Asianet Suvarna News Asianet Suvarna News

ನನ್ನನ್ನು ಕಟ್ಟಿ​ಹಾ​ಕಲು ಯಾರಿಂದಲೂ ಆಗು​ವು​ದಿಲ್ಲ: ಎಚ್‌.ಡಿ.ಕುಮಾ​ರ​ಸ್ವಾಮಿ

ನನ್ನನ್ನು ಕಟ್ಟಿಹಾಕಲು ಯಾರಿಂದಲೂ ಆಗು​ವು​ದಿಲ್ಲ. ಯಾರು ಏನೇ ಅಪ​ಪ್ರ​ಚಾರ ಮಾಡಿ​ದರು ಜನರು ಕಿವಿ​ಗೊ​ಡದೆ ನನಗೆ ರಕ್ಷಣೆ ಕೊಡು​ತ್ತಾ​ರೆ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ಪ್ರತಿ​ಕ್ರಿ​ಯಿ​ಸಿ​ದರು. 

No one can tie me down says hd kumaraswamy at ramanagara gvd
Author
First Published Mar 26, 2023, 11:35 AM IST

ರಾಮ​ನ​ಗರ (ಮಾ.26): ನನ್ನನ್ನು ಕಟ್ಟಿಹಾಕಲು ಯಾರಿಂದಲೂ ಆಗು​ವು​ದಿಲ್ಲ. ಯಾರು ಏನೇ ಅಪ​ಪ್ರ​ಚಾರ ಮಾಡಿ​ದರು ಜನರು ಕಿವಿ​ಗೊ​ಡದೆ ನನಗೆ ರಕ್ಷಣೆ ಕೊಡು​ತ್ತಾ​ರೆ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ಪ್ರತಿ​ಕ್ರಿ​ಯಿ​ಸಿ​ದರು. ತಾಲೂ​ಕಿನ ಜಾಲ​ಮಂಗ​ಲ​ದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಚನ್ನ​ಪ​ಟ್ಟಣ ಕ್ಷೇತ್ರದ ಜನರು ನನಗೆ ರಾಜ್ಯ ಕಟ್ಟುವ ಕೆಲಸ ಕೊಟ್ಟಿ​ದ್ದಾರೆ. ರಾಮ​ನ​ಗರ, ಚನ್ನ​ಪ​ಟ್ಟಣ ಹಾಗೂ ಮಾಗಡಿ ಜನರು ನನ್ನನ್ನು ಮನೆ ಮಗ​ನಂತೆ ನೋಡು​ತ್ತಿ​ದ್ದಾರೆ. ಯಾರು ಎಷ್ಟೇ ಅಪ​ಪ್ರ​ಚಾರ ಮಾಡಿ​ದರು ಜನರು ಕಿವಿ​ಕೊ​ಡು​ವು​ದಿಲ್ಲ. 

ಚನ್ನ​ಪ​ಟ್ಟಣ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಪಕ್ಷ​ದಿಂದ ಯಾರೇ ಸ್ಪರ್ಧೆ ಮಾಡಿ​ದರು ನಾನು ತಲೆ ಕೆಡಿ​ಸಿ​ಕೊ​ಳ್ಳು​ವು​ದಿಲ್ಲ. ಎಲ್ಲ​ವನ್ನೂ ಕ್ಷೇತ್ರದ ಜನ​ರಿಗೆ ಬಿಟ್ಟು ನಾನು ರಾಜ್ಯ ಪ್ರವಾಸ ಮಾಡು​ತ್ತಿ​ದ್ದೇನೆ ಎಂದು ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದ​ರು. ಸಚಿ​ವರು ಹಾಗೂ ಶಾಸ​ಕರು ಉದ್ಘಾ​ಟನೆ ಮಾಡುವ ಕಾರ್ಯ​ಕ್ರ​ಮ​ಗ​ಳಿಗೆ ಪ್ರಧಾನಿ ಮೋದಿ ಅವ​ರನ್ನು ಕರೆ​ಸು​ತ್ತಿ​ದ್ದಾರೆ. ಮೋದಿ ಬಂದು ಶಂಕುಸ್ಥಾಪನೆ ಮಾಡಿ ಹೋಗು​ತ್ತಿ​ದ್ದಾರೆ. ಕೋವಿಡ್‌ ಹಾಗೂ ಪ್ರವಾಹ ಬಂದಾಗ ಕರ್ನಾ​ಟ​ಕಕ್ಕೆ ಬರಲು ಪ್ರಧಾ​ನಿ​ಯ​ವ​ರಿಗೆ ಸಮಯ ಇರ​ಲಿಲ್ಲ. ಈಗ ಕರ್ನಾ​ಟ​ಕದ ಮೇಲೆ ಪ್ರೀತಿ ಉಕ್ಕಿ ಹರಿ​ಯು​ತ್ತಿದೆ. ಅವರು ಬರು​ತ್ತಾರೆ, ಹೋಗು​ತ್ತಾರೆ ಅಷ್ಟೇ ಎಂದು ಕುಮಾ​ರ​ಸ್ವಾಮಿ ಲೇವಡಿ ಮಾಡಿ​ದರು.

ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರಲ್ಲ: ಡಿ.ಕೆ.ಶಿವಕುಮಾರ್‌

ಯಾರೇ ಸ್ಪರ್ಧಿಸಿದರೂ ಕಣ​ಕ್ಕಿ​ಳಿ​ಯಲು ತಯಾ​ರು: ರಾಮ​ನ​ಗರ ಕ್ಷೇತ್ರ​ದಲ್ಲಿ ನಮ್ಮ ವಿರುದ್ಧ ಯಾರೇ ಅಭ್ಯ​ರ್ಥಿ​ಯಾ​ದರು ಕಣ​ಕ್ಕಿ​ಳಿ​ಯಲು ತಯಾ​ರಿ​ದ್ದೇವೆ ಎಂದು ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಪ್ರತಿ​ಕ್ರಿ​ಯಿ​ಸಿ​ದರು. ತಾಲೂ​ಕಿನ ಜಾಲ​ಮಂಗ​ಲ​ದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ರಾಮ​ನ​ಗರ ಕ್ಷೇತ್ರಕ್ಕೆ ಸಂಸದ ಡಿ.ಕೆ.​ಸು​ರೇಶ್‌ ಹೆಸರು ಪ್ರಸ್ತಾ​ಪಿಸಿ ಇಕ್ಬಾಲ್‌ ಹುಸೇ​ನ್‌ ಅವ​ರಿಗೆ ಟಿಕೆಟ್‌ ಘೋಷಣೆ ಮಾಡಿ​ರು​ವುದು ಕಾಂಗ್ರೆಸ್‌ ಪಕ್ಷಕ್ಕೆ ಬಿಟ್ಟವಿಚಾರ. 

ರಾಮ​ನ​ಗರ ಜಿಲ್ಲೆ ಜನರು ದೇವೇ​ಗೌ​ಡರ ಮೇಲೆ ಇಟ್ಟಿ​ರುವ ಗೌರವವನ್ನು ಯಾರಿಂದಲೂ ಕಟ್ಟಿ​ಹಾ​ಕಲು ಸಾಧ್ಯವಿಲ್ಲ. ಕುಮಾ​ರ​ಸ್ವಾಮಿ ಹಾಗೂ ನನ್ನನ್ನು ಕಟ್ಟಿ​ಹಾ​ಕಲು ಯಾರಿಂದಲೂ ಸಾಧ್ಯ​ವಿಲ್ಲ. ಚನ್ನ​ಪ​ಟ್ಟಣ ಜೆಡಿ​ಎಸ್‌ ಕಾರ್ಯ​ಕ​ರ್ತರು ಸಹ ಸಜ್ಜಾ​ಗಿ​ದ್ದಾರೆ ಎಂದು ಹೇಳಿ​ದ​ರು. ಇತಿಹಾಸದಲ್ಲಿ ಯಾರು ಕೂಡ ಚನ್ನಪಟ್ಟಣಕ್ಕೆ ಒಂದೂವರೆ ಸಾವಿರ ಕೋಟಿ ಅನುದಾನ ತಂದು ಅಭಿ​ವೃದ್ಧಿ ಕೆಲಸ ಮಾಡಿ​ರ​ಲಿಲ್ಲ. ಕುಮಾ​ರ​ಸ್ವಾ​ಮಿ​ರ​ವರು ಆ ಕೆಲಸ ಮಾಡಿ ತೋರಿ​ಸಿ​ದ್ದಾರೆ. ಜನರು ನಮಗೆ ಆಶೀ​ರ್ವಾದ ಮಾಡು​ತ್ತಾ​ರೆಂಬ ವಿಶ್ವಾ​ಸ​ವಿದೆ ಎಂದು ನಿಖಿಲ್‌ ತಿಳಿ​ಸಿ​ದ​ರು.

