ವಿಜಯ್ ಹಜಾರೆ: ಕ್ವಾರ್ಟರ್'ಫೈನಲ್'ಗೂ ಕರುಣ್ ನಾಯಕ
ರಘುರಾಮ್ ಭಟ್ ನೇತೃತ್ವದ ಆಯ್ಕೆ ಸಮಿತಿಯೂ 15 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದ್ದು, ಗಾಯದಿಂದ ಚೇತರಿಸಿಕೊಂಡಿರುವ ಸ್ಟುವರ್ಟ್ ಬಿನ್ನಿ, ಸಿ.ಎಂ. ಗೌತಮ್, ಎಸ್. ಅರವಿಂದ್ ತಂಡಕ್ಕೆ ಮರಳಿದ್ದಾರೆ. ಆದರೆ ಕಾಯಂ ನಾಯಕ ವಿನಯ್ ಕುಮಾರ್ ಗಾಯದಿಂದಾಗಿ ಅಲಭ್ಯರಾಗಿದ್ದಾರೆ.
ಬೆಂಗಳೂರು(ಫೆ.17): ವಿನಯ್ ಕುಮಾರ್ ಅನುಪಸ್ಥಿತಿಯಲ್ಲಿ ಮತ್ತೊಮ್ಮೆ ಕರುಣ್ ನಾಯರ್'ಗೆ ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುವ ಅವಕಾಶ ಒದಗಿ ಬಂದಿದೆ.
ಗುಂಪು ಹಂತದ ಕೊನೆಯ ಪಂದ್ಯಕ್ಕೆ ಗಾಯದ ಸಮಸ್ಯೆಯಿಂದಾಗಿ ರಾಜ್ಯ ತಂಡದ ನಾಯಕ ವಿನಯ್ ಹೊರಗುಳಿದಿದ್ದರು. ಇದೀಗ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಹೈದರಾಬಾದ್ ವಿರುದ್ಧ ನಡೆಯಲಿರುವ ಕ್ವಾರ್ಟರ್'ಫೈನಲ್ಸ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಕರುಣ್ ನಾಯರ್ ಮುನ್ನಡೆಸಲಿದ್ದಾರೆ.
ರಘುರಾಮ್ ಭಟ್ ನೇತೃತ್ವದ ಆಯ್ಕೆ ಸಮಿತಿಯೂ 15 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದ್ದು, ಗಾಯದಿಂದ ಚೇತರಿಸಿಕೊಂಡಿರುವ ಸ್ಟುವರ್ಟ್ ಬಿನ್ನಿ, ಸಿ.ಎಂ. ಗೌತಮ್, ಎಸ್. ಅರವಿಂದ್ ತಂಡಕ್ಕೆ ಮರಳಿದ್ದಾರೆ. ಆದರೆ ಕಾಯಂ ನಾಯಕ ವಿನಯ್ ಕುಮಾರ್ ಗಾಯದಿಂದಾಗಿ ಅಲಭ್ಯರಾಗಿದ್ದಾರೆ.
ತಂಡ: ಕರುಣ್ ನಾಯರ್ (ನಾಯಕ), ಮಯಾಂಕ್, ಸಮರ್ಥ್, ಬಿನ್ನಿ, ಗೌತಮ್, ಪವನ್, ಕೆ. ಗೌತಮ್, ಶ್ರೇಯಸ್, ಪ್ರಸಿದ್ಧ್, ಅರವಿಂದ್, ರೋನಿತ್, ಸುಚಿತ್, ಪ್ರದೀಪ್, ದೇವದತ್ತ, ಶರತ್.