ಐವರು ಬ್ಯಾಟ್ಸ್​ಮನ್​ಗಳು ಅರ್ಧಶತಕ ದಾಖಲಿಸಿದ್ರು. ಸಮರ್ಥ್​, ಅಗರ್ವಾಲ್, ಕರುಣ್ ನಾಯರ್, ಅಬ್ಬಾಸ್​ ಮತ್ತು ಸಿಎಂ ಗೌತಮ್ ತಲಾ ಹಾಫ್ ಸೆಂಚುರಿ ಬಾರಿಸಿದ್ರು.

ಕೋಲ್ಕತ್ತಾದಲ್ಲಿ ನಡೆಯುತ್ತಿರುವ ದೆಹಲಿ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ 324 ರನ್ ಮುನ್ನಡೆ ಸಾಧಿಸಿದೆ. ಡೆಲ್ಲಿ ತಂಡವನ್ನ 90 ರನ್​ಗೆ ಆಲೌಟ್ ಮಾಡಿದ್ದ ಕರ್ನಾಟಕ, ಮೊದಲ ಇನ್ನಿಂಗ್ಸ್​​ನಲ್ಲಿ 414 ರನ್​ಗೆ ಆಲೌಟ್​ ಆಗಿ ಭಾರೀ ಮುನ್ನಡೆ ಪಡೆಯಿತು. ಐವರು ಬ್ಯಾಟ್ಸ್​ಮನ್​ಗಳು ಅರ್ಧಶತಕ ದಾಖಲಿಸಿದ್ರು. ಸಮರ್ಥ್​, ಅಗರ್ವಾಲ್, ಕರುಣ್ ನಾಯರ್, ಅಬ್ಬಾಸ್​ ಮತ್ತು ಸಿಎಂ ಗೌತಮ್ ತಲಾ ಹಾಫ್ ಸೆಂಚುರಿ ಬಾರಿಸಿದ್ರು. ಹೀಗಾಗಿ ಕರ್ನಾಟಕ ಬೃಹತ್ ಮೊತ್ತ ಕೂಡಿಹಾಕಲು ಸಾಧ್ಯವಾಯ್ತು. ಇನ್ನು ಎರಡು ದಿನದ ಆಟ ಬಾಕಿ ಇರುವುದರಿಂದ ಕರ್ನಾಟಕ ಗೆಲ್ಲುವ ಸಾಧ್ಯತೆ ಹೆಚ್ಚಿದೆ.