Asianet Suvarna News Asianet Suvarna News

ಕರಾವಳಿ ಬಿಜೆಪಿಯಲ್ಲಿ ಭಿನ್ನಮತ, ನಳೀನ್ ಬದಲು ಕಟ್ಟರ್ ಹಿಂದುತ್ವವಾದಿಗಳು!

ಕರಾವಳಿ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ. ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಮಾತುಗಳು ಕೇಳಿ ಬಂದಿದ್ದವು. ಈಗ ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ಧ ಅಪಸ್ವರ ಎದ್ದಿದೆ.

RSS workers will contest Mangaluru Loksabha Constituency instead of Nalin Kumar Kateel
Author
Bengaluru, First Published Feb 25, 2019, 5:38 PM IST

ಮಂಗಳೂರು[ಫೆ. 25]  ಕರಾವಳಿ ಲೋಕಸಭಾ ಕಣದಲ್ಲಿ ಬಿಜೆಪಿ ಟಿಕೆಟ್ ಗಾಗಿ ಶುರುವಾಯ್ತು ಫೈಟ್ ಶುರುವಾಗಿದೆ.  ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ನೀಡದಂತೆ ಹೆಚ್ಚಿದ ಒತ್ತಡ ಹೆಚ್ಚಿದೆ.

ಹಾಲಿ ಸಂಸದರ ವಿರುದ್ದ ಕಟ್ಟಾ ಆರ್ ಎಸ್ ಎಸ್ ಮುಖಂಡರೇ ಪೀಲ್ಡಿಗೆ ಇಳಿದಿದ್ದಾರೆ. ನಳೀನ್ ಬದಲು ಕಟ್ಟರ್ ಹಿಂದುತ್ವವಾದಿ ಸತ್ಯಜಿತ್ ಸುರತ್ಕಲ್ ಗೆ ಟಿಕೆಟ್ ನೀಡಲು ಆಗ್ರಹ ಶುರುವಾಗಿದೆ. ಫೇಸ್ ಬುಕ್, ಟ್ವಿಟ್ಟರ್, ಬ್ಯಾನರ್ ಗಳಲ್ಲಿ ಸತ್ಯಜಿತ್ ಪರ ಬಹಿರಂಗ ಪ್ರಚಾರ ಶುರು ಆಗಿದೆ. 

ಬೆಂಗಳೂರು ಬಿಜೆಪಿಯಲ್ಲೂ ಜೋರಾಗಿದೆ ಟಿಕೆಟ್ ಫೈಟ್

ನಳೀನ್ ಕುಮಾರ್ ಕಟೀಲು ಬದಲು  ಸತ್ಯಜಿತ್ ಮತ್ತು ಬ್ರಿಜೇಶ್ ಚೌಟ ಹೆಸರು ಚಾಲ್ತಿಗೆ ಬಂದಿರುವುದು ಸದ್ಯದ ರಾಜಕಾರಣದ ಬೆಳವಣಿಗೆ. ಇನ್ನೊಂದು ಕಡೆ  ನಳೀನ್ ಗೆ ಟಿಕೆಟ್ ನೀಡಲು ಸ್ವತಃ ಕಲ್ಲಡ್ಕ ವಿರೋಧ ಕೇಳಿ ಬಂದಿದೆ ಎನ್ನಲಾಗಿದೆ. 

Follow Us:
Download App:
  • android
  • ios