ದೆಹಲಿಯಲ್ಲಿ ರಾಥೋಡ್‌ರನ್ನು ಭೇಟಿ ಮಾಡಿದ ಪರಮೇಶ್ವರ್, ರಾಜ್ಯದಲ್ಲಿ ಕ್ರೀಡಾಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಿದರು. ‘ಕೆಂಪೇಗೌಡ ಅಂ.ರಾ. ವಿಮಾನ ನಿಲ್ದಾಣದ ಸಮೀಪ ವಿದ್ಯಾನಗರದಲ್ಲಿ ಕ್ರೀಡಾ ಸಂಕೀರ್ಣದ ಯೋಜನೆ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ₹ 70 ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ.ಖೇಲೋ ಇಂಡಿಯಾ ಯೋಜನೆಯಡಿ ಈ ಕಾರ್ಯಕ್ರಮಕ್ಕೆ ಅನುದಾನ ನೀಡಬೇಕು’ ಎಂದು ಪರಮೇಶ್ವರ್ ಕೇಳಿಕೊಂಡರು.  

ನವದೆಹಲಿ[ಸೆ.20]: ರಾಜ್ಯದಲ್ಲಿ ನೂತನ ಕ್ರೀಡಾಸಂಕೀರ್ಣ ನಿರ್ಮಾಣ ಮತ್ತು ರಾಜ್ಯದಲ್ಲಿ ಕ್ರೀಡಾಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ₹ 70 ಕೋಟಿ ಅನುದಾನ ನೀಡುವಂತೆ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ್, ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಬಳಿ ಮನವಿ ಮಾಡಿದ್ದಾರೆ. 

Add Asianetnews Kannada as a Preferred SourcegooglePreferred

ಬುಧವಾರ ದೆಹಲಿಯಲ್ಲಿ ರಾಥೋಡ್‌ರನ್ನು ಭೇಟಿ ಮಾಡಿದ ಪರಮೇಶ್ವರ್, ರಾಜ್ಯದಲ್ಲಿ ಕ್ರೀಡಾಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಿದರು. ‘ಕೆಂಪೇಗೌಡ ಅಂ.ರಾ. ವಿಮಾನ ನಿಲ್ದಾಣದ ಸಮೀಪ ವಿದ್ಯಾನಗರದಲ್ಲಿ ಕ್ರೀಡಾ ಸಂಕೀರ್ಣದ ಯೋಜನೆ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ₹ 70 ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ. ಖೇಲೋ ಇಂಡಿಯಾ ಯೋಜನೆಯಡಿ ಈ ಕಾರ್ಯಕ್ರಮಕ್ಕೆ ಅನುದಾನ ನೀಡಬೇಕು’ ಎಂದು ಪರಮೇಶ್ವರ್ ಕೇಳಿಕೊಂಡರು. 

Scroll to load tweet…

ರಾಜ್ಯ ಕ್ರೀಡಾ ಸಚಿವರ ಮನವಿಗೆ ರಾಥೋಡ್ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.