ಪ್ರೊ ಕಬಡ್ಡಿ 2018: ಬೆಂಗಾಲ್ ಆರ್ಭಟಕ್ಕೆ ತಲೆಬಾಗಿದ ತಮಿಳ್ ತಲೈವಾಸ್!
ಚೆನ್ನೈನಲ್ಲಿ ನಡೆದ ತಮಿಳ್ ತಲೈವಾಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಹೋರಾಟದಲ್ಲಿ ತವರಿನ ತಂಡ ಹಿನ್ನಡೆ ಅನುಭವಿಸಿದೆ. ಬೆಂಗಾಲ್ ತಂಡದ ಆಲ್ರೌಂಡರ್ ಪ್ರದರ್ಶನಕ್ಕೆ ತಲೈವಾಸ್ ತಲೆಬಾಗಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್
ಚೆನ್ನೈ(ಅ.11): ಯುಪಿ ಯೋಧಾ ಹಾಗೂ ಪಾಟ್ನಾ ಪೈರೇಟ್ಸ್ ಪಂದ್ಯದ ಬಳಿಕ ನಡೆದ ಮತ್ತೊಂದು ರೋಚಕ ಹೋರಾಟದಲ್ಲಿ ಬೆಂಗಾಲ್ ವಾರಿಯರ್ಸ್ ಗೆಲುವಿ ನಗೆ ಬೀರಿದೆ. ತಮಿಳ್ ತಲೈವಾಸ್ ವಿರುದ್ಧ ಹೋರಾಡಿದ ಬೆಂಗಾಲ್ 36-27 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.
ಮೊದಲಾರ್ಧ ಆರಂಭಗೊಳ್ಳುತ್ತಿದ್ದಂತೆ ತಮಿಳ್ ತಲೈವಾಸ್ ತಂಡದ ಜಸ್ವೀರ್ ಸಿಂಗ್ ಅಂಕ ಖಾತೆ ಆರಂಭಿಸಿದರು. ಇಷ್ಟೇ ಅಲ್ಲ ಜಸ್ವೀರ್ ಅದ್ಬುತ ರೈಡ್ನಿಂದ ಆರಂಭದಲ್ಲಿ 7-5 ಅಂಕಗಳ ಮುನ್ನಡೆ ಪಡೆದುಕೊಂಡಿತು. ಆದರೆ ಬೆಂಗಾಲ್ ಅಷ್ಟೇ ವೇಗದಲ್ಲಿ ಕಮ್ಬ್ಯಾಕ್ ಮಾಡಿತು.
ಮೊದಲಾರ್ಧದ ಅಂತ್ಯದಲ್ಲಿ ಬೆಂಗಾಲ್ 18-15 ಅಂಕಗಳ ಅಂತರದ ಮುನ್ನಡೆ ಸಾಧಿಸಿತು. ಇನ್ನು ದ್ವಿತೀಯಾರ್ಧದಲ್ಲಿ ತಮಿಳ್ ತಲೈವಾಸ್ ಮುನ್ನಡೆಗಾಗಿ ಹೋರಾಟ ನಡೆಸಿತು. ಆದರೆ ಸಾಧ್ಯವಾಗಲಿಲ್ಲ. ಬೆಂಗಾಲ್ ತಂಡದ ಮನೀಂದರ್ ಸಿಂಗ್ ಒಟ್ಟು 9 ರೈಡ್ ಪಾಯಿಂಟ್ಸ್ ಗಳಿಸೋ ಮೂಲಕ ತಂಡದ ಮುುನ್ನಡೆ ಅಂತರ ಹೆಚ್ಚಿಸಿದರು.
ಪಂದ್ಯ ಮುಕ್ತಾಯದ ವೇಳೆಗೆ ಬೆಂಗಾಲ್ ವಾರಿಯರ್ಸ್ 36-27 ಅಂತರದ ಗೆಲುವು ಸಾಧಿಸಿತು. ಇಷ್ಟೇ ಅಲ್ಲ ತಮಿಳ್ ತಲೈವಾಸ್ ತವರಿನಲ್ಲಿ ಗೆಲುವು ಸಾಧಿಸಿದ ಬೆಂಗಾಲ್ ಗೆಲುವಿನ ಕೇಕೇ ಹಾಕಿತು.