ದರ್ಶನ್ ವೈಲ್ಡ್ಲೈಫ್ ಫೋಟೋ ಶ್ರೀ ಮುರಳಿಗೆ ಗಿಫ್ಟ್!
ದರ್ಶನ್ ವೈಲ್ಡ್ಲೈಫ್ ಫೋಟೋ ಶ್ರೀ ಮುರಳಿಗೆ ಗಿಫ್ಟ್! | ಮದಗಜ ನಿರ್ಮಾಪಕರಿಂದ ಶ್ರೀ ಮುರಳಿಗೆ ಗಿಫ್ಟ್ |
ಬೆಂಗಳೂರು (ಮಾ. 18): ದರ್ಶನ್ ವೈಲ್ಡ್ ಲೈಫ್ ಫೋಟೋವೊಂದನ್ನು ಶ್ರೀಮುರಳಿ ಉಡುಗೊರೆಯಾಗಿ ಪಡೆದಿದ್ದಾರೆ.
ಮದಗಜ ನಿರ್ಮಾಪಕ ಉಮಾಪತಿ ಶ್ರೀ ಮುರಳಿಗೆ ದರ್ಶನ್ ತೆಗೆದ ಫೋಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ. ಕೆಲದಿನಗಳ ಹಿಂದೆ ಮೈಸೂರಿನಲ್ಲಿ 3 ದಿನಗಳ ಕಾಲ ನಡೆದ ಎಕ್ಸಿಬಿಷನ್ ನಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಅದರಿಂದ ಬಂದ ಲಾಭವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸುವುದಾಗಿ ಹೇಳಿದ್ದರು.
ಈ ಫೋಟೋ ಬೆಲೆ 10 ಸಾವಿರವಾಗಿದ್ದು ಶ್ರೀಮುರಳಿಗೆ ಬಹಳ ಇಷ್ಟವಾಗಿದೆಯಂತೆ. ಶ್ರೀಮುರಳಿ ಸದ್ಯ ’ಭರಾಟೆ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ’ಮದಗಜ’ ಶೂಟಿಂಗ್ ಆರಂಭವಾಗಲಿದೆ.
Thumba ishta aithu... it’s a suuupa capture @dasadarshan nim work suuupa... thank u #Umapathy Sir for this gift.. All the best! pic.twitter.com/tBNCPkaSFq
— SRIIMURALI (@SRIMURALIII) March 18, 2019