userpic
user icon
0 Min read

Nanjundi Kalyana Secret: ಮಾಲಾಶ್ರೀ-ರಾಘಣ್ಣ 'ನಂಜುಂಡಿ ಕಲ್ಯಾಣ'ದ ಈ ಸೀಕ್ರೆಟ್ ನಿಮ್ಗೆ ಗೊತ್ತಿಲ್ಲ!

Malashri Kannada movie Nanjundi Kalyana records all time box office collection

Synopsis

ನಂಜುಂಡಿ ಕಲ್ಯಾಣ ಕನ್ನಡ ಸಿನಿಮಾರಂಗದಲ್ಲಿ ಇತಿಹಾಸ ಸೃಷ್ಟಿಸಿದ ಸಿನಿಮಾ. ಅಲ್ಲಿಯವರೆಗಿನ ಎಲ್ಲಾ ದಾಖಲೆಗಳನ್ನು ಸೈಡ್‌ಗೆ ಸರಿಸಿ ಹೊಸ ದಾಖಲೆ ಸೃಷ್ಟಸಿತು ಮಾಲಾಶ್ರೀ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಜೋಡಿಯ ಈ ಸಿನಿಮಾ. ಈ ಸಿನಿಮಾ ಸೀಕ್ರೆಟ್.. 

ನಂಜುಂಡಿ ಕಲ್ಯಾಣ (Nanjundi Kalyana) ಕನ್ನಡ ಸಿನಿಮಾರಂಗದಲ್ಲಿ ಇತಿಹಾಸ ಸೃಷ್ಟಿಸಿದ ಸಿನಿಮಾ. ಅಲ್ಲಿಯವರೆಗಿನ ಎಲ್ಲಾ ದಾಖಲೆಗಳನ್ನು ಸೈಡ್‌ಗೆ ಸರಿಸಿ ಹೊಸ ದಾಖಲೆ ಸೃಷ್ಟಸಿತು ಮಾಲಾಶ್ರೀ (Malashri) ಹಾಗೂ ರಾಘವೇಂದ್ರ ರಾಜ್‌ಕುಮಾರ್ (Raghavendra Rjkumar) ಜೋಡಿಯ ಈ ಸಿನಿಮಾ. ರಾಘಣ್ಣ ಅವರಿಗೆ ನಂಜುಂಡಿ ಕಲ್ಯಾಣ ಎರಡನೇ ಸಿನಿಮಾ ಅಗಿದ್ದರೆ ಮಾಲಾಶ್ರೀ ಅವರಿಗೆ ಮೊದಲ ಸಿನಿಮಾ. ಈ ಇಬ್ಬರೂ ಆ ಸಿನಿಮಾ ಮೂಲಕ ರಾತ್ರಿ ಕಳೆದು ಬೆಳಗಾಗುವ ಸಮಯದಲ್ಲಿ ಕನ್ನಡದ ದೊಡ್ ಸ್ಟಾರ್‌ಗಳಾಗಿ ಬದಲಾಗಿದ್ದ ಸಿನಿಮಾವದು!

ಅಂದು ಈ ಸಿನಿಮಾವನ್ನು ನೋಡದವರೇ ಇಲ್ಲ ಅಂತ ಹೇಳಬಹುದು. ಕೆಲವು ಹಿರಿಯರು ನೋಡದೇ ಇರಬಹುದಷ್ಟೇ. ಆದರೆ, ಅಂದಿನ ಯಂಗ್ ಜನರೇಶನ್ ಎಲ್ಲರೂ ಈ ಸಿನಿಮಾವನ್ನು ಕಣ್ತುಂಬಿಕೊಂಡವರೇ ಆಗಿದ್ದಾರೆ. ಕಾರಣ, ಈ ಚಿತ್ರದ ಹಾಡುಗಳು ಹಾಗೂ ಸಿನಿಮಾ ಅದ್ಯಾವ ಮಟ್ಟಿಗೆ ಕ್ರೇಜ್ ಕೊಟ್ಟಿತ್ತು ಎಂದರೆ, ಮಾಲಾಶ್ರೀ ಅವರನ್ನು ನೋಡಲೆಂದೇ ಜನರು ಥಿಯೇಟರ್‌ಗೆ ಮತ್ತೆ ಮತ್ತೆ ಬರುತ್ತಿದ್ದರು. 'ಒಳಗೆ ಸೇರಿದರೆ ಗುಂಡು..' ಹಾಡಿನ ಮೂಲಕ ಗಾಯಕಿ ಮಂಜುಳಾ ಗುರುರಾಜ್ ಅವರು ಸ್ಟಾರ್ ಗಾಯಕಿಯಾಗಿ ಭಾರೀ ಬ್ಯುಸಿಯಾಗಿಬಿಟ್ಟರು. 

