ಕಳೆದ ಒಂದೂವರೆ ವರ್ಷದಿಂದ ಲಯಕ್ಕೆ ಮರಳದ ಕಾರಣ ಪ್ರಣವ್, ಓದಿನ ಕಡೆ ಹೆಚ್ಚಿನ ಗಮನ ಹರಿಸಲು ಕ್ರಿಕೆಟ್‌'ಗೆ ವಿದಾಯ ಹೇಳಿದ್ದಾರೆ. ಕಳಪೆ ಫಾರ್ಮ್ ಕಾರಣ ಅವರನ್ನು ಮುಂಬೈ ಅಂಡರ್-16 ತಂಡದಿಂದ ಕೈಬಿಡಲಾಗಿತ್ತು.

ಮುಂಬೈ(ಡಿ.30): ಎಷ್ಟೇ ಪ್ರಯತ್ನಿಸಿದರೂ ಲಯಕ್ಕೆ ಮರಳದ ಹಿನ್ನೆಲೆಯಲ್ಲಿ ವಿಶ್ವದಾಖಲೆ ವೀರ, ಮುಂಬೈನ ಪ್ರಣವ್ ಧನವಾಡೆ ಕ್ರಿಕೆಟ್‌'ಗೆ ಅಚ್ಚರಿಯ ವಿದಾಯ ಘೋಷಿಸಿದ್ದಾರೆ.

Add Asianetnews Kannada as a Preferred SourcegooglePreferred

2016ರಲ್ಲಿ ತಮ್ಮ ಶಾಲೆಯ ಅಂಡರ್ 16 ತಂಡವನ್ನು ಪ್ರತಿನಿಧಿಸಿದ್ದ ಆಟೋ ಚಾಲಕನ ಮಗ ಪ್ರಣವ್, ಒಂದೇ ಇನ್ನಿಂಗ್ಸ್'ನಲ್ಲಿ 1009 ರನ್ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ್ದರು. ಪ್ರಣವ್ ಸಾಧನೆ ಪರಿಗಣಿಸಿ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ತಿಂಗಳಿಗೆ ₹10,000 ವಿದ್ಯಾರ್ಥಿ ವೇತನ ಸಹ ನೀಡುತ್ತಿದೆ.

ಆದರೆ, ಕಳೆದ ಒಂದೂವರೆ ವರ್ಷದಿಂದ ಲಯಕ್ಕೆ ಮರಳದ ಕಾರಣ ಪ್ರಣವ್, ಓದಿನ ಕಡೆ ಹೆಚ್ಚಿನ ಗಮನ ಹರಿಸಲು ಕ್ರಿಕೆಟ್‌'ಗೆ ವಿದಾಯ ಹೇಳಿದ್ದಾರೆ. ಕಳಪೆ ಫಾರ್ಮ್ ಕಾರಣ ಅವರನ್ನು ಮುಂಬೈ ಅಂಡರ್-16 ತಂಡದಿಂದ ಕೈಬಿಡಲಾಗಿತ್ತು. ಎಷ್ಟೇ ಪ್ರಯತ್ನಿಸಿದರೂ ಲಯಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ಬಳಿಕ ಬೆಂಗಳೂರಿನಲ್ಲಿ ಭಾರತ ಕಿರಿಯರ ತಂಡದ ಕೋಚ್ ದ್ರಾವಿಡ್‌'ರಿಂದ ಮಾರ್ಗದರ್ಶನ ಪಡೆದರೂ ಪ್ರಯೋಜನವಾಗಿರಲಿಲ್ಲ.