ಪಾಕ್ ನಾಯಕನಿಗೆ ಭಾರೀ ಹಣದ ಆಮೀಷವೊಟ್ಟಿದ್ದ ಬುಕ್ಕಿ..!
‘ಅವರು ನೀಡಿದ ಆಹ್ವಾನವನ್ನು ನಾನು ತಿರಸ್ಕರಿಸಿದೆ. ತಕ್ಷಣ ಈ ವಿಷಯವನ್ನು ಭದ್ರತಾ ಸಿಬ್ಬಂದಿ ಹಾಗೂ ಭ್ರಷ್ಟಾಚಾರ ನಿಯಂತ್ರಣ ಅಧಿಕಾರಿಗಳ ಗಮನಕ್ಕೆ ತಂದೆ’ ಎಂದು ಸರ್ಫರಾಜ್ ಮಾಹಿತಿ ನೀಡಿದ್ದಾರೆ.
ಕರಾಚಿ(ಅ.21): ಶ್ರೀಲಂಕಾ ವಿರುದ್ಧ ಯುಎಇನಲ್ಲಿ ನಡೆಯುತ್ತಿರುವ ಏಕದಿನ ಸರಣಿ ವೇಳೆ ಬುಕ್ಕಿಗಳು ನನ್ನನ್ನು ಸಂಪರ್ಕಿಸಿದ್ದರೂ ಎಂಬ ಆಘಾತಕಾರಿ ಸಂಗತಿಯನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಬಹಿರಂಗಗೊಳಿಸಿದ್ದಾರೆ.
‘ಅವರು ನೀಡಿದ ಆಹ್ವಾನವನ್ನು ನಾನು ತಿರಸ್ಕರಿಸಿದೆ. ತಕ್ಷಣ ಈ ವಿಷಯವನ್ನು ಭದ್ರತಾ ಸಿಬ್ಬಂದಿ ಹಾಗೂ ಭ್ರಷ್ಟಾಚಾರ ನಿಯಂತ್ರಣ ಅಧಿಕಾರಿಗಳ ಗಮನಕ್ಕೆ ತಂದೆ’ ಎಂದು ಸರ್ಫರಾಜ್ ಮಾಹಿತಿ ನೀಡಿದ್ದಾರೆ.
ಯುಎಇ ಸುರಕ್ಷಿತ ಸ್ಥಳ, ಇಲ್ಲಿನ ನಿರ್ಭಯವಾಗಿ ಪಂದ್ಯಗಳನ್ನು ಆಯೋಜಿಸಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದ ಪಾಕಿಸ್ತಾನ ಕಿಕೆಟ್ ಮಂಡಳಿ ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದೆ. ಸರ್ಫರಾಜ್'ಗೆ ಫಿಕ್ಸಿಂಗ್ ನಡೆಸುವಂತೆ ಕೇಳಿಕೊಂಡ ಬುಕ್ಕಿ, ದುಬೈನಲ್ಲಿ ನೆಲೆಸಿದ್ದು, ಆಟಗಾರರಿಗೆ ಪರಿಚಯಸ್ಥ ಎಂದು ಹೇಳಲಾಗಿದೆ.