ನಿರ್ದೇಶಕ ಮಂಸೋರೆ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡಲಿದ್ದು, ಇದಕ್ಕೆ ಟಿಕೆ ದಯಾನಂದ ಕತೆ ಹಾಗೂ ಸಂಭಾಷಣೆಗಳನ್ನು ಬರೆಯುತ್ತಿದ್ದಾರೆ. ಜಯತೀರ್ಥ ನಿರ್ದೇಶನದಲ್ಲಿ ‘ಬೆಲ್ ಬಾಟಂ’ ಸಿನಿಮಾ ಯಶಸ್ಸು ಕಂಡ ಮೇಲೆ ಕತೆಗಾರ ದಯಾನಂದಗೆ ಬೇಡಿಕೆ ಬಂದಿದ್ದು, ಈಗ ಮಂಸೋರೆ ನಿರ್ದೇಶನಕ್ಕೆ ಕತೆ ಜತೆಗೆ ಸಂಭಾಷಣೆಗಳನ್ನೂ ರೂಪಿಸುತ್ತಿದ್ದಾರೆ.
Sandalwood Mar 6, 2019, 12:33 PM IST
ಇಂದು ನಾತಿ ಚರಾಮಿ ಚಿತ್ರ ತೆರೆ ಕಾಣಲಿದೆ. ಗೌರಿ ಎನ್ನುವ ವಿಧವೆ ಹೆಣ್ಣುಮಗಳ ಕತೆ. ಇದು ಹೆಣ್ಣು ಜೀವಗಳ ದೈಹಿಕ ಬಯಕೆಯ ತೊಳಲಾಟವನ್ನು ಅರ್ಥಪೂರ್ಣವಾಗಿ ಬಿಂಬಿಸುತ್ತದೆ. ಬದಲಾದ ಕಾಲಘಟ್ಟದಲ್ಲಿ ವಿವಾಹ, ಸಂಬಂಧಗಳು, ಬದ್ಧತೆ ಮತ್ತು ಬಯಕೆಗಳನ್ನು ಶೋಧಿಸುವ ಒಂದು ಚಿತ್ರ. ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ತುಂಬಿಸಿಕೊಂಡು ಬೆಳೆದ ಗೌರಿ ಎನ್ನುವ ವಿಧವೆಯ ನಂಬಿಕೆ ಮತ್ತು ವಯೋಸಹಜ ದೈಹಿಕ ಬಯಕೆಗಳ ನಡುವಿನ ತಿಕ್ಕಾಟ, ತೊಳಲಾಟ ಚಿತ್ರದ ವಸ್ತು. ಈ ಚಿತ್ರದ ಬಗ್ಗೆ ನಟಿ ಶೃತಿ ಹರಿಹರನ್ , ನಟ ಸಂಚಾರಿ ವಿಜಯ್, ನಿರ್ದೇಶಕ ಮಂಸೋರೆಯವರು ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಇಲ್ಲಿದೆ ನೋಡಿ.
Sandalwood Dec 28, 2018, 12:07 PM IST
ಹರಿವು ಚಿತ್ರದ ಮೂಲಕ ನಮ್ಮ ನಡುವಿನದ್ದೇ ಕಥೆಯೊಂದನ್ನು ಪ್ರೇಕ್ಷಕರೆದೆಗೆ ದಾಟಿಸಿ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ನಮ್ಮ ನೆಲದ ಪ್ರತಿಭಾವಂತ ನಿರ್ದೇಶಕ ಮಂಸೋರೆ. ಇದೀಗ ಅವರ ನಾತಿಚರಾಮಿ ಎಂಬ ಭಿನ್ನ ಕಥಾನಕವೊಂದನ್ನು ಚಿತ್ರವಾಗಿಸಿದ್ದಾರೆ.
Sandalwood Dec 26, 2018, 1:46 PM IST