ಇವರಿಬ್ಬರು ಸದ್ಯ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್​ ಆಡುತ್ತಿಲ್ಲ. ಹೀಗಾಗಿ ನವೆಂಬರ್ 21ರಿಂದ ರಾಜಸ್ಥಾನ ವಿರುದ್ಧ ಡೆಲ್ಲಿ ತಂಡ ರಣಜಿ ಪಂದ್ಯವಾಡಲಿದೆ.

ವಿಶಾಖಪಟ್ಟಣ(ನ.18): ಇಂಗ್ಲೆಂಡ್​​​ ವಿರುದ್ಧದ ಮೊದಲೆರಡು ಟೆಸ್ಟ್​​​ ಸರಣಿಗೆ ಆಯ್ಕೆಯಾಗಿದ್ದ ಡೆಲ್ಲಿ ಆಟಗಾರರಾದ ಇಶಾಂತ್​​​ ಶರ್ಮಾ ಹಾಗೂ ಗೌತಮ್​​​​ ಗಂಭೀರ್​ ಅವರನ್ನ ರಣಜಿ ಟ್ರೋಫಿ ಪಂದ್ಯವಾಡಲು ಅನುವು ಮಾಡಿಕೊಡುವ ಸಾಧ್ಯತೆ ಇದೆ.

ಇವರಿಬ್ಬರು ಸದ್ಯ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್​ ಆಡುತ್ತಿಲ್ಲ. ಹೀಗಾಗಿ ನವೆಂಬರ್ 21ರಿಂದ ರಾಜಸ್ಥಾನ ವಿರುದ್ಧ ಡೆಲ್ಲಿ ತಂಡ ರಣಜಿ ಪಂದ್ಯವಾಡಲಿದೆ.

ಆ ಪಂದ್ಯದಲ್ಲಿ ಆಡಲು ಅನುಮತಿ ನೀಡುವ ಸಾಧ್ಯತೆ ಇದೆ. ಗಾಯಾಳುವಾಗಿ ಚೇತರಿಸಿಕೊಂಡಿರುವ ಶಿಖರ್ ಧವನ್ ಸಹ ಈ ರಣಜಿ ಪಂದ್ಯವನ್ನ ಆಡಲಿದ್ದಾರೆ. ಅಲ್ಲಿಗೆ ಈ ಮೂವರಿಗೆ ಈ ಪಂದ್ಯ ಮಹತ್ವದ್ದಾಗಿದೆ.