ಲಾ ವಿಭಾಗದಲ್ಲೂ ಪ್ರಾಬಲ್ಯ ಮೆರೆಯಿತು. ರೈಡಿಂಗ್’ನಲ್ಲಿ ಭಾರತ 15 ಅಂಕ ಗಳಿಸಿದರೆ, ಪಾಕಿಸ್ತಾನ ಕಲೆಹಾಕಿದ್ದು ಕೇವಲ 9 ಅಂಕಗಳು ಮಾತ್ರ. ಟ್ಯಾಕಲ್’ನಲ್ಲಿ ಭಾರತ 12 ಅಂಕ ಪಡದರೆ, ಪಾಕ್ ಟ್ಯಾಕಲ್ ಮಾಡಿ ಗಳಿಸಿದ್ದು 8 ಅಂಕಗಳಷ್ಟೇ. ಇತರೆ ಅಂಕಗಳಲ್ಲಿ ಭಾರತ 5 ಅಂಕ ಪಡೆಯಿತು. ಒಟ್ಟನಲ್ಲಿ ಅಜಯ್ ಠಾಕೂರ್ ನೇತೃತ್ವದ ಟೀಂ ಇಂಡಿಯಾಗೆ ಪಾಕಿಸ್ತಾನ ಯಾವ ವಿಭಾಗದಲ್ಲೂ ಸವಾಲಾಗಲೇ ಇಲ್ಲ.

ದುಬೈ[ಜೂ.23]: ಚೊಚ್ಚಲ ಆವೃತ್ತಿಯ ‘ಕಬಡ್ಡಿ ಮಾಸ್ಟರ್ಸ್‌ ದುಬೈ 2018’ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 36-20 ಅಂಕಗಳಿಂದ ಮಣಿಸಿ ಶುಭಾರಂಭ ಮಾಡಿದೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಎಲ್ಲಾ ವಿಭಾಗಗಳಲ್ಲೂ ಪ್ರಾಬಲ್ಯ ಮೆರೆದ ಭಾರತ ತಂಡ ಸುಲಭವಾಗಿ ಗೆಲುವಿನ ನಗೆ ಬೀರಿದೆ.

Add Asianetnews Kannada as a Preferred SourcegooglePreferred

ಪಾಕಿಸ್ತಾನದೆದುರು ಭಾರತ ಎಲ್ಲಾ ವಿಭಾಗದಲ್ಲೂ ಪ್ರಾಬಲ್ಯ ಮೆರೆಯಿತು. ರೈಡಿಂಗ್’ನಲ್ಲಿ ಭಾರತ 15 ಅಂಕ ಗಳಿಸಿದರೆ, ಪಾಕಿಸ್ತಾನ ಕಲೆಹಾಕಿದ್ದು ಕೇವಲ 9 ಅಂಕಗಳು ಮಾತ್ರ. ಟ್ಯಾಕಲ್’ನಲ್ಲಿ ಭಾರತ 12 ಅಂಕ ಪಡದರೆ, ಪಾಕ್ ಟ್ಯಾಕಲ್ ಮಾಡಿ ಗಳಿಸಿದ್ದು 8 ಅಂಕಗಳಷ್ಟೇ. ಇತರೆ ಅಂಕಗಳಲ್ಲಿ ಭಾರತ 5 ಅಂಕ ಪಡೆಯಿತು. ಒಟ್ಟನಲ್ಲಿ ಅಜಯ್ ಠಾಕೂರ್ ನೇತೃತ್ವದ ಟೀಂ ಇಂಡಿಯಾಗೆ ಪಾಕಿಸ್ತಾನ ಯಾವ ವಿಭಾಗದಲ್ಲೂ ಸವಾಲಾಗಲೇ ಇಲ್ಲ. ಇನ್ನು ಭಾರತ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಕೀನ್ಯಾ ತಂಡವನ್ನು ಎದುರಿಸಲಿದೆ. ಆ ಬಳಿಕ ಮತ್ತೊಮ್ಮೆ ಪಾಕಿಸ್ತಾನವನ್ನು ಜೂನ್ 25ರಂದು ಭಾರತ ತಂಡವು ಎದುರಿಸಲಿದೆ.

Scroll to load tweet…

ಭಾರತ-ಪಾಕಿಸ್ತಾನ ಕಬಡ್ಡಿ ಪಂದ್ಯವನ್ನು ವೀಕ್ಷಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟೀಂ ಇಂಡಿಯಾ ಕಬಡ್ಡಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
’ಚೊಚ್ಚಲ ಕಬಡ್ಡಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ ಭಾರತದ ಕಬಡ್ಡಿ ತಂಡಕ್ಕೆ ಅಭಿನಂದನೆಗಳು. ಮಜಾ ಆ ಗಯಾ’ ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ ಕಬಡ್ಡಿ ಕರ್ಫ್ಯೂ ಎಂಬ ಹ್ಯಾಷ್’ಟ್ಯಾಗ್ ಅನ್ನೂ ನೀಡಿದ್ದಾರೆ.