ಬಿಸಿಸಿಐ ಬಗ್ಗೆ ಜಿಆರ್'ವಿ ಅಸಮಾಧಾನ
‘‘ಕಾನ್ಪುರದಲ್ಲೇ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ನಾನು ಒಟ್ಟು 91 ಟೆಸ್ಟ್ ಪಂದ್ಯಗಳನ್ನಾಡಿದ್ದು, ಅಲ್ಲಿಯೇ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿ 500ಕ್ಕೂ ಹೆಚ್ಚು ರನ್ ಗಳಿಸಿದ್ದೇನೆ. ಇದೇ ತಾಣದಲ್ಲಿ ಭಾರತ 500ನೇ ಟೆಸ್ಟ್ ಆಡುತ್ತಿದ್ದು, ಈ ಚಾರಿತ್ರಿಕ ಕ್ಷಣಕ್ಕೆ ನನ್ನನ್ನು ಆಹ್ವಾನಿಸದೆ ಹೋದದ್ದು ತರವೇ?"- ಜಿ.ಆರ್. ವಿಶ್ವನಾಥ್
ಹುಬ್ಬಳ್ಳಿ(ಸೆ.23): ಕಾನ್ಪುರದಲ್ಲಿ ಗುರುವಾರ ನಡೆದ ಸಂಭ್ರಮಕ್ಕೆ ಬಿಸಿಸಿಐ ಆಹ್ವಾನ ನೀಡದ್ದಕ್ಕೆ ಭಾರತ ತಂಡದ ಮಾಜಿ ನಾಯಕ ಜಿ.ಆರ್. ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘‘ಕಾನ್ಪುರದಲ್ಲೇ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ನಾನು ಒಟ್ಟು 91 ಟೆಸ್ಟ್ ಪಂದ್ಯಗಳನ್ನಾಡಿದ್ದು, ಅಲ್ಲಿಯೇ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿ 500ಕ್ಕೂ ಹೆಚ್ಚು ರನ್ ಗಳಿಸಿದ್ದೇನೆ. ಇದೇ ತಾಣದಲ್ಲಿ ಭಾರತ 500ನೇ ಟೆಸ್ಟ್ ಆಡುತ್ತಿದ್ದು, ಈ ಚಾರಿತ್ರಿಕ ಕ್ಷಣಕ್ಕೆ ನನ್ನನ್ನು ಆಹ್ವಾನಿಸದೆ ಹೋದದ್ದು ತರವೇ?" ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ನಾನು ಬಿಸಿಸಿಐ ಜತೆ ಯಾವುದೇ ರೀತಿಯ ಸಂಹವನ ನಡೆಸಿಲ್ಲ. ಆದರೆ, ಅಲ್ಲಿನ ಅಧಿಕಾರಿಯೊಬ್ಬರು ಫೋನ್ ಮಾಡಿ, ‘‘ಉತ್ತರಪ್ರದೇಶ ಕ್ರಿಕೆಟ್ ಸಂಸ್ಥೆ ಕಾರ್ಯಕ್ರಮದ ಜವಾಬ್ದಾರಿ ಹೊತ್ತುಕೊಂಡಿತ್ತು. ಹೀಗಾಗಿ ಸಂಪರ್ಕದ ಕೊರತೆಯಿಂದ ಆಹ್ವಾನಿಸಿಲ್ಲ’’ ಎಂದರು. ಇಷ್ಟಕ್ಕೂ ಕಾರ್ಯಕ್ರಮ ಆಯೋಜಿಸಿದ್ದು ಬಿಸಿಸಿಐ ತಾನೇ ಎಂದು ಅವರಿಗೆ ಉತ್ತರಿಸಿದೆ ಎಂದು ವಿಶ್ವನಾಥ್ ಹೇಳಿದರು.