ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಕರಣ್ ನಾಯರ್ ಪಡೆ 9 ಓವರ್'ಗಳಾಗುವಷ್ಟರಲ್ಲಿಯೇ 2 ವಿಕೇಟ್ ಕಳೆದುಕೊಂಡಿತು. ಸ್ಫೋಟಕ ಆಟಗಾರ ಮಾಯಾಂಕ್ ಅಗರ್'ವಾಲ್ 14 ರನ್ ಗಳಿಸಿ ರನ್ ಔಟ್ ಆದರೆ ಕರಣ್ 10 ರನ್'ಗೆ ಪೆವಿಲಿಯನ್'ಗೆ ತೆರಳಿದರು.

ಧರ್ಮಶಾಲಾ(ಮಾ.08): ಸತತ ಗೆಲುವುಗಳನ್ನು ಕಂಡಿದ್ದ ಕರ್ನಾಟಕ ತಂಡ ದೇವಧರ್ ಟ್ರೋಫಿ'ಯ ಫೈನಲ್ ಪಂದ್ಯದಲ್ಲಿ ಭಾರತ ಬಿ ತಂಡಕ್ಕೆ 6 ವಿಕೇಟ್'ಗಳಿಂದ ಶರಣಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕ ನೀಡಿದ್ದ 279 ರನ್'ಗಳ ಗುರಿಯನ್ನು ಗಾಯಕ್'ವಾಡ್ (58), ಈಶ್ವರನ್(69), ಶ್ರೇಯಸ್ ಅಯ್ಯರ್(61) ಹಾಗೂ ಮನೋಜ್ ತಿವಾರಿ ಅಜೇಯ (59) ಅರ್ಧ ಶತಕಗಳ ನೆರವಿನಿಂದ 48.2 ಓವರ್'ಗಳಲ್ಲಿ 281/4 ವಿಜಯ ಸಾಧಿಸಿದರು. ರಾಜ್ಯದ ಬೌಲರ್'ಗಳ್ಯಾರು ಭಾರತ ಬಿ ತಂಡದ ಆಟಗಾರರನ್ನು ಕಟ್ಟಿ ಹಾಕುವಲ್ಲಿ ಸಾಧ್ಯವಾಗಲಿಲ್ಲ. ಕರ್ನಾಟಕದ ಪರ ಶ್ರೇಯಸ್ ಗೋಪಾಲ್ ಮಾತ್ರ 55/2 ವಿಕೇಟ್ ಪಡೆದು ಯಶಸ್ವಿ ಬೈಲರ್ ಎನಿಸಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಕರಣ್ ನಾಯರ್ ಪಡೆ 9 ಓವರ್'ಗಳಾಗುವಷ್ಟರಲ್ಲಿಯೇ 2 ವಿಕೇಟ್ ಕಳೆದುಕೊಂಡಿತು. ಸ್ಫೋಟಕ ಆಟಗಾರ ಮಾಯಾಂಕ್ ಅಗರ್'ವಾಲ್ 14 ರನ್ ಗಳಿಸಿ ರನ್ ಔಟ್ ಆದರೆ ಕರಣ್ 10 ರನ್'ಗೆ ಪೆವಿಲಿಯನ್'ಗೆ ತೆರಳಿದರು.

ಮಧ್ಯಮ ಕ್ರಮಾಂಕದ ಆಟಗಾರರಾದ ದೇಶಪಾಂಡೆ, ಬಿನ್ನಿ ಕೂಡ ಬಂದ ದಾರಿಯಲ್ಲಿಯೇ ಔಟಾದರು. 5 ವಿಕೇಟ್'ಗೆ ಆರ್. ಸಮರ್ಥ್ ಹಾಗೂ ವಿಕೇಟ್ ಕೀಪರ್ ಸಿ.ಎಂ.ಗೌತಮ್ (76) 132 ರನ್'ಗಳ ಜೊತೆಯಾಟದ ನೆರವಿನಿಂದ ತಂಡ 50 ಓವರ್'ಗಳಲ್ಲಿ 279 ರನ್ ಗಳಿಸಲು ಸಾಧ್ಯವಾಯಿತು. ಸಮರ್ಥ್ 120 ಚಂಡುಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸ್'ರ್'ನೊಂದಿಗೆ ಶತಕ (107) ಬಾರಿಸಿದರು. ಭಾರತ ಬಿ ಪರ ಕೆಕೆ ಅಹಮದ್ 49/3, ಉಮೇಶ್ ಯಾದವ್ 48/2 ವಿಕೇಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು.

ಸ್ಕೋರ್

ಕರ್ನಾಟಕ 50 ಓವರ್'ಗಳಲ್ಲಿ 279/8

(ಆರ್.ಸಮರ್ಥ್ 107, ಗೌತಮ್ 76 )

ಭಾರತ ಬಿ 48.2 ಓವರ್'ಗಳಲ್ಲಿ 281/4

(ಗಾಯಕ್'ವಾಡ್ 58, ಈಶ್ವರನ್ 69, ಎಸ್.ಅಯ್ಯರ್ 61, ತಿವಾರಿ 59)

ಫಲಿತಾಂಶ: ಭಾರತ ಬಿ 6 ವಿಕೇಟ್'ಗಳ ಜಯ

ಪಂದ್ಯ ಶ್ರೇಷ್ಠ: ಆರ್. ಸಮರ್ಥ್