ಟೀಂ ಇಂಡಿಯಾ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲಿದೆ
ಇನ್ನು ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ಹಂತಕ್ಕೇರಲಿದೆ ಎಂದಿರುವ 39 ವರ್ಷದ ಮಾಜಿ ವಿಕೆಟ್ ಕೀಪರ್, ಶ್ರೀಲಂಕಾ ತಂಡದ ಬಗ್ಗೆ ತುಟಿಬಿಚ್ಚಿಲ್ಲ.
ಲಂಡನ್(ಮೇ.30): ಟೀಂ ಇಂಡಿಯಾವು ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಸಶಕ್ತವಾಗಿದೆ ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ್ ಸಂಗಕ್ಕರ ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾದ ತಂಡಗಳಲ್ಲಿ ಭಾರತವು ಎಲ್ಲಾ ವಿಭಾಗದಲ್ಲೂ ಬಲಿಷ್ಟವಾಗಿದೆ. ಸಮತೋಲನದಿಂದ ಕೂಡಿದ ತಂಡವು ಮತ್ತೊಮ್ಮೆ ಐಸಿಸಿ ಚಾಂಪಿಯನ್ ಟ್ರೋಫಿ ಎತ್ತಿಹಿಡಿಯಲಿದೆ ಎಂದು ಲಂಕಾ ಮಾಜಿ ವಿಕೆಟ್ ಕೀಪರ್ ಹೇಳಿದ್ದಾರೆ.
ಐಪಿಎಲ್ ಕಳಪೆ ಪ್ರದರ್ಶನದಿಂದ ವಿರಾಟ್ ಕೊಹ್ಲಿ ಪುಟಿದೇಳುವುದಂತೂ ಖಂಡಿತ. ಇನ್ನು ಸ್ಪಿನ್'ದ್ವಯರಾದ ಅಶ್ವಿನ್ ಹಾಗೂ ಜಡೇಜಾ ಅವರಂತೂ ಮತ್ತೊಮ್ಮೆ ಜಾದು ಮಾಡುವುದರಲ್ಲಿ ಅನುಮಾನವೇ ಇಲ್ಲ. ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಸಮತೋಲನದಿಂದ ಕೂಡಿರುವ ಟೀಂ ಇಂಡಿಯಾ ಮತ್ತೊಮ್ಮೆ ತನ್ನಲ್ಲೇ ಪ್ರಶಸ್ತಿಯನ್ನು ಉಳಿಸಿಕೊಳ್ಳಲಿದೆ ಎಂದು ಸಂಗಕ್ಕರ ಹೇಳಿದ್ದಾರೆ.
ಇನ್ನು ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ಹಂತಕ್ಕೇರಲಿದೆ ಎಂದಿರುವ 39 ವರ್ಷದ ಮಾಜಿ ವಿಕೆಟ್ ಕೀಪರ್, ಶ್ರೀಲಂಕಾ ತಂಡದ ಬಗ್ಗೆ ತುಟಿಬಿಚ್ಚಿಲ್ಲ. ಇದು ಲಂಕಾ ಅಭಿಮಾನಿಗಳನ್ನು ಅಚ್ಚರಿಗೆ ಮೂಡಿಸಿದ್ದಂತೂ ಸುಳ್ಳಲ್ಲ.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾವು 2013ರಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿ ಟೀಂ ಇಂಡಿಯಾವು ಎಡ್ಜ್'ಬಾಸ್ಟನ್'ನಲ್ಲಿ ಜೂನ್.4ರಂದು ತನ್ನ ಮೊದಲ ಅಭಿಯಾನವನ್ನು ಪಾಕಿಸ್ತಾನದ ವಿರುದ್ಧ ಆರಂಭಿಸಲಿದೆ.