ಜಡೇಜಾ ಬದಲು ಅಶ್ವಿನ್'ಗೆ ಸ್ಥಾನ
ಜಡೇಜಾ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆದಿದ್ದಾರೆ.
ನವದೆಹಲಿ(ಮಾ.11): ಮಾ.14ರಿಂದ 18ರ ವರೆಗೆ ರಣಜಿ ಚಾಂಪಿಯನ್ ವಿದರ್ಭ ಮತ್ತು ಶೇಷ ಭಾರತ ತಂಡಗಳ ನಡುವೆ ನಡೆಯುವ ಇರಾನಿ ಕಪ್ ಕ್ರಿಕೆಟ್ ಪಂದ್ಯಕ್ಕೆ ಆಲ್ರೌಂಡರ್ ರವೀಂದ್ರ ಜಡೇಜಾ ಬದಲು, ಆರ್. ಅಶ್ವಿನ್ ಸ್ಥಾನ ಪಡೆದಿದ್ದಾರೆ. ಜಡೇಜಾ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆದಿದ್ದಾರೆ.