ನಾನು ನಿಜವಾಗಿಯೂ ಲಕ್ಕಿ ಅದಕ್ಕೆ ಇನ್ನೂ ಬದುಕಿದ್ದೇನೆ ಎಂದ ಕರುಣ್ ನಾಯರ್

ಚೆನ್ನೈ(ಡಿ.20): ಚೆನ್ನೈ ಟೆಸ್ಟ್`ನ ನಿನ್ನೆಯ ಆಟ ಎಂದೆಂದಿಗೂ ನೆನಪಿನಲ್ಲಿ ಉಳಿಯುವಂಥದ್ದು. ಕರ್ನಾಟಕದ ಬ್ಯಾಟ್ಸ್`ಮನ್ ಕರುಣ್ ನಾಯರ್ ರನ್ ಹೊಳೆ ಹರಿಸಿದ ಸಂಭ್ರಮದ ದಿನ. ಕರುಣ್ ನಾಯರ್ ತ್ರಿಶತಕವನ್ನ ಇಡೀ ದೇಶದ ಅಭಿಮಾನಿಗಳು ಸಂಭ್ರಮಿಸಿದ್ಧಾರೆ. ಇಂತಹ ಸಂಭ್ರಮದಲ್ಲೂ ಕರುಣ್ ನಾಯರ್ ತಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣವೊಂದನ್ನ ಮೆಲುಕು ಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

`ಈ ವರ್ಷಾರಂಭದಲ್ಲಿ ಕೇರಳದಲ್ಲಿ ಬೋಟ್ ಅಪಘಾತದಲ್ಲಿ ಪಾರಾಗಿ ಬಂದ ಬಗ್ಗೆ ಕರುಣ್ ನಾಯರ್ ಹೇಳಿಕೊಂಡಿದ್ದಾರೆ. `ನನಗೆ ಈಜು ಬರುತ್ತಿರಲಿಲ್ಲ. ಅಲ್ಲಿದ್ದ ಜನ ನನ್ನನ್ನ ರಕ್ಷಿಸಿದರು. ನಾನು ನಿಜವಾಗಿಯೂ ಲಕ್ಕಿ ಅದಕ್ಕೆ ಇನ್ನೂ ಬದುಕಿದ್ದೇನೆ' ಎಂದಿದ್ದಾರೆ.

ಇದೇವೇಳೆ, ಮೈದಾನದಲ್ಲಿ ತನ್ನ ಬೆನ್ನು ತಟ್ಟಿ ಬೆಂಬಲಿಸಿದ ಕೆ.ಎಲ್. ರಾಹುಲ್, ಜಡೇಜಾ ಮತ್ತು ಅಶ್ವಿನ್ ಅವರನ್ನ ಕರುಣ್ ಸ್ಮರಿಸಿದ್ಧಾರೆ.