ಇಂದಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಸೋಲುತ್ತಾರೋ ಆದರೆ ಟೀಂ ಇಂಡಿಯಾದ ಆಯ್ಕೆ ಸಮಿತಿ ಮಾತ್ರ ಇಂದು ಕನ್ನಡಿಗ ಕೆ.ಎಲ್​​ ರಾಹುಲ್​ನ ಮೇಲೆ ಹದ್ದಿನ ಕಣ್ಣಿಡಲಿದೆ. ಆತನ ಬ್ಯಾಟಿಂಗ್​​ ಅನ್ನ ಸಿರೀಯಸ್​​​​​ಆಗಿ ವೀಕ್ಷಿಸಲಿದೆ. ಅಷ್ಟಕ್ಕೂ ಆಯ್ಕೆ ಸಮಿತಿ ರಾಹುಲ್​ ಬಗ್ಗೆ ಅಷ್ಟು ತಲೆ ಕೆಡಸಿಕೊಳ್ಳಲು ಕಾರಣವೇನು..? ರಾಹುಲ್​​ ಮಾಡಿದ ತಪ್ಪಾದ್ರೂ ಏನು..? ಇಲ್ಲಿದೆ ವಿವರ 

ಕೆ.ಎಲ್​ ರಾಹುಲ್​​, ಸದ್ಯ ಟೀಂ ಇಂಡಿಯಾದ ಖಾಯಂ ಆಟಗಾರ. ಟೆಸ್ಟ್​​​ , ಒನ್​​​ಡೇ ಮತ್ತು ಟಿ20 ಮೂರು ಫಾರ್ಮೆಟ್​​​ನಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಮಾಹಾನ್​​ ಕ್ರಿಕೆಟಿಗ. ಆದ್ರೆ ರಾಹುಲ್​ ಟೆಸ್ಟ್​​​ ಫರ್ಮೆಟ್​​​ ಬಿಟ್ರೆ ಹೆಚ್ಚು ಯಶಸ್ಸು ಗಳಿಸಿರೋದು ಟಿ20 ಕ್ರಿಕೆಟ್​ನಲ್ಲಿ. ಬೆರಳೆಣಿಕೆಯಷ್ಟು ಪಂದ್ಯಗಳನ್ನಾಡಿದರೂ ವಿಶ್ವವವೇ ಮೆಚ್ಚುವಂಥಹ ಆಟವನ್ನಾಡಿದ್ದಾರೆ. ಅದರಲ್ಲೂ ಜಿಂಬಾಬ್ವೆ ವಿರುದ್ಧ ಈತ ಸಿಡಿಸಿದ ಶತಕ ಇನ್ನೂ ಅಭಿಮಾನಿಗಳ ಮನಸಿನಿಂದ ಮಾಸೇ ಇಲ್ಲ.

ಕೆ.ಎಲ್​​ ರಾಹುಲ್​​​ರ ಟಿ20 ಪ್ರದರ್ಶನ ಇಂತಿದೆ. ಇದುವರೆಗೂ 8 ಟಿ20 ಪಂದ್ಯಗಳನ್ನಾಡಿರುವ ರಾಹುಲ್​, 280 ರನ್​ಗಳನ್ನ ಗಳಿಸಿದ್ದಾರೆ. 56ರ ಸರಾಸರಿಯಲ್ಲಿ ಬ್ಯಾಟ್​​ ಮಾಡಿ 150.53 ಸ್ಟ್ರೈಕ್​​ ರೇಟ್​​ ಹೊಂದಿದ್ದಾರೆ. 1 ಶತಕ ಮತ್ತು 1 ಅರ್ಧ ಶತಕ ರಾಹುಲ್​ ಟಿ20 ರೆಕಾರ್ಡ್​ನಲ್ಲಿದೆ. ಜಿಂಬಾಬ್ವೆ ವಿರುದ್ಧ ಸಿಡಿಸಿದ 110 ಅವರ ಬೆಸ್ಟ್​​ ಇನ್ನಿಂಗ್ಸ್​​ ಆಗಿದೆ.

ರಾಹುಲ್'​​ರ ಈ ರೆಕಾರ್ಡ್​ ನೋಡಿದರೆ ರಾಹುಲ್​​ ಎಂಥ ಟಿ20 ಪ್ಲೇಯರ್​​​ ಎನ್ನುವುದು ಗೊತ್ತಾಗುತ್ತದೆ. ಆದ್ರೆ ಇಷ್ಟೆಲ್ಲಾ ರೆಕಾರ್ಡ್​ ಮಾಡಿದ್ರೂ ಕೆ.ಎಲ್​ ರಾಹುಲ್​​​'ಗೆ ಇಂದಿನ ಮ್ಯಾಚ್​​ನಲ್ಲಿ ತಮಬಾನೆ ಒತ್ತಡವಿದೆ. ತಂಡದಲ್ಲಿನ ಸ್ಥಾನಕ್ಕಾಗಿ ಹೋರಾಡಬೇಕಿದೆ. ಇಂದಿನ ಅವರ ಪ್ರದರ್ಶನದ ಮೇಲೆ ಅವರ ಕ್ರಿಕೆಟ್​​ ಭವಿಷ್ಯವೇ ಅಡಗಿದೆ.

