ತಂಡಕ್ಕೆ ಮರಳಿದ ಯುವರಾಜ್ ಸಿಂಗ್- ಮೊಹಾಲಿಯಲ್ಲಿ ಕಣಕ್ಕೆ!
ಟೀಂ ಇಂಡಿಯಾ ಹಿರಿಯ ಆಲ್ರೌಂಡರ್ ಯುವರಾಜ್ ಸಿಂಗ್ ಮತ್ತೆ ತಂಡಕ್ಕೆ ವಾಪಾಸ್ಸಾಗಿದ್ದಾರೆ. ಪಂಜಾಬ್ ರಣಜಿ ತಂಜದಿಂದ ದೂರ ಉಳಿದಿದ್ದ ಯುವಿ ದಿಢೀರ್ ಕಮ್ಬ್ಯಾಕ್ ಮಾಡಿದ್ದಾರೆ.
ಮೊಹಾಲಿ(ನ.26): ಟೀಂ ಇಂಡಿಯಾ ಆಲ್ರೌಂಡರ್ ಯುವರಾಜ್ ಸಿಂಗ್ ಈ ಬಾರಿಯ ಮೊದಲ ರಣಜಿ ಪಂದ್ಯಕ್ಕೆ ರೆಡಿಯಾಗಿದ್ದಾರೆ. ಪಂಜಾಬ್ ರಣಜಿ ತಂಡದಿಂದ ಹೊರಗುಳಿದಿದ್ದ ಯುವಿ ಮತ್ತೆ ತಂಡ ಸೇರಿಕೊಂಡಿದ್ದಾರೆ.
ಡಿಸೆಂಬರ್ 6 ರಿಂದ 9 ರ ವರೆಗಿನ ಹಿಮಾಚಲ್ ವಿರುದ್ಧದ ಪಂದ್ಯ ಹಾಗೂ ಡಿಸೆಂಬರ್ 14 ರಿಂದ 17 ವರೆಗಿನ ತಮಿಳುನಾಡು ಪಂದ್ಯಗಳಲ್ಲಿ ಯುವರಾಜ್ ಸಿಂಗ್ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಪ್ರಸಕ್ತ ವರ್ಷದ ಮೊದಲ ರಣಜಿ ಪಂದ್ಯ ಆಡಲಿದ್ದಾರೆ.
ಪಂಜಾಬ್ ತಂಡದ ಯುವ ಬ್ಯಾಟ್ಸ್ಮನ್ ಶುಭ್ನಮ್ ಗಿಲ್ , ಭಾರತ ಎ ತಂಡ ಸೇರಿಕೊಂಡಿದ್ದಾರೆ. ಭಾರತ ಎ ತಂಡ ನ್ಯೂಜಿಲೆಂಡ್ ಎ ತಂಡದ ವಿರುದ್ಧ ಪಂದ್ಯ ಆಡಿಲಿದೆ. ಹೀಗಾಗಿ ಶುಭ್ನಮ್ ಸ್ಥಾನಕ್ಕೆ ಯುವರಾಜ್ ಸಿಂಗ್ ಅವರನ್ನ ಆಯ್ಕೆ ಮಾಡಲಾಗಿದೆ.