Asianet Suvarna News Asianet Suvarna News

MLC Election| ಅತಿ ಆತ್ಮವಿಶ್ವಾಸವೇ ಎಸ್‌.ಆರ್‌.ಪಾಟೀಲ್‌ಗೆ ಹಿನ್ನಡೆಯಾಯ್ತೆ?

*   ಬೆಂಗಳೂರು - ದೆಹಲಿಗೆ ಹೋಗಿ ಲಾಬಿ ಮಾಡದಿರುವುದು ಮುಳುವಾಯ್ತೆ?
*   ಕಳೆದ 24 ವರ್ಷಗಳಿಂದ ಹಿಂದಿರುಗಿ ನೋಡಿರದ ಎಸ್‌.ಆರ್‌.ಪಾಟೀಲ
*   ಪಕ್ಷದ ನಿರ್ಣಯ ಗೌರವಿಸುವೆ 
 

Overconfidence SR Patil Not Get Ticket in Vidhana Parishat Election grg
Author
Bengaluru, First Published Nov 24, 2021, 3:09 PM IST

ಈಶ್ವರ ಶೆಟ್ಟರ 

ಬಾಗಲಕೋಟೆ(ನ.24):  ರಾಜ್ಯ ಕಾಂಗ್ರೆಸ್‌ ನಾಯಕತ್ವದಲ್ಲಿ ಮುಂಚೂಣಿ ನಾಯಕರಾಗಿದ್ದ ಸದ್ಯ ಪ್ರತಿಪಕ್ಷದ ನಾಯಕರೂ ಆಗಿರುವ ಎಸ್‌.ಆರ್‌.ಪಾಟೀಲ(SR Patil) ಅವರಿಗೆ ಟಿಕೆಟ್‌ ಕೈತಪ್ಪಲು ಅವರು ಹೊಂದಿದ್ದ ಅತಿಯಾದ ಆತ್ಮವಿಶ್ವಾಸ ಹಿನ್ನಡೆಯಾಯಿತೆ? ಅಥವಾ ಬೆಂಗಳೂರು(Bengaluru) ಹಾಗೂ ದೆಹಲಿಯಲ್ಲಿದ್ದು(Delhi) ಲಾಬಿ ಮಾಡುವ ಬದಲು ಸ್ವಕ್ಷೇತ್ರದಲ್ಲಿಯೇ ಇದ್ದು ಟಿಕೆಟ್‌ ಪಡೆಯುವ ಅತಿಯಾದ ನಂಬಿಕೆ ಅವರಿಗೆ ಟಿಕೆಟ್‌ ಸಿಗದೆ ಇರಲು ಕಾರಣವಾಯಿತೆ? ಎಂಬ ಚರ್ಚೆ ಅವಳಿ ಜಿಲ್ಲೆಯಲ್ಲಿ ಆರಂಭಗೊಂಡಿದೆ.

ನಾಲ್ಕು ದಶಕಗಳ ಕಾಲ ಕಾಂಗ್ರೆಸ್‌(Congress) ಪಕ್ಷದ ಕಾರ್ಯಕರ್ತರಾಗಿ, ನಾಯಕರಾಗಿ, ಪರಿಷತ್‌ ಸದಸ್ಯರಾಗಿ, ಸಚಿವರಾಗಿ, ಪಕ್ಷದ ಕಾರ್ಯಾಧ್ಯಕ್ಷರಾಗಿ, ಪ್ರತಿಪಕ್ಷದ ನಾಯಕರಾಗಿದ್ದ ಎಸ್‌.ಆರ್‌. ಪಾಟೀಲ ಅವರಿಗೆ ಸದ್ಯ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಟಿಕೆಟ್‌ ತಪ್ಪಿರುವುದು ಬಾಗಲಕೋಟೆ(Bagalkot) ಹಾಗೂ ವಿಜಯಪುರ(Vijayapura) ಜಿಲ್ಲೆಯಲ್ಲಿನ ಕಾಂಗ್ರೆಸ್‌ ವಲಯದಲ್ಲಿ ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.

