10 ವರ್ಷದಲ್ಲಿ ನಾನೆಂದೂ ನಿಮ್ಮನ್ನು ಮರೆತಿಲ್ಲ; ಸಾಹಸಸಿಂಹನನ್ನು ನೆನೆದ ಸುದೀಪ್
ಸ್ಯಾಂಡಲ್ವುಡ್ ಸಾಹಸ ಸಿಂಹನಿಗೆ 10 ನೇ ವರ್ಷದ ಪುಣ್ಯ ಸ್ಮರಣೆ | ವಿಷ್ಣುದಾದನನ್ನು ನೆನೆದ ಕಿಚ್ಚ ಸುದೀಪ್ | 'ಈ ಹತ್ತು ವರ್ಷದಲ್ಲಿ ನಾನು ನಿಮ್ಮನ್ನು ಮರೆತಿಲ್ಲ' ಎಂದ ಸುದೀಪ್
ಕನ್ನಡ ಚಿತ್ರರಂಗದ ಸಾಹಸ ಸಿಂಹ ವಿಷ್ಣುವರ್ಧನ್ ಭೌತಿಕವಾಗಿ ನಮ್ಮನ್ನಗಲಿದರೂ ಜನಮಾನಸದಲ್ಲಿ, ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಇಂದು ವಿಷ್ಣು ವರ್ಧನ್ 10 ನೇ ವರ್ಷದ ಪುಣ್ಯಸ್ಮರಣೆ.
ಭಾಷಾ ಕಿಚ್ಚು: 'ಶ್ರೀಮನ್ನಾರಾಯಣ' ಚಿತ್ರದ ಪೋಸ್ಟರ್ ಹರಿದ ಶಿವಸೇನೆ
ಅಭಿಮಾನಿಗಳು, ಕುಟುಂಬವರ್ಗದವರು ವಿಷ್ಣುವರ್ಧನ ಭಾವಚಿತ್ರಕ್ಕೆ ಪುಷ್ಮ ನಮನ ಸಲ್ಲಿಸಿದ್ದಾರೆ. ಕಿಚ್ಚ ಸುದೀಪ್ ಸಾಹಸ ಸಿಂಹನನ್ನು ನೆನೆಸಿಕೊಂಡಿದ್ದು ಹೀಗೆ.
ಅಪ್ಪಾಜಿ..
ಇಂದು ನಿಮ್ಮ 10ನೇ ಪುಣ್ಯಸ್ಮರಣೆ! ಆದ್ರೆ ಮರೆತವರಿಗೆ ಮಾತ್ರ ಸ್ಮರಣೆ. ನೀವು ನಮ್ಮೆದೆಯ ನಂದಾದೀಪ. ಈ 10 ವರ್ಷದಲ್ಲಿ ಒಂದೇ ಒಂದು ದಿನವೂ ಈ ನಾಡು, ಚಿತ್ರರಂಗ, ನಿಮ್ಮ ಅಭಿಮಾನಿಗಳು ಮತ್ತು ನಾನು ನಿಮ್ಮನ್ನು ಮರೆತೇ ಇಲ್ಲ. ನಿಮ್ಮ ಹೆಸರು ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತಲೇ ಇದೆ. ಆ ಬೆಳಕು ಎಲ್ಲರಿಗೂ ದಾರಿದೀಪವಾಗಿದೆ' ಎಂದಿದ್ದಾರೆ.
7 ವರ್ಷಗಳ ನಂತರ ಬ್ರೇಕಿಂಗ್ ನ್ಯೂಸ್ ಕೊಟ್ರು ಕಿಚ್ಚ ಸುದೀಪ್!
ವಿಷ್ಣುವರ್ಧನ್- ಸುದೀಪ್ ಉತ್ತಮ ಬಾಂಧವ್ಯ ಹೊಂದಿದ್ದರು. 'ಮಾತಾಡ್ ಮಾತಾಡ್ ಮಲ್ಲಿಗೆ' ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಸುದೀಪ್ ನಿರ್ದೇಶನದ 'ಶಾಂತಿ ನಿವಾಸ' ದಲ್ಲಿ ವಿಷ್ಣುವರ್ಧನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಷ್ಣುದಾದಾ 'ಜೇಷ್ಠ' ಚಿತ್ರಕ್ಕೆ ಸುದೀಪ್ ಹಿನ್ನಲೆ ಧ್ವನಿ ನೀಡಿದ್ದರು.