ಲೋಧಾ ಸಮಿತಿ ಶಿಫಾರಸ್ಸು ಅನುಷ್ಠಾನಗೊಳಿಸುವವರೆಗೂ ಹಣ ಬಿಡುಗಡೆಗೆ ತಡೆ ನೀಡಿದ ಸುಪ್ರೀಂ
ನವದೆಹಲಿ (ಅ.07):ಲೋಧಾ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸುವವರೆಗೂ ಬಿಸಿಸಿಐ 12 ರಾಜ್ಯಗಳ ಅಸೋಸಿಯೇಶನ್ ಗೆ ಹಣ ಬಿಡುಗಡೆ ಮಾಡುವುದನ್ನು ಸುಪ್ರೀಂ ತಡೆ ಹಿಡಿದಿದೆ.
ಲೋಧಾ ಸಮಿತಿ ಶಿಫಾರಸ್ಸು ಮಾಡಿದ ಸುಧಾರಣೆಗಳನ್ನು ಸಂಪೂರ್ಣವಾಗಿ ಜಾರಿಗೊಳಿಸುವಂತೆ ನಿರ್ಣಯ ಕೈಗೊಳ್ಳಿ ಅಥವಾ ರಾಜ್ಯ ಅಸೋಸಿಯೇಶನ್ ಗೆ ಹಣ ಬಿಡುಗಡೆ ಮಾಡಬೇಡಿ ಎಂದು ಸುಪ್ರೀಂ ತಾಕೀತು ಮಾಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಸಿಸಿಐ, ನಾವು ಸುಧಾರಣೆಗಳನ್ನು ಜಾರಿಗೊಳಿಸುವುದಿಲ್ಲವೆಂದು ಹೇಳಿಲ್ಲ ಎಂದಿದೆ. ಈ ವಿಚಾರದಲ್ಲಿ ಬಿಸಿಸಿಐ ಸರಿಯಾದ ದಾರಿಯಲ್ಲಿ ನಡೆಯಬೇಕು ಎಂದು ಕೋರ್ಟ್ ಹೇಳಿದೆ.
ಮುಂದಿನ ವಿಚಾರಣೆಯನ್ನು ಸುಪ್ರೀಂ ಅ.17 ರಂದು ನಡೆಸಲಿದೆ.