Asianet Suvarna News Asianet Suvarna News

ಮುಡಾ ಹಗರಣ ಮುಚ್ಚಿಕೊಳ್ಳಲು ಬ್ಲಾಕ್‌ಮೇಲ್ ತಂತ್ರಕ್ಕೆ ಮುಂದಾದ್ರಾ ಸಿದ್ದರಾಮಯ್ಯ? ಸಿಎಂ ವಿರುದ್ಧ ಸುನೀಲ್ ಕುಮಾರ ಕಿಡಿ

ನಾನು ಹಗರಣ ಮಾಡಿದ್ದೀನಿ, ಪ್ರಶ್ನೆ ಮಾಡಿದ್ರೆ ನಿಮ್ದು ಹಗರಣ ತೆಗೀತಿನಿ ಈ ರೀತಿ ಸಿಎಂ ಬ್ಲಾಕ್‌ಮೇಲ್ ತಂತ್ರಕ್ಕೆ ಮುಂದಾಗಿರೋದು ಆಶ್ಚರ್ಯ, ಹಾಸ್ಯಾಸ್ಪದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶಾಸಕ ಸುನೀಲ್ ಕುಮಾರ ಕಿಡಿಕಾರಿದರು.

MUDA Scam MLA Sunil kumar outraged against cm siddaramaiah at chikkamagaluru rav
Author
First Published Jul 21, 2024, 2:03 PM IST | Last Updated Jul 22, 2024, 9:43 AM IST

ಚಿಕ್ಕಮಗಳೂರು (ಜು.21): ನಾನು ಹಗರಣ ಮಾಡಿದ್ದೀನಿ, ಪ್ರಶ್ನೆ ಮಾಡಿದ್ರೆ ನಿಮ್ದು ಹಗರಣ ತೆಗೀತಿನಿ ಈ ರೀತಿ ಸಿಎಂ ಬ್ಲಾಕ್‌ಮೇಲ್ ತಂತ್ರಕ್ಕೆ ಮುಂದಾಗಿರೋದು ಆಶ್ಚರ್ಯ, ಹಾಸ್ಯಾಸ್ಪದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶಾಸಕ ಸುನೀಲ್ ಕುಮಾರ ಕಿಡಿಕಾರಿದರು.

 ಮುಡಾ ಹಗರಣ ವಿಚಾರ ಸಂಬಂಧ ಇಂದು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ವಾಲ್ಮೀಕಿ, ಮುಡಾ ಹಗರಣ ಬರುವ ತನಕ ಬಿಜೆಪಿ ಹಗರಣಗಳು ಗೊತ್ತಿರಲಿಲ್ಲವಾ? ಕಳೆದೊಂದು ವರ್ಷದಿಂದ ನಿಮ್ಮದೇ ಸರ್ಕಾರ ಇರುವಾಗ ಇಲ್ಲಿಯವರೆಗೂ ತನಿಖೆ ಯಾಕೆ ಮಾಡಲಿಲ್ಲ? ನಿಮ್ಮ ಕಾಲ ಬುಡಕ್ಕೆ ಬಂದಾಗ ಬಿಜೆಪಿ ಹಗರಣ ತನಿಖೆ ಮಾಡಿಸುತ್ತೇವೆ ಎನ್ನುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

 

ನನ್ನ ವಿರುದ್ಧ ಮಾಡಿರುವ ಆರೋಪ ವಾಪಸ್ ಪಡೆಯಿರಿ: ಸಿಎಂಗೆ ವಾರ ಗಡುವು ಕೊಟ್ಟ ಸಂಸದ ಕೋಟ

ಮುಖ್ಯಮಂತ್ರಿ ಸದನದೊಳಗೆ ಎಷ್ಟೊಂದು ಸುಳ್ಳುಗಳನ್ನು ಹೇಳಿದ್ದಾರೆ. ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ(Parasurama theme park work)ಯಲ್ಲಿ 11 ಕೋಟಿ ಅವ್ಯವಹಾರ ಎಂದಿದ್ದಾರೆ. ಇನ್ನು ಸರ್ಕಾರ 11 ಕೋಟಿ ಹಣವನ್ನು ಬಿಡುಗಡೆಯೇ ಮಾಡಿಲ್ಲ. ಹಣ ಬಿಡುಗಡೆ ಆಗದ ಮೇಲೆ ಅವ್ಯವಹಾರ ಹೇಗೆ ಆಗುತ್ತೆ? ಸದನದೊಳಗೇ ಇಷ್ಟೊಂದು ಸುಳ್ಳು ಹೇಳುವ ಮುಖ್ಯಮಂತ್ರಿಯನ್ನ ಎಂದೂ ಕಂಡಿಲ್ಲ. ಅವ್ಯವಹಾರ ಆಗಿದ್ರೆ ತನಿಖೆ ಮಾಡಲಿ. ಸಿಬಿಐ, ಇಂಟರ್‌ಪೋಲ್, ಸಿಐಡಿ ಯಾವುದೇ ತನಿಖೆ ಬೇಕಾದ್ರೂ ಮಾಡಿ ಎಂದು ಸಿಎಂ ಗೆ ಸವಾಲು ಹಾಕಿದರು.

Latest Videos
Follow Us:
Download App:
  • android
  • ios