ನಟ ನಾಗಶೇಖರ್‌ ಚಿತ್ರರಂಗದಲ್ಲಿ ಹೆಂಗೋ ಎನೋ ಮಾಡ್ಕೊಂಡಿದ್ರು ಇವರಿಗೇಕೆ ಇಂಥಾ ಪರಿಸ್ಥಿತಿ ? ಯಾರಿದಕ್ಕೆ ಕಾರಣ? ಇಲ್ಲಿದೆ ನೋಡಿ....

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಹಾಗೂ ಹಾಸ್ಯ ಕಲಾವಿದ ನಾಗಶೇಖರ್‌ ಸೀಳು ತುಟಿ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗುತ್ತಿದೆ. ಇದನ್ನು ನೋಡಿ ಗಾಬರಿಗೊಂಡ ಅಭಿಮಾನಿಗಳಿಗೆ ಇಲ್ಲಿದೆ ಒಂದು ಸುದ್ದಿ. ಅದೂ ಸಂತೋಷದ ವಿಷಯ.

Add Asianetnews Kannada as a Preferred SourcegooglePreferred

ಅಭಿಗಿಂತ ಅಂಬಿಗೇ ಮೊದಲು ಬಂದ ಡಾಕ್ಟರೇಟ್!

ಇತ್ತೀಚಿಗೆ ರೆಬೆಲ್ ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್ ಅಭಿನಯದ 'ಅಮರ್' ಚಿತ್ರ ನಿರ್ದೆಶಿಸಿದ ನಾಗಶೇಖರ್‌ ಪ್ರಥಮ ಬಾರಿಗೆ ನಾಯಕ ನಟನಾಗಿ ಕಾಲಿವುಡ್‌ನಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ.

ಹೌದು! ನಾಗಶೇಖರ್‌ ಅವರಿಗೆ ಏನೋ ಆಗಿಲ್ಲ. ವೈರಲ್ ಆಗುತ್ತಿರುವ ಫೋಟೋ ಅವರ ತಮಿಳು ಚಿತ್ರ 'ನವೆಂಬರ್ ಮಳೈಯಿಲ್ ನಾನುಂ ಅವಳುಂ'. ಸೆನ್ಸಾರ್ ಶಿವು ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಚಿತ್ರದಲ್ಲಿ ಸೀಳು ತುಟಿ ಇರೋ ಪಾತ್ರದಲ್ಲಿ ನಾಗಶೇಖರ್ ಅಭಿನಯಿಸುತ್ತಿದ್ದಾರೆ. ಕಳೆದ 15 ದಿನಗಳಿಂದ ಪಾಂಡೀಚೇರಿಯಲ್ಲಿ ಶೂಟಿಂಗ್ ನಡೆಯುತ್ತಿದೆ.