'ಈ ಕಾರಣಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರದ್ದು ಮಾಡಿ'
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ರದ್ದು ಮಾಡುವಂತೆ ಮನವಿ / ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಪತ್ರ ಬರೆದ ನಿರ್ಮಾಪಕ ನಿರ್ದೇಶಕ ಮದನ್ ಪಟೇಲ್ / ಕೊರೋನಾ ಹೆಚ್ಚಾಗುತ್ತಿರೋ ಸಮಯದಲ್ಲಿ ಚಲನಚಿತ್ರೋತ್ಸವ ನಡೆಸುವುದು ಸರಿ ಅಲ್ಲ / ಚಲನಚಿತ್ರೋತ್ಸವಕ್ಕೆ ಹೊರ ದೇಶದಿಂದ ಬರುವ ಅಥಿತಿಗಳಿಂದ ಕೊರೋನಾ ಹೆಚ್ಚಾಗಬಹುದು
ಬೆಂಗಳೂರು(ಫೆ. 21) ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ರದ್ದು ಮಾಡಲು ಸಿಎಂಗೆ ನಿರ್ಮಾಪಕರೊಬ್ಬರು ಮನವಿ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪಗೆ ನಿರ್ಮಾಪಕ ನಿರ್ದೇಶಕ ಮದನ್ ಪಟೇಲ್ ಪತ್ರ ಬರೆದಿದ್ದಾರೆ.
ಕೊರೋನಾ ಹೆಚ್ಚಾಗುತ್ತಿರೋ ಸಮಯದಲ್ಲಿ ಚಲನಚಿತ್ರೋತ್ಸವ ನಡೆಸುವುದು ಸರಿ ಅಲ್ಲ . ಚಲನಚಿತ್ರೋತ್ಸವಕ್ಕೆ ಹೊರ ದೇಶದಿಂದ ಬರುವ ಅಥಿತಿಗಳಿಂದ ಕೊರೋನಾ ಹೆಚ್ಚಾಗಬಹುದು ಎಂದು ಎಚ್ಚರಿಕೆಯುಕ್ತ ಸಲಹೆ ನೀಡಿದ್ದಾರೆ.
ಮಾರ್ಚ್ 24 ರಿಂದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಿಗದಿಯಾಗಿದೆ. ಈ ವರ್ಷ 'ಭಾರತೀಯ ಪ್ರದರ್ಶನ ಕಲೆಗಳ ಮಹತ್ವ' ವಿಷಯದ ಮೇಲೆ ಚಿತ್ರೋತ್ಸವ ಏರ್ಪಡಿಸಲಾಗಿದೆ. ಬೆಂಗಳೂರಿನ ಓರಾಯನ್ ಮಾಲ್ನಲ್ಲಿ 11 ಪರದೆಗಳಲ್ಲಿ 50ಕ್ಕೂ ಹೆಚ್ಚು ದೇಶಗಳ 200 ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಏಳು ದಿನಗಳ ಕಾಲ ನಡೆಯುವ ಚಿತ್ರೋತ್ಸವದಲ್ಲಿ ಮೂರು ಭಾಗವಿರುತ್ತದೆ. ಏಷಿಯನ್ ಸಿನಿಮಾ, ಭಾರತೀಯ ಸಿನಿಮಾ ಹಾಗೂ ಕನ್ನಡ ಸಿನಿಮಾಗಳ ಸ್ಪರ್ಧಾ ವಿಭಾಗ ಎಂದು ವಿಂಗಡಿಸಲಾಗಿದೆ.