Bitcoin Scam| ಸಿಎಂ ಬೊಮ್ಮಾಯಿ ಬಿಜೆಪಿ ನಾಯ​ಕರ ಹೆಸರು ಹೇಳಲಿ: ಸಿದ್ದ​ರಾ​ಮ​ಯ್ಯ

1987ರಿಂದಲೇ ಜಿಲ್ಲಾ ಪಂಚಾಯ್ತಿ ರಾಜಕಾರಣದಿಂದ(Politics) ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡು ಅಖಂಡ ವಿಜಯಪುರ ಜಿಲ್ಲೆಯ ಜಿಲ್ಲಾ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿ ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಎಸ್‌.ಆರ್‌.ಪಾಟೀಲ ಬಾಗಲಕೋಟೆ ಪಟ್ಟಣ ಪ್ರಾಧಿಕಾರದ ಅಧ್ಯಕ್ಷರಾಗಿ 1994ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರದ ಬೆಳವಣಿಗೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಧಾನ ಪರಿಷತ್ತನ್ನು(Vidhan Parishat) ಪ್ರವೇಶಿಸಿದ ಎಸ್‌.ಆರ್‌.ಪಾಟೀಲ ಕಳೆದ 24 ವರ್ಷಗಳಿಂದ ಹಿಂದಿರುಗಿ ನೋಡಿರಲಿಲ್ಲ. ರಾಜಕಾರಣದಲ್ಲಿನ ವಿದ್ಯಮಾನಗಳನ್ನು ಮಾತ್ರ ಅವಲೋಕಿಸುತ್ತಿದ್ದ ಎಸ್‌.ಆರ್‌.ಪಾಟೀಲ ಒಳಸುಳಿವುಗಳನ್ನು ಅರ್ಥೈಸಿಕೊಂಡು ರಾಜಕಾರಣ ಮಾಡಲಾರದೆ ಇರುವುದು ಸಹ ಹಲವು ಬಾರಿ ಅವರ ಅಧಿಕಾರಯುತ ರಾಜಕಾರಣಕ್ಕೆ ಹಿನ್ನಡೆಗಳು ಆಗಿದ್ದವು

ಕೈಕೊಟ್ಟ ಅತಿಯಾದ ವಿಶ್ವಾಸ:

ನಾಲ್ಕು ಬಾರಿ ಪರಿಷತ್ತಿನ ಸದಸ್ಯರಾಗಿದ್ದ ಎಸ್‌.ಆರ್‌.ಪಾಟೀಲ ಸದ್ಯ ಪ್ರತಿಪಕ್ಷದ ನಾಯಕರು ಆಗಿದ್ದರಿಂದ ಯಾವುದೇ ಕಾರಣಕ್ಕೆ ಟಿಕೆಟ್‌ ಕೈ ತಪ್ಪುವುದಿಲ್ಲ ಎಂಬ ನಂಬಿಕೆ ಅವರ ಟಿಕೆಟ್‌ ಕೈತಪ್ಪಲು ಕಾರಣವಾಯಿತೆ ಎಂಬ ಪ್ರಶ್ನೆ ಕೂಡ ಮೂಡಲಾರಂಭಿಸಿದೆ. ಲಾಬಿ ರಾಜಕಾರಣವನ್ನು ಮಾಡದೇ ಇರುವುದು, ಟಿಕೆಟ್‌ ಹಂಚಿಕೆಯಂತಹ ಸಂದರ್ಭಗಳಲ್ಲಿ ಅದರಲ್ಲೂ ಕೊನೆ ಹಂತದ ಸಮಯದಲ್ಲಿ ಯಾವುದೇ ಲಾಬಿ ಮಾಡದೆ ದೆಹಲಿಗೂ ತೆರಳದೇ ಮೌನಕ್ಕೆ ಶರಣಾಗಿರುವುದು ಟಿಕೆಟ್‌ ಕೈತಪ್ಪಿದೆ ಎಂಬ ಮಾತೂ ಕೇಳಿಬಂದಿದೆ. ಹೀಗಾಗಿ ವಿಜಯಪುರದ ಪ್ರಭಾವಿ ನಾಯಕ ಎಂ.ಬಿ.ಪಾಟೀಲ ತಮ್ಮ ಸಹೋದರನಿಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾಲ್ಕು ದಶಕಗಳ ರಾಜಕಾರಣದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಕಾಯ್ದುಕೊಂಡಿರುವ ಎಸ್‌.ಆರ್‌.ಪಾಟೀಲ ಪಕ್ಷದ ವಲಯದಲ್ಲಿ ನೇರ ಮಾತುಗಳನ್ನಾಡುವುದು ಸಹ ಹಲವರಿಗೆ ಕಹಿಯಾಗಿತ್ತು. ಜೊತೆಗೆ ಉತ್ತರ ಕರ್ನಾಟಕದ(North Karnataka) ಹಲವು ಜಿಲ್ಲೆಗಳಲ್ಲಿ ಚಿರಪರಿಚಿತರಾಗಿದ್ದ ಎಸ್‌.ಆರ್‌.ಪಾಟೀಲ ಅವರ ಮುಂದಿನ ರಾಜಕೀಯ ಮತ್ತಷ್ಟು ವಿಸ್ತರಿಸಬಾರದು ಎಂಬ ಒಂದು ಗುಂಪು ವ್ಯವಸ್ಥಿತವಾಗಿ ಟಿಕೆಟ್‌ ತಪ್ಪಿಸುವಲ್ಲಿ ಯಶಸ್ವಿಯಾಗಿರಬಹುದು ಎಂದು ಕಾಂಗ್ರೆಸ್‌ ವಲಯದಲ್ಲಿಯೇ ಕೇಳಿಬರುತ್ತಿರುವ ಮಾತಾಗಿದೆ.

