ರಾಜಸ್ಥಾನದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಗೂ ಅಶೋಕ್‌ ಗೆಹ್ಲೋಟ್‌ ಪರಸ್ಪರರನ್ನು ಹೊಗಳಿದ್ದಾರೆ. ವಿದೇಶಕ್ಕೆ ಹೋದಲ್ಲೆಲ್ಲ ಮೋದಿಗೆ ಭಾರಿ ಗೌರವ ಸಿಗುತ್ತದೆ ಎಂದು ಅಶೋಕ್‌ ಗೆಹ್ಲೋಟ್‌ ಹೇಳಿದ್ದರೆ, ಗೆಹ್ಲೋಟ್‌ ಅತಿ ಅನುಭವಿ, ಅತಿ ಹಿರಿಯ ಸಿಎಂ ಎಂದು ಪ್ರಧಾನಿ ಮೋದಿ ಹೊಗಳಿದ್ದಾರೆ. 

ಜೈಪುರ (ನವೆಂಬರ್ 2): ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ಕಾಂಗ್ರೆಸ್‌ (Congress) ಮುಖಂಡರೂ ಆದ ರಾಜಸ್ಥಾನ ಮುಖ್ಯಮಂತ್ರಿ (Rajasthan Chief Minister) ಅಶೋಕ್‌ ಗೆಹ್ಲೋಟ್‌ (Ashok Gehlot) ಅವರು, ಬೇರೆ ಬೇರೆ ಪಕ್ಷಕ್ಕೆ ಸೇರಿದ್ದರೂ ರಾಜಕೀಯ ವೈಮನಸ್ಯ ಮರೆತು ಪರಸ್ಪರರನ್ನು ಪ್ರಶಂಸಿಸಿಕೊಂಡ ಪ್ರಸಂಗ ಮಂಗಳವಾರ ನಡೆಯಿತು. ರಾಜಸ್ಥಾನದ ಬನ್ಸ್‌ವಾರಾದಲ್ಲಿ (Banswara) ನಡೆದ ಸಮಾರಂಭವೊಂದರಲ್ಲಿ ಮೋದಿ ಜತೆ ವೇದಿಕೆ ಹಂಚಿಕೊಂಡ ಅಶೋಕ್‌ ಗೆಹ್ಲೋಟ್‌, ‘ಮೋದಿ ಅವರು ವಿದೇಶಕ್ಕೆ ಹೋದಲ್ಲೆಲ್ಲ ಭಾರಿ ಗೌರವ ಲಭಿಸುತ್ತದೆ. ಏಕೆಂದರೆ ಅವರು ಗಾಂಧಿ ನಾಡಿನಿಂದ ಬಂದ ಪ್ರಧಾನಿ ಎಂದು. ಪ್ರಜಾಸತ್ತೆಯ (Democracy) ಬೇರು ಎಲ್ಲಿ ಬಲವಾಗಿವೆಯೋ ಅಲ್ಲಿ ಇನ್ನೂ ಪ್ರಜಾಪ್ರಭುತ್ವ ಉಳಿದಿದೆ’ ಎಂದರು.

ಭಾರತವು ಸ್ವಾತಂತ್ರ್ಯವನ್ನು ಸಾಧಿಸಿ 70 ವರ್ಷಗಳ ನಂತರವೂ ದೇಶದಲ್ಲಿ ಪ್ರಜಾಪ್ರಭುತ್ವು ಜೀವಂತವಾಗಿದ್ದು, ಜಗತ್ತಿನಲ್ಲಿ ಇತಿಹಾಸವನ್ನು ಬರೆದಿದೆ ಎಂದು ಅಶೋಕ್‌ ಗೆಹ್ಲೋಟ್ ಹೇಳಿದರು. "ಮೋದಿ ವಿದೇಶಕ್ಕೆ ಹೋದಾಗ ಅವರಿಗೆ ತುಂಬಾ ಗೌರವ ಸಿಗುತ್ತದೆ, ಅವರು ಗಾಂಧಿಯವರ ದೇಶದ ಪ್ರಧಾನಿಯಾಗಿರುವುದರಿಂದ ಅವರಿಗೆ ಗೌರವ ಸಿಗುತ್ತದೆ, ಅಲ್ಲಿ ಪ್ರಜಾಪ್ರಭುತ್ವದ ಬೇರುಗಳು ಆಳವಾಗಿವೆ ಮತ್ತು ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರವೂ ಪ್ರಜಾಪ್ರಭುತ್ವವು ಜೀವಂತವಾಗಿದೆ’’ ಎಂದೂ ಅಶೋಕ್‌ ಗೆಹ್ಲೋಟ್‌ ಹೇಳಿದರು. 

ಇದನ್ನು ಓದಿ: ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿರುವ ಅಶೋಕ್ ಗೆಹ್ಲೋಟ್ ಹೊಗಳಿದ ಮೋದಿ!