ಮಾಜಿ ಶಾಸಕರಿಗೆ ಸೋಲಿನ ಭೀತಿ: ಮಾಜಿ ಶಾಸಕರ ಮುಖದಲ್ಲಿ ಸೋಲಿನ ಭೀತಿ ಸ್ಪಷ್ಟವಾಗಿ ಕಾಣುತ್ತಿದೆ. 20 ವರ್ಷ ಶಾಸಕರಾಗಿದ್ದ ಅವರು, ಕ್ಷೇತ್ರದ ಅಭಿವೃದ್ಧಿ ಮಾಡಿದ್ದರೆ ಏಕೆ ಆತಂಕ ಪಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಯೋಗೇಶ್ವರ್‌ ವಿರುದ್ಧ ಜೆಡಿಎಸ್‌ ಯುವ ಘಟದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ತಾಲೂಕಿನ ಚಿಕ್ಕಮಳೂರು ಬಳಿ ಆಯೋಜಿಸಿದ್ದ ಜೆಡಿಎಸ್‌ ನಗರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಶಾಸಕರಿಗೆ ಕ್ಷೇತ್ರದ ನೆನಪಾಗಿ ಕ್ಷೇತ್ರದ ಬಗ್ಗೆ ಅಭಿಮಾನ ಮೂಡಿ ಅದಕ್ಕೆ ಸಂಕಲ್ಪಯಾತ್ರೆ ಆರಂಭಿಸಿದ್ದಾರೆ. ಚುನಾವಣೆ ವೇಳೆ ನಾನು ನಿಮ್ಮ ಮನೆ ಮಗ ಎಂದು ಹೇಳಿಕೊಂಡು ಯಾತ್ರೆ ಹೊರಟಿರುವವರು ಕೊರೋನಾ ವೇಳೆ ಎಲ್ಲಿಗೆ ಹೋಗಿದ್ದರು. ಆಗ ಕ್ಷೇತ್ರದ ಜನರ ಸಂಕಷ್ಟನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದ ನಿಖಿಲ್‌, ಕೊರೋನಾ ಸಂಕಷ್ಟದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸಿದರೆಂದು ಹೇಳಿದರು.

ರಾಹುಲ್‌ ಗಾಂಧಿ ಒಪ್ಪಿದರಷ್ಟೇ 2 ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ?

ಕುಮಾರಸ್ವಾಮಿಯವರ ಸರ್ಕಾರವನ್ನು ತೆಗೆಯುವವರೆಗೆ ಕ್ಷೇತ್ರಕ್ಕೆ ಕಾಲಿಡುವುದಿಲ್ಲ ಎಂದು ಶಪಥ ಮಾಡಿದ್ದರು. ಕ್ರಿಕೆಟ್‌ ಬೆಟ್ಟಿಂಗ್‌, ದಂಧೆಕೋರರೊಂದಿಗೆ ಸೇರಿಕೊಂಡು ರೈತರ ಅಭ್ಯುದಯಕ್ಕೆ ದುಡಿಯುತ್ತಿದ್ದ ರೈತಪರ ಸರ್ಕಾರವನ್ನು ತೆಗೆದ ಅವರಿಗೆ ನಾಚಿಕೆಯಾಗಬೇಕು. ಹುಣಸೂರಿನ ಚುನಾವಣೆಯಲ್ಲಿ ಹಂಚದೆ ಉಳಿದು ದೂಳು ತಿನ್ನುತಿದ್ದ ಸೀರೆಗಳನ್ನು ಕ್ಷೇತ್ರದಲ್ಲಿ ಹಂಚುತ್ತಿದ್ದಾರೆ. ನಮ್ಮ ಪಕ್ಷದಲ್ಲಿದ್ದ ಕೆಲವರಿಗೆ ಆಮಿಷ ಒಡ್ಡಿ, ಇದೀಗ ಅವರಿಂದ ನಮ್ಮ ವಿರುದ್ಧ ಮಾತನಾಡಿಸುತ್ತಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ರಾಷ್ಟ್ರೀಯ ಪಕ್ಷಗಳಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿಲ್ಲ. ಬಿಜೆಪಿ ಸರ್ಕಾರಕ್ಕೆ ಯುವಕರಿಗೆ ಉದ್ಯೋಗ ಸೃಷ್ಟಿಸಿಲ್ಲ. 40% ಕಮಿಷನ್‌ ವ್ಯವಹಾರ ನಡೆಸಿ ಬಿಜೆಪಿಗರು ಲೂಟಿ ಹೊಡೆದಿದ್ದಾರೆ. ಮತ್ತೊಮ್ಮೆ ಅಧಿಕಾರಕ್ಕೆ ಬಂದು 100% ಲೂಟಿಗೆ ಇದೀಗ ಜನಸಂಕಲ್ಪ ಯಾತ್ರೆ ನಡೆಸುತ್ತಿದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios