ಚೈತ್ರಾ ಕುಂದಾಪುರ ಮಾದರಿಯಲ್ಲಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಿವೃತ್ತ ಇಂಜಿನಿಯರ್ಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
Politics Oct 22, 2023, 4:02 PM IST
ಘಟನೆಯಲ್ಲಿ ಪುತ್ರಿ ಸ್ಥಳದಲ್ಲೇ ಮೃತಪಟ್ಟರೆ, ಪುತ್ರ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ. ಇಬ್ಬರೂ ಮಕ್ಕಳು ಮೃತಪಟ್ಟರೆಂದು ಭಾವಿಸಿ ನೊಂದುಕೊಂಡ ಬೇಗಂಬೀ ನಂತರ ತಾನು ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
CRIME Oct 15, 2023, 1:41 PM IST
ಹೊಸಪೇಟೆ ಉಕ್ಕಡ ಕೇರಿ ನಿವಾಸಿ ಗೋಣಿ ಬಸಪ್ಪ ಕುಟುಂಬದವರ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಹೊಸಪೇಟೆ ಹೊರವಲಯದ ವ್ಯಾಸನಕೇರಿ ಬಳಿ ನಡೆದ ಅಪಘಾತ.
Karnataka Districts Oct 10, 2023, 9:13 AM IST
ನೀವು ಟರ್ಕಿ ದೇಶದ ಸಜ್ಜೆ ನೋಡಿದರೆ ಅಬ್ಬಬ್ಬಾ ಇದು ಸಜ್ಜೆ ನಾ... ಎಂದು ಅಚ್ಚರಿಪಡುತ್ತೀರಿ. ನಾವು ಬೆಳೆಯುವ ಸಜ್ಜೆ ಅಂದಾಜು ಎಂದರೆ 1 ಅಡಿಯಷ್ಟೇ ಉದ್ದವಾದ ತೆನೆ ಇರಬಹುದು. ಆದರೆ ಟರ್ಕಿ ಸಜ್ಜೆ 3 ರಿಂದ 4 ಅಡಿಗಿಂತಲೂ ಉದ್ದವಾದ ತೆನೆ ಇರುತ್ತದೆ. ಹೀಗಾಗಿಯೇ ನಮ್ಮ ಸಜ್ಜೆಗಿಂತ 3 ಪಟ್ಟು ಇಳುವರಿ ಪಡೆಯಬಹುದು. ಟರ್ಕಿ ದೇಶದ ಈ ಸಜ್ಜೆ ನಮ್ಮ ಸಜ್ಜೆಯಂತೆಯೇ ಊಟಕ್ಕೂ, ಪಶು, ಪಕ್ಷಿಗಳ ಆಹಾರಕ್ಕೂ ಬಳಸಬಹುದು.
Karnataka Districts Sep 29, 2023, 1:53 PM IST
ಡಾ. ಎಚ್. ಬಾಲರಾಜ್ ಹಾಗೂ ಅವರ ಪುತ್ರ ಗಂಗಾವತಿಯ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಡಾ. ವಿನಯ್ ಗದಗ ಜಿಲ್ಲೆಯ ಲಕ್ಕುಂಡಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗುರುವಾರ ಮೃತಪಟ್ಟಿದ್ದಾರೆ. ಇವರ ನಿಧನಕ್ಕೆ ಇಡೀ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಸಾರಸ್ವತ ಲೋಕ ಕಂಬನಿ ಮಿಡಿದಿದೆ.
Karnataka Districts Sep 29, 2023, 11:42 AM IST
ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.
Karnataka Districts Sep 26, 2023, 10:17 AM IST
ಕೂಡ್ಲಿಗಿ, ಚಿತ್ರದುರ್ಗ, ಕೊಪ್ಪಳದಂಥ ಸುತ್ತಲಿನ ತಾಲೂಕು, ಜಿಲ್ಲೆಗಳಿಗೆ ಹೋಗಿ ರೈತರು ಸಸಿ ತರಬೇಕಾದ ಪರಿಸ್ಥಿತಿ ಇತ್ತು. ಇದರಿಂದ ಹೆಚ್ಚಿನ ದರದ ಜತೆಗೆ ಪ್ರಯಾಣ ವೆಚ್ಚವು ರೈತರಿಗೆ ಭಾರವಾಗಿತ್ತು. ಇದನ್ನು ತಪ್ಪಿಸಲು ರೇಷ್ಮೆ ಇಲಾಖೆ ಹಾಗೂ ತಾಲೂಕಿನ ನರೇಗಾ ವಿಭಾಗ ಸ್ಥಳೀವಾಗಿಯೇ ರೇಷ್ಮೆ ನರ್ಸರಿ ಅಭಿವೃದ್ಧಿಪಡಿಸಿ ಪಕ್ಕದ ಜಿಲ್ಲೆ ಹಾಗೂ ತಾಲೂಕುಗಳಿಗೆ ರೈತ ಅಲೆದಾಟ ಮತ್ತು ಹೆಚ್ಚಿನ ವೆಚ್ಚಕ್ಕೆ ಕಡಿವಾಣ ಹಾಕಿದಂತೆ ಹಾಕಿದೆ.
Karnataka Districts Sep 25, 2023, 2:00 AM IST
ಹೊಸಪೇಟೆ ನಗರದ ನೂರು ಹಾಸಿಗೆ ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್ನಲ್ಲಿ ಐದು ಮಶಿನ್ಗಳಿವೆ. ಈ ಸೆಂಟರ್ನಲ್ಲಿ ದಿನಕ್ಕೆ 15 ಜನಕ್ಕೆ ಡಯಾಲಿಸಿಸ್ ಮಾಡಲಾಗುತ್ತಿತ್ತು. ಕಳೆದ ಹದಿನೈದು ದಿನಗಳಿಂದ ಈ ಸೆಂಟರ್ ಕೋಮಾಕ್ಕೆ ಹೋಗಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳು ಡಯಾಲಿಸಿಸ್ಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ ನೀಡಲು ಆಗದೇ ಪರದಾಡುತ್ತಿದ್ದಾರೆ.
Karnataka Districts Sep 24, 2023, 11:00 PM IST
ಬಿಜೆಪಿ ಟಿಕೆಟ್ಗಾಗಿ ಹಿರೇಹಡಗಲಿ ಹಾಲಮಠಕ್ಕೆ ಚೈತ್ರಾ ಕುಂದಪುರ ಜೊತೆಗೆ ಉದ್ಯಮಿ ಗೋವಿಂದ ಬಾಬು ಬಂದಿದ್ದರು. ಮಠದಲ್ಲಿ ಗೋವಿಂದ ಬಾಬು ಹಾಗೂ ಚೈತ್ರಾ ಕುಂದಾಪುರ ಅವರಿಗೆ ಅಭಿನವ ಹಾಲಶ್ರೀ ಅವರು ಆಶೀರ್ವಾದ ಮಾಡಿದ್ದರು. ಹೀಗಾಗಿ ಮಠದಲ್ಲಿಯೇ ಮಾತುಕತೆ ಕೋಟಿ ಕೋಟಿ ಮಾತುಕತೆ ನಡೆದಿತ್ತು ಎನ್ನುವ ಅನುಮಾನ.
state Sep 14, 2023, 11:46 AM IST
ಈ ಮುಂಚೆ ನವೆಂಬರ್ನಲ್ಲಿ ಉತ್ಸವ ನಡೆಸಲು ನಿರ್ಧಾರ ಮಾಡಲಾಗಿತ್ತು. ಆದರೆ ಬರ ಪರಿಸ್ಥಿತಿಯಿಂದಾಗಿ ಮುಖ್ಯಮಂತ್ರಿ ಅವರು ಫೆಬ್ರವರಿಯಲ್ಲಿ ನಡೆಸಿ ಎಂದು ಸಲಹೆ ನೀಡಿದ್ದು, ಫೆಬ್ರವರಿಯಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ: ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್
Karnataka Districts Sep 14, 2023, 7:32 AM IST
ಹೊಸಪೇಟೆ ಆರ್ಟಿಒ ಕಚೇರಿಯಲ್ಲಿ ವಾಹನಗಳ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಈಗ ಟ್ಯಾಕ್ಸ್ ಡಿಮ್ಯಾಂಡ್ ನೋಟಿಸ್ ಜಾರಿ ಮಾಡಿ ಬಿಸಿ ಮುಟ್ಟಿಸಲಾಗುತ್ತಿದೆ. ರಸ್ತೆ ತೆರಿಗೆ ಕುರಿತು ವಾಹನಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದರೂ ಬಾಕಿ ಉಳಿಸಿಕೊಂಡಿದ್ದಾರೆ. ಬಾಕಿ ಉಳಿಸಿಕೊಂಡವರಿಗೆ ತೆರಿಗೆ ಜತೆಗೆ ದಂಡ ಕೂಡ ಪಾವತಿಸುವಂತಾಗಿದೆ. ಕೆಲವರ ವಿರುದ್ಧ ನ್ಯಾಯಾಲಯದಲ್ಲೂ ದಾವೆ ಹೂಡಲಾಗುತ್ತಿದೆ.
Karnataka Districts Sep 13, 2023, 11:58 AM IST
ಕೊಟ್ಟೂರು ತಾಲೂಕಿನ ಬತ್ತನಹಳ್ಳಿಯ ತಿಪ್ಪಣ್ಣ ಹಾಗೂ ಅವರ ಸಂಬಂಧಿಕರು ಹುಲಿಗಿ ದೇವಾಲಯಕ್ಕೆ ಹೊರಟಿದ್ದರು. ಮಿನಿ ಲಾರಿ ಹತ್ತಿದ 10 ಜನರು, ಸಾಸಲವಾಡ ಕ್ರಾಸ್ ಬಳಿ, ತಮ್ಮ ಸಂಬಂಧಿಕರಿಗಾಗಿ ಕಾಯ್ತಾ ಇದ್ರು. ನಿಂತಿದ್ದ ಮಿನಿ ಲಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
Karnataka Districts Sep 1, 2023, 12:00 PM IST
ಬೆಂಗಳೂರು (ಆ.29): ಕನ್ನಡ ಚಿತ್ರರಂಗದ ಮೇರು ನಟರಾದ ಡಾ.ರಾಜ್ ಕುಮಾರ್, ಶಂಕರ್ನಾಗ್, ಡಾ.ವಿಷ್ಣುವರ್ಧನ್, ಪುನೀತ್ ರಾಜ್ಕುಮಾರ್, ಡಾ.ಅಂಬರೀಶ್ ಸೇರಿದಂತೆ ಹಲವು ನಾಯಕರ ಪ್ರತಿಮೆಗಳು ಎಲ್ಲೆಡೆ ಕಾಣಸಿಗುತ್ತದೆ. ಆದರೆ, ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗ ಅಚ್ಚಳಿಯದೇ ಉಳಿಯುವ ಖಳನಾಯಕನ ಪಾತ್ರಗಳನ್ನು ಮಾಡಿದ ವಜ್ರಮುನಿ ಅವರು ನಮ್ಮನ್ನಗಲಿ 17 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತಿದೆ.
Entertainment Aug 29, 2023, 6:46 PM IST
ಈ ವರ್ಷ ಮುಂಗಾರು ಆರಂಭವಾಗಿದ್ದೇ ತುಂಬಾ ತಡವಾಗಿ. ಅದರಲ್ಲಿಯೂ ಹೋಬಳಿಯಲ್ಲಿ ಇನ್ನೂ ತಡವಾಗಿ ಮಳೆ ಬಂತು. ಅದೂ ನಿರೀಕ್ಷಿತ ಮಟ್ಟದಲ್ಲಿ ಬರಲಿಲ್ಲ. ಅಷ್ಟೋ ಇಷ್ಟೋ ಮಳೆ ಬಂದು ಭೂಮಿ ತೇವಾಂಶದಿಂದ ಕೂಡಿತ್ತು. ಅದರಿಂದ ಖುಷಿಗೊಂಡ ರೈತರು ಬಿತ್ತನೆ ಮಾಡಿದ್ದಾರೆ. ಈಗ ಬೆಳೆ ಮಳೆಯಿಲ್ಲದೆ ಒಣಗುತ್ತಿದೆ. ಆಗಸ್ಟ್ ತಿಂಗಳು ಅರ್ಧ ಕಳೆದರೂ ಅಗತ್ಯ ಮಳೆ ಇಲ್ಲದೆ ರೈತರು ಆತಂಕಕ್ಕೆ ಈಡಾಗಿದ್ದಾರೆ.
Karnataka Districts Aug 19, 2023, 10:30 PM IST
ವಿಜಯನಗರ ಜಿಲ್ಲೆಯಲ್ಲಿ ಕಾಂಗ್ರೆಸ್ನ ಬೀದಿರಂಪಾಟವು ಸಾರ್ವಜನಿಕರಿಗೆ ಹಾಗೂ ಕಾಂಗ್ರೆಸ್ ಹಿರಿಯ ನಾಯಕರಿಗೆ ಮುಜುಗರ ತಂದಿದೆ. ಮಾಜಿ ಶಾಸಕರೊಬ್ಬರು ಇನ್ನೊಬ್ಬ ಮಾಜಿ ಶಾಸಕನಿಗೆ ಅತ್ಯಂತ ಕೆಟ್ಟಶಬ್ದ ಬಳಸಿ ನಿಂದನೆ ಮಾಡಿರುವುದು ರಾಜಕಾರಣಿಗಳ ನಿಜಮುಖ ಪ್ರದರ್ಶನ ಮಾಡಿದಂತಿದೆ.
Politics Aug 17, 2023, 9:05 PM IST