Asianet Suvarna News Asianet Suvarna News

ಅಚ್ಚರಿ ಬೆಳವಣಿಗೆ: ಸಿಎಂ ಬಿಎಸ್‌ವೈ ಮಾಧ್ಯಮ ಸಲಹೆಗಾರ ದಿಢೀರ್ ರಾಜೀನಾಮೆ

ರಾಜಕೀಯ ಸಲಹೆಗಾರರಾಗಿದ್ದ  ಪತ್ರಕರ್ತ ನೇಮಕಾತಿ ರದ್ದು ಮಾಡಿದ ಬೆನ್ನಲ್ಲೇ ಇದೀಗ ಸಿಎಂ ಮಾಧ್ಯಮ ಸಲಹೆಗಾರ ರಾಜೀನಾಮೆ ನೀಡಿದ್ದಾರೆ.

PM Mahadev Prakash resigns CM BS Yediyurappa media advisor Post rbj
Author
Bengaluru, First Published Nov 19, 2020, 5:24 PM IST

ಬೆಂಗಳೂರು, (ನ.19) : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮಾಧ್ಯಮ ಸಲಹೆಗಾರರಾಗಿದ್ದ ಮಹಾದೇವ ಪ್ರಕಾಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

"

ಮಹದೇವ ಪ್ರಕಾಶ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ದಿಢೀರ್ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಂಪುಟ ವಿಸ್ತರಣೆ ಯಾವಾಗ ಎಂದು ಕಾದು ನೋಡಿ: ಬಿಜೆಪಿ ಸಾರಥಿ ಅಚ್ಚರಿ ನುಡಿ..!

 ಮಾಧ್ಯಮ ಸಲಹೆಗಾರರಾಗಿ ಕಳೆದ ಒಂದು ವರ್ಷದಿಂದ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ ಹೇಳಿದ್ದರು, ನನ್ನ ವೈಯಕ್ತಿಕ ಕಾರಣಗಳಿಂದ ಮಾಧ್ಯಮ ಸಲಹೆಗಾರರ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

ಮಹದೇವ ಪ್ರಕಾಶ್ ಅವರ ರಾಜೀನಾಮೆಗೆ ನಿಜವಾದ ಕಾರಣ ಏನು ಎನ್ನುವುದು ಮಾತ್ರ ತಿಳಿದು ಬಂದಿಲ್ಲ. ಪತ್ರದಲ್ಲಿ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.

ಮೊನ್ನೆ ಅಷ್ಟೇ  ರಾಜಕೀಯ ಸಲಹೆಗಾರರಾಗಿದ್ದ  ಪತ್ರಕರ್ತ ಎಂ.ಬಿ.ಮರಮಕಲ್‌ ಅವರ ನೇಮಕಾತಿ ರದ್ದು ಮಾಡಲಾಗಿದ್ದು, ಇದೀಗ  ಮಹದೇವ ಪ್ರಕಾಶ್ ರಾಜೀನಾಮೆ ನೀಡಿದ್ದಾರೆ.
PM Mahadev Prakash resigns CM BS Yediyurappa media advisor Post rbj

Follow Us:
Download App:
  • android
  • ios