ರಮೇಶ್ ಜಾರಕಿಹೊಳಿ ಸೀಕ್ರೆಟ್ ಭೇಟಿ : ರಹಸ್ಯ ಮಾತುಕತೆ ನಡೆಸಿ ಕುತೂಹಲ ಸೃಷ್ಟಿ

ಪಕ್ಷದ ನಿರ್ಣಯ ಗೌರವಿಸುವೆ: ಎಸ್ಸಾರ್‌ ಪಾಟೀಲ

ಅವಿಭಜಿತ ವಿಜಯಪುರ ಸ್ಥಳೀಯ ದ್ವಿಸದಸ್ಯ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಪಕ್ಷ ಕೈಗೊಂಡಿರುವ ನಿರ್ಣಯವನ್ನು ಗೌರವಿಸುವುದಾಗಿ ಕಾಂಗ್ರೆಸ್‌ನ ಹಿರಿಯ ಮುಖಂಡ ಎಸ್‌.ಆರ್‌.ಪಾಟೀಲ ಹೇಳಿದ್ದಾರೆ.

ಮಂಗಳವಾರ ಕನ್ನಡಪ್ರಭದೊಂದಿಗೆ(Kannada Prabha) ಟಿಕೆಟ್‌ ಕೈತಪ್ಪಿರುವ ಕುರಿತು ಮಾತನಾಡಿದ ಅವರು, ಕಳೆದ 45 ವರ್ಷಗಳಿಂದ ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿ, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಸತತ ನಾಲ್ಕು ಬಾರಿ ಅವಿಭಜಿತ ವಿಜಯಪುರ ಜಿಲ್ಲೆಯ ಜನಪ್ರತಿನಿಧಿಯಾಗಿ ಕೆಲಸ ಮಾಡಿರುವೆ. ಇದೀಗ ಪಕ್ಷದ ಟಿಕೆಟ್‌ ಕೈತಪ್ಪಿರುವುದಕ್ಕೆ ಬೇಸರವಿಲ್ಲ. ರಾಜಕಾರಣದಲ್ಲಿ ಏಳು ಬೀಳುಗಳು ಸಾಮಾನ್ಯ ಎಂದರು.
ಹಾಲಕೆರೆ ಅಭಿನವ ಸಂಗನಬಸವ ಶ್ರೀಗಳ ಅಂತಿಮ ದರ್ಶನಕ್ಕೆ ಹೋಗುತ್ತಿರುವ ಹಿನ್ನಲೆಯಲ್ಲಿ ಅವಿಭಜಿತ ವಿಜಯಪುರ ದ್ವಿಸದಸ್ಯ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸುನೀಲಗೌಡ ಪಾಟೀಲ(Sunil Gouda) ನಾಮಪತ್ರ(Nomination) ಸಲ್ಲಿಕೆ ಕಾರ್ಯದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
 

Follow Us:
Download App:
  • android
  • ios