ಜಗತ್ತಿನ 100 ದೇಶಗಳು, ಮೋದಿ ನೀಡಿದ ಲಸಿಕೆಯಿಂದಾಗಿ ತಮ್ಮ ದೇಶದ ಜನರು ಉಳಿದಿದ್ದಾರೆಂದು ಕೃತಜ್ಞತೆ ಸಲ್ಲಿಸುತ್ತಿದ್ದಾರೆ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ 

ಪುಣೆ(ಏ.28): 'ಕೋವಿಡ್ ವ್ಯಾಧಿಯ ಸಮಯದಲ್ಲಿ ನರೇಂದ್ರ ಮೋದಿ ಅವರು ಲಸಿಕೆ ಕೊಡಿಸಿದ್ದಕ್ಕೆ ಇಂದು ಭಾರತೀಯರು ಜೀವಂತವಾಗಿದ್ದಾರೆ. ಅವರಿಂದಲೇ ನಾವು ಬದುಕಿದ್ದೇವೆ . ಹಾಗಾಗಿ ಅವರಿಗೆ ಮತ ನೀಡಿ' ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮನವಿ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚುನಾವಣಾ ಪ್ರಚಾರ ನಡೆಸಿದ ಅವರು, ಕೊರೋನಾ ವೇಳೆ ಹಲವಾರು ಮಂದಿ ತಮ್ಮ ಆತ್ಮೀಯರನ್ನು, ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಯಾರೂ ಭಾರತದ ನೆರವಿಗೆ ಬಂದಿರಲಿಲ್ಲ. ಹೀಗಾಗಿ ದೇಶದಲ್ಲಿ 40- 50 ಕೋಟಿ ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುವ ಆತಂಕವಿತ್ತು ಎಂದರು.

ಪ್ರಧಾನಿ ಮೋದಿ ಆಡಳಿತದ ಪಿಕ್ಚರ್‌ ಇನ್ನೂ ಬಾಕಿ ಇದೆ: ದೇವೇಂದ್ರ ಫಡ್ನವಿಸ್‌

'ಈ ವೇಳೆ ಮೋದಿಯವರು ವಿಜ್ಞಾನಿಗಳ ಜೊತೆ ಸಂವಹನ ನಡೆಸಿ ಲಸಿಕೆ ಕಂಡು ಹಿಡಿಯುವುದಕ್ಕೆ ನೆರವಾಗಿದ್ದರು. ಅದರಿಂದಲೇ ಇಂದು ನಾವೆಲ್ಲರೂ ಬದುಕಿದ್ದೇವೆ. ಎಲ್ಲರೂ ಇಲ್ಲಿದ್ದೇವೆ. ಮೋದಿ ನಮಗೆ ಲಸಿಕೆ ನೀಡದಿದ್ದರೆ ನಾವು ಇಂದು ಈ ರ್ಯಾಲಿ ವೀಕ್ಷಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ' ಎಂದರು. ಇದೇ ವೇಳೆ ವಿದೇಶಗಳೊಂದಿಗೆ ಕೇಂದ್ರದ ವ್ಯಾಕ್ಸಿನ್ ಮೈತ್ರಿ ವಿಚಾರ ಪ್ರಸ್ತಾಪಿಸಿದ ಫಡ್ನವೀಸ್, 'ಜಗತ್ತಿನ 100 ದೇಶಗಳು, ಮೋದಿ ನೀಡಿದ ಲಸಿಕೆಯಿಂದಾಗಿ ತಮ್ಮ ದೇಶದ ಜನರು ಉಳಿದಿದ್ದಾರೆಂದು ಕೃತಜ್ಞತೆ ಸಲ್ಲಿಸುತ್ತಿದ್ದಾರೆ' ಎಂದೂ ಹೇಳಿದರು.