ಕೇಂದ್ರದ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಪ್ರಾರಂಭಿಸಿದ ರತ್ಲಾಮ್-ಡುಂಗರ್‌ಪುರ್ ಮತ್ತು ಬನ್ಸ್ವಾರಾ ನಡುವಿನ ರೈಲ್ವೆ ಯೋಜನೆಯ ಪರಾಮರ್ಶೆಗಾಗಿ ಮಂಗರ್ ಅನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸುವಂತೆ ಗೆಹ್ಲೋಟ್ ಮೋದಿಯನ್ನು ಒತ್ತಾಯಿಸಿದರು.

ತಮ್ಮ ಸರ್ಕಾರವು ಆದಿವಾಸಿಗಳಿಗಾಗಿ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳನ್ನು ತೆರೆಯುವುದರಿಂದ ಹಿಡಿದು ಆರೋಗ್ಯ ಸೌಲಭ್ಯಗಳನ್ನು ಒದಗಿಸುವವರೆಗೆ ಬಹಳಷ್ಟು ಮಾಡಿದೆ ಎಂದೂ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಪ್ರಧಾನಿಗೆ ತಿಳಿಸಿದರು. "ಚಿರಂಜೀವಿ ಆರೋಗ್ಯ ಯೋಜನೆಯನ್ನು ಪರೀಕ್ಷಿಸಲು ನಾನು ಪ್ರಧಾನಿಯನ್ನು ಒತ್ತಾಯಿಸುತ್ತೇನೆ ಮತ್ತು ನೀವು (ಮೋದಿ) ಇದನ್ನು ದೇಶಾದ್ಯಂತ ಜಾರಿಗೆ ತರಲು ಬಯಸುತ್ತೀರಿ ಎಂದು ನಾನು ನಂಬುತ್ತೇನೆ" ಎಂದೂ ಹಿರಿಯ ಕಾಂಗ್ರೆಸ್ ನಾಯಕ ಹೇಳಿದರು.

ಬಳಿಕ ಮೋದಿ ಮಾತನಾಡಿ, ‘ಗೆಹ್ಲೋಟ್‌ಜಿ ಹಾಗೂ ನಾನು ಮುಖ್ಯಮಂತ್ರಿಗಳಾಗಿ ಒಟ್ಟಿಗೇ ಕೆಲಸ ಮಾಡಿದ್ದೆವು. ನಮ್ಮ ಮುಖ್ಯಮಂತ್ರಿಗಳಲ್ಲೇ ಅವರು ಅತಿ ಹಿರಿಯರಾಗಿದ್ದರು. ಈಗಲೂ ಕೂಡ ಅವರು ಅತಿ ಹಿರಿಯ ಹಾಗೂ ಅನುಭವಿ ಮುಖ್ಯಮಂತ್ರಿ’ ಎಂದು ಪ್ರಶಂಸಿಸಿದರು.

ಇದನ್ನೂ ಓದಿ: ಮಂಗರ್‌ ಧಾಮ್ ದೃಢತೆ, ತಪಸ್ಸು ಮತ್ತು ದೇಶಭಕ್ತಿಯ ಪ್ರತಿಬಿಂಬ: ಪ್ರಧಾನಿ ನರೇಂದ್ರ ಮೋದಿ!

ಕಾಂಗ್ರೆಸ್ ಆಪ್ತರಾಗಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇತ್ತೀಚೆಗೆ ಬಿಸಿ ತುಪ್ಪವಾಗಿದ್ದಾರೆ. ತಮ್ಮ ನಂಬಿಕಸ್ಥ, ಹೈಕಮಾಂಡ್ ಗೆರೆ ದಾಟದ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸುವಂತೆ ಗಾಂಧಿ ಕುಟುಂಬ ಕೆಲ ಪ್ರಯತ್ನ ನಡೆಸಿತ್ತು. ಆದರೆ ಇದು ಹಾವಿನ ಹುತ್ತಕ್ಕೆ ಕೈಹಾಕಿದಂತಾಗಿತ್ತು. ಅತ್ತ ಅಧ್ಯಕ್ಷ ಪಟ್ಟವೂ ಸಂಕಷ್ಟಕ್ಕೆ ಸಿಲುಕಿತು, ಇತ್ತ ರಾಜಸ್ಥಾನ ರಾಜಕೀಯದಲ್ಲಿ ಬಿರುಗಾಳಿ ಎದ್ದಿತ್ತು. ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಹೊತ್ತಲ್ಲಿ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಇದೀಗ ಇದೇ ಅಶೋಕ್ ಗೆಹ್ಲೋಟ್‌ರನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದಾರೆ. ರಾಜಸ್ಥಾನದ ಮಂಗರ್ ಧಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ದೇಶದಲ್ಲಿನ ಅತ್ಯಂತ ಹಿರಿಯ ಹಾಗೂ ಅನುಭವಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಂದಿದ್ದಾರೆ.