Asianet Suvarna News Asianet Suvarna News

ಪ್ರತಿ ಹಳ್ಳಿಯ ಟಾಪ್‌ 10 ಕಾಂಗ್ರೆಸ್‌ ಕಾರ್ಯಕರ್ತರಿಗೆ ಟಿವಿ ಗಿಫ್ಟ್‌: ಡಿ.ಕೆ.​ಶಿ​ವ​ಕು​ಮಾರ್‌

ಮತ​ದಾ​ರ​ರಿಗೆ 200 ಯೂನಿಟ್‌ ಉಚಿತ ವಿದ್ಯುತ್‌, ಗೃಹಿ​ಣಿ​ಯ​ರಿಗೆ 2 ಸಾವಿರ ರುಪಾಯಿ ಆರ್ಥಿಕ ನೆರ​ವು, 10 ಕೆ.ಜಿ. ಉಚಿತ ಅಕ್ಕಿ ಘೋಷಿ​ಸಿ​ದ್ದಾಯ್ತು, ಇದೀಗ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವರು ಕಾರ್ಯ​ಕ​ರ್ತ​ರಿಗೆ ಟಿವಿ ಉಡುಗೊರೆ ಘೋಷಿಸಿದ್ದಾರೆ. 

TV Gift to top 10 Congress Workers of each village Says DK Shivakumar gvd
Author
First Published Feb 22, 2023, 8:46 AM IST

ಚಾಮರಾಜನಗರ (ಫೆ.22): ಮತ​ದಾ​ರ​ರಿಗೆ 200 ಯೂನಿಟ್‌ ಉಚಿತ ವಿದ್ಯುತ್‌, ಗೃಹಿ​ಣಿ​ಯ​ರಿಗೆ 2 ಸಾವಿರ ರುಪಾಯಿ ಆರ್ಥಿಕ ನೆರ​ವು, 10 ಕೆ.ಜಿ. ಉಚಿತ ಅಕ್ಕಿ ಘೋಷಿ​ಸಿ​ದ್ದಾಯ್ತು, ಇದೀಗ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವರು ಕಾರ್ಯ​ಕ​ರ್ತ​ರಿಗೆ ಟಿವಿ ಉಡುಗೊರೆ ಘೋಷಿಸಿದ್ದಾರೆ. ಈ ಮೂಲಕ ಕೆಪಿ​ಸಿಸಿ ಚುನಾ​ವಣಾ ಪ್ರಣಾ​ಳಿ​ಕೆ​ಯನ್ನು ಮನೆ ಮನೆಗೆ ತಲು​ಪಿ​ಸಲು ವಿನೂ​ತನ ಪ್ರಯ​ತ್ನಕ್ಕೆ ಕೈಹಾ​ಕಿ​ದ್ದಾ​ರೆ. 

ಹನೂರಿನಲ್ಲಿ ಮಂಗ​ಳ​ವಾ​ರ ಪ್ರಜಾಧ್ವನಿ ಯಾತ್ರೆ ಉದ್ಘಾಟಿಸಿ ಮಾತನಾಡಿ ಕಾಂಗ್ರೆಸ್‌ನ ವಚನವಾದ ಉಚಿತ ವಿದ್ಯುತ್‌, ಗೃಹಿ​ಣಿ​ಯ​ರಿಗೆ 2 ಸಾವಿರ ಆರ್ಥಿಕ ನೆರವು ನೀಡುವ ಗೃಹ​ಲಕ್ಷ್ಮಿ ಯೋಜ​ನೆ, ಬಡ​ವ​ರಿಗೆ 10 ಕೆ.ಜಿ.ಉಚಿತ ಅಕ್ಕಿ ಗ್ಯಾರಂಟಿ ಚೆಕ್‌ ಅನ್ನು ಪ್ರತಿ ಮನೆ ಬಾಗಿಲಿಗೆ ತಲುಪಿಸಬೇಕು. ಪಕ್ಷ ಯಾವುದೇ ಇರಲಿ, ಎಲ್ಲರ ಮನೆ ಬಾಗಿಲಿಗೆ ತೆರಳಿ ಕಾಂಗ್ರೆಸ್‌ ಪ್ರಣಾಳಿಕೆ ತಿಳಿಸಬೇಕು, ಪ್ರತಿ ಗ್ರಾಪಂನಲ್ಲಿ ಅತಿ ಹೆಚ್ಚು ಹೆಸರು ರಿಜಿಸ್ಟರ್‌ ಮಾಡಿದ 10 ಕಾರ್ಯಕರ್ತರಿಗೆ ಟೀವಿ ಕೊಡುತ್ತೇನೆ ಎಂದು ಡಿ.ಕೆ.​ಶಿ​ವ​ಕು​ಮಾ​ರ್‌ ಘೋಷಿಸಿದರು.

