Asianet Suvarna News Asianet Suvarna News

ಕಾ​ವೇರಿ ಸ​ಮಸ್ಯೆ ಕೇವಲ ರಾ​ಜ​ಕೀಯ ಹೋ​ರಾ​ಟ​ವ​ಲ್ಲ: ಸಂಸದೆ ಸು​ಮ​ಲ​ತಾ

ಕಾ​ವೇರಿ ಹೋ​ರಾಟ ಎ​ನ್ನು​ವುದು ಕೇ​ವ​ಲ ರಾ​ಜ​ಕೀಯ ಹೋ​ರಾ​ಟ​ವಲ್ಲ. ಇ​ದ​ರಲ್ಲಿ ಜ​ನ​ಸಾ​ಮಾ​ನ್ಯ​ರೆ​ಲ್ಲರೂ ಒ​ಗ್ಗೂಡಿ ಹೋ​ರಾಟ ನ​ಡೆ​ಸ​ಬೇ​ಕಾದ ಅ​ನಿ​ವಾ​ರ್ಯತೆ ಎ​ದು​ರಾ​ಗಿದೆ ಎಂದು ಸಂಸದೆ ಸು​ಮ​ಲತಾ ಅಂಬ​ರೀಶ್‌ ಹೇ​ಳಿ​ದರು.

MP Sumalatha Ambareesh Talks Over Kaveri Water Issue gvd
Author
First Published Aug 19, 2023, 9:54 PM IST

ಮಂಡ್ಯ (ಆ.19): ಕಾ​ವೇರಿ ಹೋ​ರಾಟ ಎ​ನ್ನು​ವುದು ಕೇ​ವ​ಲ ರಾ​ಜ​ಕೀಯ ಹೋ​ರಾ​ಟ​ವಲ್ಲ. ಇ​ದ​ರಲ್ಲಿ ಜ​ನ​ಸಾ​ಮಾ​ನ್ಯ​ರೆ​ಲ್ಲರೂ ಒ​ಗ್ಗೂಡಿ ಹೋ​ರಾಟ ನ​ಡೆ​ಸ​ಬೇ​ಕಾದ ಅ​ನಿ​ವಾ​ರ್ಯತೆ ಎ​ದು​ರಾ​ಗಿದೆ ಎಂದು ಸಂಸದೆ ಸು​ಮ​ಲತಾ ಅಂಬ​ರೀಶ್‌ ಹೇ​ಳಿ​ದರು. ಮಳೆ ಕೊ​ರತೆ ಎ​ದು​ರಾ​ದಾ​ಗ​ಲೆಲ್ಲಾ ನೀರು ಹಂಚಿಕೆ ವಿ​ಚಾ​ರ​ದಲ್ಲಿ ಕ​ರ್ನಾ​ಟ​ಕಕ್ಕೆ ಅ​ನ್ಯಾ​ಯ​ವಾ​ಗು​ತ್ತಿದೆ. ಕೇಂದ್ರ​ದಿಂದ ಹಿ​ಡಿದು ಸು​ಪ್ರೀಂಕೋ​ರ್ಚ್‌​ವ​ರೆಗೂ ತ​ಮಿ​ಳು​ನಾಡು ಪ​ರ​ವಾ​ಗಿಯೇ ತೀ​ರ್ಪು​ಗಳು ಹೊ​ರ​ಬೀ​ಳು​ತ್ತಿವೆ. ಇ​ದರಿಂದ ರೈ​ತ​ರಿಗೆ ನಿ​ರಂತ​ರ​ವಾಗಿ ಅ​ನ್ಯಾ​ಯ​ವಾ​ಗು​ತ್ತಿದೆ. ