ಇಲ್ಲಿನ ಜನರು ಜಾತ್ಯ​ತೀತ ಮನೋ​ಭಾವ ಉಳ್ಳ​ವರು| ಜೆಡಿ​ಎಸ್‌ ಭದ್ರ​ಕೋಟೆ ಅಲು​ಗಾ​ಡಿ​ಸಲು ಯಾರಿಂದಲೂ ಸಾಧ್ಯ​ವಿಲ್ಲ| 

ರಾಮನಗರ[ಫೆ.17]: ಈ ಜಿಲ್ಲೆ ಜೆಡಿ​ಎಸ್‌ನ ಭದ್ರ​ಕೋಟೆ. ಇಲ್ಲಿನ ಜನರು ಜಾತ್ಯ​ತೀತ ಮನೋ​ಭಾವ ಉಳ್ಳ​ವರು. ಗಣ​ವೇ​ಷ​ಧಾ​ರಿ​ಗ​ಳಾಗಿ ಕೈಯಲ್ಲಿ ಲಾಠಿ ಹಿಡಿದು ಎಷ್ಟೇ ಪ್ರಯತ್ನಿಸಿ​ದರೂ ಇಲ್ಲಿನ ಜನರ ಮನ​ಸ್ಥಿತಿ ಬದ​ಲಾ​ಯಿ​ಸಲು ಸಾಧ್ಯ​ವಿಲ್ಲ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.​ಕು​ಮಾ​ರ​ಸ್ವಾಮಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆ​ಸಿ​ದ​ರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾವಿ ಪತ್ನಿಯ ಕೈಬರಹ ಶೇರ್, ನಿಖಿಲ್‌ರಿಂದ ಮತ್ತೊಂದು ವಿಷಯ ಕ್ಲಿಯರ್!

ತಾಲೂಕಿನ ಕೈಲಾಂಚ ಗ್ರಾಮದ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಮಹಾದ್ವಾರವನ್ನು ಭಾನುವಾರ ದಂಪತಿ ಸಮೇತ ಉದ್ಘಾಟಿಸಿದ ಅವರು, ಆರ್‌ಎಸ್‌ಎಸ್‌ನ ಕೆಲವರು ಬಾಡಿಗೆ ಜನ​ರನ್ನು ಕರೆ​ತಂದು, ಗಣ​ವೇ​ಷ​ಧಾರಿ​ಗ​ಳಾಗಿ ಪಥ ಸಂಚ​ಲ​ನ​ ನಡೆ​ಸಿದ್ದಾರೆ. ಈ ಮೂಲಕ​ ಬೇರೆ ಪಕ್ಷ​ಗ​ಳೆ​ಲ್ಲ​ವನ್ನು ನಾಮಾ​ವ​ಶೇಷ ಮಾಡಿ​ಬಿ​ಡು​ತ್ತೇವೆ ಎಂದಿದ್ದಾರೆ.

ಬೇರೆ​ಯ​ವರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದರೆ 144 ಸೆಕ್ಷನ್‌ ಜಾರಿ ಮಾಡುತ್ತಾರೆ. ಆದರೆ, ಆರ್‌ಎಸ್‌ಎಸ್‌ನವರು ರಾಮನಗರದಲ್ಲಿ ಪಥ ಸಂಚಲನ ನಡೆಸಿದರೆ ಅವರಿಗೆ ಅವ​ಕಾಶ ನೀಡಿ ಪೊಲೀಸ್‌ ಬಂದೋ​ಬಸ್‌್ತ ನೀಡು​ತ್ತಾರೆ. ನಮ್ಮದು ಕಾರ್ಯಕರ್ತರ ಗಟ್ಟಿಕೋಟೆ, ಯಾರೇ ಮಹಾನ್‌ ನಾಯಕರು ಬಂದರೂ ಅದನ್ನು ಅಲುಗಾಡಿಸಲು ಸಾಧ್ಯವಾಗದು ಎಂದರು.

ರಾಮನಗರದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರ!