Asianet Suvarna News Asianet Suvarna News

ಸ್ವಚ್ಛ ಭಾರತ ಅಭಿಯಾನ: ಬ್ಯಾಟ್ ಹಿಡಿಯುವ ಕೈಯಲ್ಲಿ ಪೊರಕೆ, ಕಸದ ಬುಟ್ಟಿ ಹಿಡಿದ ಟೀಮ್ ಇಂಡಿಯಾ

Swacha bharth campaign

ಕೊಲ್ಕತ್ತಾ(ಅ.03): ಬ್ಯಾಟ್ - ಬಾಲ್ ಹಿಡಿಯುವ ಕೈಯಲ್ಲಿ ಪೊರಕೆ, ಕಸದ ಬುಟ್ಟಿ ಹಿಡಿದ ಟೀಮ್ ಇಂಡಿಯಾ ಆಟಗಾರರು ಸ್ವಚ್ಛ ಭಾರತ ಅಭಿಯಾನದ ಹಿನ್ನಲೆಯಲ್ಲಿ ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನವನ್ನು ಸ್ವಚ್ಚಗೊಳಿಸಿದರು.

ಬಿಸಿಸಿಐ ಅಧ್ಯಕ್ಷ ಅನುರಾಗ್​ ಠಾಕೂರ್​ ಮತ್ತು ನಾಯಕ ಕ್ಯಾಪ್ಟನ್​ ಕೊಹ್ಲಿ ಅವರ ಸಾರಥ್ಯದಲ್ಲಿ  ಸಂಪೂರ್ಣ ತಂಡ ಮೈದಾನಕ್ಕಿಳಿದು ಸಂಪೂರ್ಣ ಮೈದಾನವನ್ನು ಸ್ವಚ್ಚಗೊಳಿಸಿದರು. 

ಭಾರತ-ನ್ಯೂಜಿಲೆಂಡ್​ ಟೆಸ್ಟ್​ ಮೂರನೇ ದಿನದಾಟ ಮುಗಿದ ನಂತರ, ಟೀಮ್ ಇಂಡಿಯಾ ಆಟಗಾರರು ಕೈಯಲ್ಲಿ ಪೊರಕೆ, ಕಸದ ಬುಟ್ಟಿ ಹಿಡಿದು. ಮೈದಾನವನ್ನು ಸ್ವಚ್ಚಗೊಳಿಸಲು ಮುಂದಾದರು. 

ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಚ ಭಾರತ ಅಭಿಯಾನಕ್ಕೆ ಸಂಪೂರ್ಣ ಬೆಂಬಲು ನೀಡುವ ಜೊತೆಗೆ, ಭಾರತವನ್ನು ಸ್ವಚ್ಚವಾಗಿಡುವ ಸಂದೇಶ ರವಾನಿಸಿದರು.