'ನಂಜುಂಡಿ ಕಲ್ಯಾಣ'ಕ್ಕಿಂತ ಮೊದ್ಲು ಎಲ್ಲಿದ್ರು ಮಾಲಾಶ್ರೀ? ಮೂಲ ಯಾವುದು, ಕರ್ನಾಟಕಕ್ಕೆ ಎಲ್ಲಿಂದ ಬಂದ್ರು?

ಕನ್ನಡದ 'ನಂಜುಂಡಿ ಕಲ್ಯಾಣ' ಸಿನಿಮಾಕ್ಕೆ ತಮ್ಮ ಮಗ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ದುರ್ಗಾ ಅವರನ್ನು ಆಯ್ಕೆ ಮಾಡಿದ ಪಾರ್ವತಮ್ಮ ರಾಜ್‌ಕುಮಾರ್ ಅವರು  'ಮಾಲಾಶ್ರೀ' ಎಂದು ಹೆಸರಿಟ್ಟರು. ಬಳಿಕ ನಡೆದಿದ್ದು ಪವಾಡ ಎಂಬಂತೆ, ದುರ್ಗಾ ಅವರು ಮಾಲಾಶ್ರೀ ಹೆಸರಿನಲ್ಲಿ..

ನಂಜುಂಡಿ ಕಲ್ಯಾಣ ಸಿನಿಮಾ ರಾಜ್ಯಾದ್ಯಂತ 90 ವಾರಗಳ, ಅಂದರೆ ಬರೋಬ್ಬರಿ 630 ದಿನಗಳ ಕಾಲ ನಿರಂತರ ಪ್ರದರ್ಶನ ಕಂಡಿತ್ತು. ಕನ್ನಡ ಸಿನಿಮಾ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಅಲ್ಲಿಯವರೆಗಿನ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವೂ ಆಗಿ ಹೊರಹೊಮ್ಮಿತ್ತು. ಆ ಸಿನಿಮಾ ಬಳಿಕ ಅದೇ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಮಾಲಾಶ್ರೀ ಅಭಿನಯದಲ್ಲಿ 'ಗಜಪತಿ ಗರ್ವಭಂಗ' ಸಿನಿಮಾ ಬಂತು. ಅದೂ ಕೂಡ ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. ಈ ಸಿನಿಮಾ 1989ರಲ್ಲಿ ತೆರೆಗೆ ಬಂದು, 8 ಕೊಟಿ ಕಲೆಕ್ಷನ್ ಮಾಡಿ ಅಂದು ದಾಖಲೆ ಬರೆದಿತ್ತು. 

ಬರೀ '2500 ರೂ.'ಗೆ ಶಂಕರ್‌ ನಾಗ್‌ ರೀತಿ ನಟನೆ ಮಾಡಿದ ಕೆಜಿಎಫ್ ಸ್ಟಾರ್ ಯಶ್, ಡೌಟ್ ಇದ್ರೆ ನೋಡಿ..!

ಮತ್ತೆ ಪಾರ್ವತಮ್ಮ ಅವರ 'ವಜ್ರೇಶ್ವರಿ ಕಂಬೈನ್ಸ್' ನಿರ್ಮಾಣದಲ್ಲಿ ಮೂರನೇ ಸಿನಿಮಾ ಆಗಿ 'ಮೃತ್ಯುಂಜಯ' ಕೂಡ ಬಂತು. ಆದರೆ ಆ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಬದಲು ಅವರಣ್ಣ ಶಿವರಾಜ್‌ಕುಮಾರ್ ನಾಯಕರಾಗಿದ್ದರು. ಆ ಸಿನಿಮಾ ಕೂಡ ಸೂಪರ್ ಹಿಟ್ ಆಯ್ತು. ಬಳಿಕ ಮಾಲಾಶ್ರೀ ಹಾಗೂ ಶಶಿಕುಮಾರ್ ನಟನೆಯಲ್ಲಿ 'ಪೊಲೀಸ್‌ನ ಹೆಂಡ್ತಿ' ಸಿನಿಮಾ ಬಂದು ಅದು ಕೂಡ ಸೂಪರ್ ಹಿಟ್ ಆಯ್ತು. ಹೀಗೆ ಅಂದು ಮಾಲಾಶ್ರೀ ಅವರು ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಹ ಕಾಲ ಇತ್ತು. 

Latest Videos