ಬೆಂಗಳೂರು(ಅ.06): ಮಲೇಷ್ಯಾದಕುವಾಂಟಾನ್ನಲ್ಲಿಇದೇತಿಂಗಳ 20ರಿಂದಆರಂಭಗೊಳ್ಳಲಿರುವಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿಪಾಲ್ಗೊಳ್ಳಲಿರುವಭಾರತತಂಡವನ್ನುಪ್ರಕಟಿಸಲಾಗಿದ್ದು, ಪಿ.ಆರ್. ಶ್ರೀಜೇಶ್ ತಂಡವನ್ನುಮುನ್ನಡೆಸಲಿದ್ದರೆ, ತಂಡದಉಪನಾಯಕನಾಗಿಮನ್ಪ್ರೀತ್ ಸಿಂಗ್ ಆಯ್ಕೆಯಾಗಿದ್ದಾರೆ.
ಇನ್ನುಗಾಯದಸಮಸ್ಯೆಗೆಸಿಲುಕಿರುವರಾಜ್ಯದಹಿರಿಯಆಟಗಾರವಿ.ಆರ್. ರಘುನಾಥ್ಗೆವಿಶ್ರಾಂತಿನೀಡಲಾಗಿದ್ದರೆ, ಎಸ್.ಕೆ. ಉತ್ತಪ್ಪ, ನಿಕಿನ್ ತಿಮ್ಮಯ್ಯಹಾಗೂಎಸ್.ವಿ. ಸುನೀಲ್ ಆಯ್ಕೆಯಾಗಿದ್ದಾರೆ. ರಘುನಾಥ್ ಬದಲಿಗೆಸನ್ಸಾರ್ಪುರ್ನಡೆಫೆಂಡರ್ ಜಸ್ಜೀತ್ ಸಿಂಗ್ ಕುಲಾರ್ ಅವರಿಗೆಅವಕಾಶನೀಡಲಾಗಿದೆ.
ಫಾರ್ವರ್ಡ್ ಆಟಗಾರರಾದಆಕಾಶ್ದೀಪ್ ಸಿಂಗ್, ರಮಣದೀಪ್ ಅವರಿಗೂವಿಶ್ರಾಂತಿನೀಡಲಾಗಿದ್ದು, ಅವರಿಬ್ಬರಬದಲಿಗೆತಲ್ವಿಂದರ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ್ ಅವರಿಗೆಅವಕಾಶನೀಡಲಾಗಿದೆ. ಇವರಜತೆಯಲ್ಲಿಯವಗೋಲ್ ಕೀಪರ್ ಆಕಾಶ್ ಚಿಕ್ಟೆಅವರಿಗೆತಂಡದ 2ನೇಗೋಲ್ ಕೀಪರ್ ಸ್ಥಾನಲಭಿಸಿದೆ.
ದೀರ್ಘಾವಧಿಯನಂತರಬೀರೇಂದ್ರಸಿಂಗ್ ಲಾಕ್ರಾಅವರಿಗೆತಂಡಕ್ಕೆಅವಕಾಶನೀಡಲಾಗಿದೆ. ಮೊಣಕಾಲುಗಾಯದಿಂದಾಗಿಲಾಕ್ರಾಅವರು, ರಿಯೊಒಲಿಂಪಿಕ್ಸ್ಗೆಅಲಭ್ಯರಾಗಿದ್ದರು.
ತಂಡಇಂತಿದೆ
ಗೋಲ್ಕೀಪರ್ಸ್: ಪಿ.ಆರ್. ಶ್ರೀಜೇಶ್ (ನಾಯಕ), ಆಕಾಶ್ ಚಿಕ್ಟೆ; ಡಿಫೆಂಡರ್ಸ್: ರೂಪಿಂದರ್ ಪಾಲ್ ಸಿಂಗ್, ಪ್ರದೀಪ್ ಮೋರ್, ಜಸ್ಪ್ರೀತ್ ಸಿಂಗ್ ಕುಲಾರ್, ಬೀರೇಂದ್ರಲಾಕ್ರಾ, ಕೊಠಾಜಿತ್ ಸಿಂಗ್, ಸುರೇಂದರ್ ಕುಮಾರ್; ಮಿಡ್ಫೀಲ್ಡರ್ಸ್: ಚಿಂಗ್ಲೇಸಾನಾಸಿಂಗ್ ಕಂಗುಜಾಮ್, ಸರ್ದಾರ್ ಸಿಂಗ್, ಮನ್ಪ್ರೀತ್ ಸಿಂಗ್, ಎಸ್.ಕೆ. ಉತ್ತಪ್ಪ, ದೇವೀಂದರ್ ವಾಲ್ಮೀಕಿ; ಫಾರ್ವರ್ಡ್ಸ್: ತಲ್ವಿಂದರ್ ಸಿಂಗ್, ಎಸ್.ವಿ. ಸುನಿಲ್, ಲಲಿತ್ ಕುಮಾರ್ ಉಪಾಧ್ಯಾಯ್, ನಿಕ್ಕಿನ್ ತಿಮ್ಮಯ್ಯ, ಅಫ್ಫಾನ್ ಯೂಸುಫ್.
