ಆರ್’ಸಿಬಿ ಕಪ್ ಆಸೆ ಭಗ್ನ ಮಾಡಿದ ಶ್ರೇಯಸ್ ಗೋಪಾಲ್..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ಮುನ್ನುಡಿ ಬರೆದಿದ್ದು ಕನ್ನಡಿಗರು ಎನ್ನುವುದೇ ವಿಪರ್ಯಾಸ. ಮೊದಲಿಗೆ ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ ಕೆ. ಗೌತಮ್ ರಾಜಸ್ಥಾನಕ್ಕೆ ಮೊದಲು ಮುನ್ನುಡಿ ಬರೆದರೆ, ಶ್ರೇಯಸ್ ಗೌತಮ್ ಆರ್’ಸಿಬಿಯ ಪ್ರಮುಖ 4 ವಿಕೆಟ್ ಕಿತ್ತು ರಾಜಸ್ಥಾನ ತಂಡದ ಗೆಲುವಿನ ರೂವಾರಿ ಎನಿಸಿದರು.
ಬೆಂಗಳೂರು[ಮೇ.19]: ರಾಯಲ್ ಚಾಲೆಂಜರ್ ಕಪ್ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನವಾಗಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ 30 ರನ್’ಗಳ ಹೀನಾಯ ಸೋಲು ಕಾಣುವ ಮೂಲಕ 11ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಪಡೆ ತನ್ನ ಅಭಿಯಾನವನ್ನು ಅಂತ್ಯಗೊಳಿಸಿಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ಮುನ್ನುಡಿ ಬರೆದಿದ್ದು ಕನ್ನಡಿಗರು ಎನ್ನುವುದೇ ವಿಪರ್ಯಾಸ. ಮೊದಲಿಗೆ ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ ಕೆ. ಗೌತಮ್ ರಾಜಸ್ಥಾನಕ್ಕೆ ಮೊದಲು ಮುನ್ನುಡಿ ಬರೆದರೆ, ಶ್ರೇಯಸ್ ಗೌತಮ್ ಆರ್’ಸಿಬಿಯ ಪ್ರಮುಖ 4 ವಿಕೆಟ್ ಕಿತ್ತು ರಾಜಸ್ಥಾನ ತಂಡದ ಗೆಲುವಿನ ರೂವಾರಿ ಎನಿಸಿದರು.
ಹೀಗಿತ್ತು ಶ್ರೇಯಸ್ ಗೋಪಾಲ್ ಪಡೆದ 4 ವಿಕೆಟ್’ಗಳು..