ಉತ್ತಮ ರೆಕಾರ್ಡ್​ ಹೊಂದಿದ್ರೂ ರಾಹುಲ್​ಗೆ ಯಾಕೆ ಭಯ..?

ಅಷ್ಟಕ್ಕೂ ಕೆ.ಎಲ್​ ರಾಹುಲ್​​ ಇಂದು ರಾಹುಲ್​​ ಒತ್ತಡದಲ್ಲಿರೋದ್ಯಕೆ ಗೊತ್ತಾ..? ತಂಡದಲ್ಲಿರುವ ಸಾಲು ಸಾಲು ಓಪನ್ನರ್'​​​ಗಳು. ಹೌದು, ಟೀಂ ಇಂಡಿಯಾದಲ್ಲಿ ಸದ್ಯ ರಾಹುಲ್​​ ಸೇರಿದಂತೆ ರೋಹಿತ್​ ಶರ್ಮಾ, ಶಿಖರ್​​ ಧವನ್​ ಮತ್ತು , ಅಜಿಂಕ್ಯಾ ರಹಾನೆ ಸೀಮಿತ ಓವರ್​​ಗಳ ಫಾರ್ಮೆಟ್'​​ನಲ್ಲಿ ಸ್ಥಾನ ಪಡೆದಿದ್ದಾರೆ. ಕೆ.ಎಲ್​ ರಾಹುಲ್​ನನ್ನ ಹೊರತು ಪಡಿಸಿದ್ರೆ ಇನ್ನೆಲ್ಲಾರೂ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಆದ್ರೆ ಆಯ್ಕೆ ಸಮಿತಿ ನಾಲಕ್ಕು ಆರಂಭಿಕರನ್ನ ಪ್ರತೀ ಸರಣಿಯಲ್ಲೂ ಆಯ್ಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾಲ್ವರಲ್ಲಿ ಒಬ್ಬರಿಗೆ ಕೋಕ್​​​ ಕೊಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ಇದೇ ಕಾರಣಕ್ಕೆ ಎಂ.ಎಸ್​​​.ಕೆ ಪ್ರಸಾದ್​​​ ಕಣ್ಣು ರಾಹುಲ್​ ಮೇಲೆ ಬಿದ್ದಿದೆ.

ಇದೇ ತಿಂಗಳು ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭವಾಗ್ತಿದೆ. ಈ ಮಹತ್ವದ ಸರಣಿಗೆ ನಾಲ್ವರು ಆರಂಭಿಕರನ್ನ ಆಯ್ಕೆ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ ಆಯ್ಕೆ ಸಮಿತಿ ಫಾರ್ಮ್​ ಕಳೆದುಕೊಂಡು ಪರದಾಡುತ್ತಿರುವ ರಾಹುಲ್​ನನ್ನ ಇಂದು ಅಗ್ನಿ ಪರಿಕ್ಷೆಗೆ ದೂಡುತ್ತಿದೆ. ಇಂದು ಉತ್ತಮ ಪ್ರದರ್ಶನ ನೀಡಿದ್ರೆ ಮಾತ್ರ ರಾಹುಲ್​ ಆಸೀಸ್​​​ ವಿರುದ್ಧ ಆಡಲಿದ್ದಾರೆ. ಇಲ್ಲವಾದ್ರೆ ಸೀಮಿತ ಓವರ್​​ಗಳ ಫಾರ್ಮೆಟ್​​ನಿಂದಲೇ ಗೇಟ್​​ ಪಾಸ್​​​ ಕೊಡಲಾಗುತ್ತೆ.

ಒಟ್ಟಿನಲ್ಲಿ ಇಂದು ಕನ್ನಡಿಗನ ಅಗ್ನಿ ಪರೀಕ್ಷೆ ನಡೆಯೋದಂತೂ ನಿಜ. ಈ ಪರೀಕ್ಷೆಯಲ್ಲಿ ಪಾಸಾದ್ರೆ ಮಾತ್ರ ಉಳಿಗಾಲ ಇಲ್ಲವಾದ್ರೆ ಕೊಹ್ಲಿ ಭಂಟನಿಗೆ ಗೇಟ್​​ ಪಾಸ್​​​ ಗ್ಯಾರೆಂಟಿ. ಆದ್ರೆ ಹಾಗಾಗದಿರಲಿ ನಮ್ಮ ಕನ್ನಡಿಗ ಇಂದು ನಡೆಯೋ ಪಾಸಾಗಲಿ ಎಂಬ ಪ್ರಾರ್ಥನೆ ಕೋಟ್ಯಅಂತರ ಕನ್ನಡಿಗರ ಪ್ರಾರ್ಥನೆ.