ನವದೆಹಲಿ(ಸೆ.18): ಟೀಮ್ ಇಂಡಿಯಾದ ಓಪನರ್ ಗೌತಮ್ ಗಂಭೀರ್ ಮತ್ತು ನಾಯಕ ಧೋನಿ ಕ್ಯಾಪ್ಟನ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದು ಮತ್ತೆ ಮುಂದುವರೆದಿದ್ದು, ಗಂಭೀರ್, ಕೂಲ್ ಕ್ಯಾಪ್ಟನ್ ಧೋನಿಗೆ ಟಾಂಗ್ ಕೊಟ್ಟಿದ್ದಾರೆ.
ಕ್ರಿಕೆಟ್ ಆಟಗಾರರ ಬಯೋಪಿಕ್ಗಿಂತ ದೇಶಕ್ಕಾಗಿ ಕ್ರಿಕೆಟರ್ಗಳಿಗಿಂತ ಹೆಚ್ಚು ಕೊಡುಗೆ ನೀಡಿದ ಸಾಧಕರ ಚಿತ್ರ ಮಾಡುವುದು ಒಳ್ಳೆಯದೆಂದು ಟೀಮ್ ಇಂಡಿಯಾದ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಜೀವನಾಧರಿತ ಕತೆ ಚಿತ್ರವಾಗಿ ಬರುತ್ತಿರುವ ಹಿನ್ನಲೆ ಪ್ರತಿಕ್ರಿಯಿಸಿರುವ ಗಂಭೀರ್, ಕ್ರಿಕೆಟರ್ಗಳಿಗಿಂತ ದೇಶಕ್ಕಾಗಿ ಹೆಚ್ಚು ಸೇವೆ ಮಾಡಿರುವ ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ಶ್ರಮಿಸುತ್ತಿರುವವರ ಕುರಿತು ಚಿತ್ರ ಮಾಡುವುದು ಒಳ್ಳೆಯದೆಂಬ ಅಭಿಪ್ರಾಯ ಹೊರ ಹಾಕಿದ್ದಾರೆ. ಈ ಮೂಲಕ ಮತ್ತೆ ಧೋನಿ ವಿರುದ್ಧದ ಟಾಂಗ್ ಮಾಡಿದ್ದಾರೆ.
