Asianet Suvarna News Asianet Suvarna News

ಮೈಸೂರು ವಾರಿಯರ್ಸ್'ಗೆ ಕರುಣ್ ನಾಯಕ

ಆಗಸ್ಟ್ ತಿಂಗಳಾಂತ್ಯಕ್ಕೆ ಕರುಣ್ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಮೈಸೂರು ತಂಡದ ಮಾಲೀಕರು ತಿಳಿಸಿದ್ದಾರೆ.

Karun Nair Appointed as Mysuru Warriors Captain

ಬೆಂಗಳೂರು(ಆ.11): ಮುಂದಿನ ತಿಂಗಳು 1ರಿಂದ ಆರಂಭವಾಗಲಿರುವ ಕರ್ನಾಟಕ ಪ್ರೀಮಿಯರ್ ಲೀಗ್ ಟಿ20 ಆರನೇ ಆವೃತ್ತಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಕರುಣ್ ನಾಯರ್ ಮುನ್ನಡೆಸಲಿದ್ದಾರೆ.

ಭಾರತ ತಂಡದ ಆಟಗಾರ ಕರುಣ್, 2017ರ ಐಪಿಎಲ್'ನಲ್ಲಿ ಡೆಲ್ಲಿ ಡೇರ್'ಡೆವಿಲ್ಸ್ ತಂಡವನ್ನು ಕೆಲ ಪಂದ್ಯಗಳ ಮಟ್ಟಿಗೆ ಮುನ್ನಡೆಸಿದ್ದರು. ಭಾರತ 'ಎ' ಟೆಸ್ಟ್ ತಂಡದ ನಾಯಕರಾಗಿರುವ ಕರುಣ್, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಆತಿಥೇಯ ತಂಡದ ವಿರುದ್ಧ ನಾಲ್ಕು ದಿನಗಳ ಎರಡು ಟೆಸ್ಟ್ ಪಂದ್ಯಗಳನ್ನಾಡಲಿದ್ದಾರೆ.

ಆಗಸ್ಟ್ ತಿಂಗಳಾಂತ್ಯಕ್ಕೆ ಕರುಣ್ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಮೈಸೂರು ತಂಡದ ಮಾಲೀಕರು ತಿಳಿಸಿದ್ದಾರೆ. ಆಗಸ್ಟ್ 14ರಿಂದ ಮೈಸೂರು ವಾರಿಯರ್ಸ್ ತಂಡ ಅಭ್ಯಾಸ ಶಿಬಿರ ಆರಂಭಿಸಲಿದೆ.  

Follow Us:
Download App:
  • android
  • ios