ಮೀಸಲು ಕ್ಷೇತ್ರ ಸುಳ್ಯದಲ್ಲಿ ಈ ಬಾರಿ ಹೊಸಬರ ದರ್ಬಾರು: ಸಚಿವ ಅಂಗಾರ ಸ್ಪರ್ಧೆ ಡೌಟ್‌

ದುಡ್ಡು ಇಸ್ಕೊಳಿ-ಓಟ್‌ ‘ಕೈ’ಗೆ ಹಾಕಿ: ಹೊರಗಿಂದ ಬಂದ ಕೆಲವರು ಕ್ಷೇತ್ರದ ಜನರಿಗೆ ಹಣ ಮತ್ತಿತರ ಆಮಿಷ ತೋರಿಸುತ್ತಿದ್ದಾರೆ ಎಂದು ಶಾಸಕ ನರೇಂದ್ರ ಹೇಳಿದ್ದಾರೆ. ನಾನು ಮತ​ದಾ​ರ​ರಿಗೆ ಹೇಳುವುದಿಷ್ಟೆ. ಬಿಜೆಪಿ ಅವರಾಗಲಿ, ಜೆಡಿಎಸ್‌ನವರಾಗಲಿ, ಮತ್ತೊಬ್ಬರಾಗಲಿ ದುಡ್ಡು ಕೊಟ್ಟರೆ ಸ್ವೀಕ​ರಿಸಿ, ಓಟ್‌ ಮಾತ್ರ ಕಾಂಗ್ರೆಸ್‌ಗೆ ಹಾಕಿ ಎಂದು ಸಲಹೆ ನೀಡಿ​ದ​ರು. ಈಗಾಗಲೇ 200 ಯೂನಿಟ್‌ ಉಚಿತ ವಿದ್ಯುತ್‌, ಮನೆ ಯಜಮಾನಿಗೆ .2000, 10 ಕೆ.ಜಿ. ಉಚಿತ ಅಕ್ಕಿಯನ್ನು ಅಧಿಕೃತವಾಗಿ ಘೋಷಿಸಿದ್ದೇ​ವೆ. ನಾವೇನಾ​ದರೂ ಈ ಭರವಸೆ ಈಡೇರಿಸದಿದ್ದರೆ ಇನ್ನು ಮುಂದೆ ಮತ ಕೇಳಲು ನಿಮ್ಮ ಮುಂದೆ ಬರಲ್ಲ ಎಂದು ಘೋಷಿಸಿದರು.

ಅಶ್ವತ್ಥ ವಿರುದ್ಧ ಕೇಸ್‌, ಪೊಲೀ​ಸ​ರಿಗೆ ಡಿಕೆಶಿ ಎಚ್ಚ​ರಿ​ಕೆ: ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಎಲ್ಲಿ ಕೊಲೆಗೆ ಪ್ರಚೋ​ದಿ​ಸುವ ಹೇಳಿಕೆ ನೀಡಿ​ದರೋ ಅಲ್ಲೇ ಕೇಸ್‌ ದಾಖಲಾಗಿ ಅವರನ್ನು ಬಂ​ಧಿಸಬೇಕು. ತಪ್ಪಿ​ದಲ್ಲಿ ಪೊಲೀಸ್‌ ಅಧಿ​ಕಾ​ರಿ​ಗಳು ಸಮಸ್ಯೆ ಎದು​ರಿ​ಸ​ಬೇ​ಕಾ​ಗು​ತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಎಚ್ಚ​ರಿ​ಸಿ​ದರು. ಅಶ್ವತ್ಥ ನಾರಾ​ಯಣ ಅವರೊಬ್ಬ ಮಂತ್ರಿಯಾಗಿ ಮಾಜಿ ಮುಖ್ಯ​ಮಂತ್ರಿ ಕೊಲೆಗೆ ಪ್ರಚೋದನೆ ಕೊಟ್ಟಿದ್ದಾರೆ. ಕ್ಷಮಾಪಣೆ ಕೇಳುವುದೆಲ್ಲ ಬೇಡ, ದೇಶದ ಕಾನೂನು ಏನಿದೆ ಅದನ್ನು ರಾಜ್ಯ ಸರ್ಕಾರ ಪಾಲಿ​ಸಲಿ ಎಂದು ಒತ್ತಾಯಿಸಿದರು.

11267 ಕೋಟಿ ಪೂರಕ ಅಂದಾಜು ಮಂಡನೆ: ಸಚಿವ ಜೆ.ಸಿ.ಮಾಧುಸ್ವಾಮಿ

ಅಶ್ವತ್ಥ ನಾರಾಯಣ ಹೇಳಿಕೆಯ ಪರಿ​ಣಾಮ ಮುಂದೆ ಎದುರಿಸಬೇಕಾಗುತ್ತದೆ. ಅವರ ಬಂಧನ ಆಗದಿದ್ದರೆ ಪೊಲೀಸ್‌ ಅಧಿಕಾರಿಗಳೂ ಹೊಣೆಯಾಗು​ತ್ತಾ​ರೆ. ಅವರು ನಿವೃತ್ತಿ ಆದರೂ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಟಿಪ್ಪುವನ್ನು ಯಾರೋ ಗೌಡ ಕೊಂದ ಅಂತ ಹೇಳುತ್ತಿದ್ದಾರೆ. ಅವರು ಯಾವ ಇತಿಹಾಸ ಹೇಳುತ್ತಿದ್ದಾರೋ ಗೊತ್ತಿಲ್ಲ ಎಂದು ಬಿಜೆಪಿಗರ ಟಿಪ್ಪು ಕೊಂದ ಹೇಳಿಕೆಗೆ ಕಿಡಿಕಾರಿದರು.

Follow Us:
Download App:
  • android
  • ios