Asianet Suvarna News Asianet Suvarna News

'ಯಾವ ಮಣ್ಣಿನ ಮಕ್ಕಳೂ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡ್ಲಿಲ್ಲ, ಸಿದ್ದು ಮಾಡಿದ್ರು'

ಎಚ್.ಎಂ, ರೇವಣ್ಣ ಅವರು ಪರೋಕ್ಷವಾಗಿ ಮಣ್ಣಿನ ಮಗ ಎಂದೇ ಕರೆಸಿಕೊಳ್ಳುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವರನ್ನು ಕಿಚಾಯಿಸಿದ್ದಾರೆ.

Siddaramaiah Is All Community Leader Says HM Revanna
Author
Bengaluru, First Published Jan 27, 2019, 4:22 PM IST

ಬೆಂಗಳೂರು, (ಜ.27): ಸಿದ್ದರಾಮಯ್ಯ ಕೇವಲ ಹಿಂದುಳಿದ ವರ್ಗಗಳ ನಾಯಕರಲ್ಲ. ಬದಲಾಗಿ ಸಮಾಜದ ಎಲ್ಲಾ ಸಮುದಾಯಗಳ ನಾಯಕ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದ್ದಾರೆ. 

ನೈಸ್ ರಸ್ತೆಯ ಸೋಂಪುರ ಗೇಟ್ ಸಮೀಪದ ಜಟ್ಟಿಗರಹಳ್ಳಿಯಲ್ಲಿ ಇಂದು (ಭಾನುವಾರ) ಕನಕ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಕಚೇರಿಯಲ್ಲಿ ಬಸವೇಶ್ವರ ಭಾವಚಿತ್ರ ಹಾಕಿಸಿದ್ದು ಸಿದ್ದರಾಮಯ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಗುಣಹಾನ ಮಾಡಿದರು. 

ಅವರು ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೂ ಅಪಾರ ಕೊಡುಗೆ ಕೊಟ್ಟಿದ್ದಾರೆ. ಯಾವುದೇ ಮಣ್ಣಿನ ಮಕ್ಕಳು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಿಲ್ಲ. 

ಅದನ್ನೂ ಕೂಡ ಸಿದ್ದರಾಮಯ್ಯನವರೇ ಮಾಡಿದ್ದು ಎಂದು ಎಚ್‌.ಎಂ ರೇವಣ್ಣ ಪರೋಕ್ಷವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕಾಲೆಳೆದರು.

Follow Us:
Download App:
  • android
  • ios