ಮುಂಬೈ ಪರ ಚಾಣಾಕ್ಷ ದಾಳಿ ನಡೆಸಿದ ಜಸ್‌ಪ್ರೀತ್ ಬುಮ್ರಾ ಮುಂಬೈಗೆ ಸ್ಮರಣೀಯ ಗೆಲುವು ತಂದು ಕೊಡುವಲ್ಲಿ ಯಶಸ್ವಿಯಾದರು.

ಬೆಂಗಳೂರು(ಏ.30) ಗುಜರಾತ್ಲಯನ್ಸ್ಹಾಗೂಮುಂಬೈಇಂಡಿಯನ್ಸ್ನಡುವಿನಪಂದ್ಯವು 10ನೇಆವೃತ್ತಿಯಐಪಿಎಲ್'ನಲ್ಲಿಮೊದಲಸೂಪರ್ಓವರ್ಗೆಸಾಕ್ಷಿಯಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂಬೈ ಇಂಡಿಯನ್ಸ್ ತಂಡ ಅಂತಿಮ ಓವರ್'ನಲ್ಲಿ ಗೆಲ್ಲಲು 11ರನ್'ಗಳ ಅವಶ್ಯಕತೆಯಿತ್ತು. ಆದರೆ ಇರ್ಫಾನ್ ಪಠಾಣ್ ಶಿಸ್ತುಬದ್ಧ ದಾಳಿ ಹಾಗೂ ರವೀಂದ್ರ ಜಡೇಜಾ ಅವರ ಚುರುಕಿನ ಕ್ಷೇತ್ರರಕ್ಷಣೆಯ ಫಲದಿಂದ ರೋಹಿತ್ ಪಡೆಯನ್ನು ಕೇವಲ 10ರನ್'ಗೆ ನಿಯಂತ್ರಿಸುವಲ್ಲಿ ರೈನಾ ಪಡೆ ಯಶಸ್ವಿಯಾಯಿತು. ಹೀಗಾಗಿ ಉಭಯ ತಂಡಗಳುಸೂಪರ್ಓವರ್ಮೊರೆಹೋಗಬೇಕಾಯಿತು.

ತೀವ್ರ ಕುತೂಹಲ ಕೆರಳಿಸಿದ್ದ ಪ್ರಸಕ್ತ ಟೂರ್ನಿಯ ಮೊದಲ ಸೂಪರ್ ಓವರ್'ನಲ್ಲಿಮೊದಲುಬ್ಯಾಟ್ಮಾಡಿದಮುಂಬೈ ಕಿರಾನ್ ಪೊಲ್ಲಾರ್ಡ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 11 ರನ್ಗಳಿಸಿತು. ಇದಕ್ಕುತ್ತರವಾಗಿ ಗುಜರಾತ್ ಲಯನ್ಸ್ ತಂಡ ಕೇವಲ 6 ರನ್ ಗಳಿಸಲಷ್ಟೇ ಶಕ್ತವಾಯಿತು. ಮುಂಬೈ ಪರ ಚಾಣಾಕ್ಷ ದಾಳಿ ನಡೆಸಿದಜಸ್ಪ್ರೀತ್ಬುಮ್ರಾಮುಂಬೈಗೆ ಸ್ಮರಣೀಯ ಗೆಲುವು ತಂದು ಕೊಡುವಲ್ಲಿ ಯಶಸ್ವಿಯಾದರು.

ಆ ಥ್ರಿಲ್ಲಿಂಗ್ ಸೂಪರ್ ಓವರ್ ನಿಮಗಾಗಿ....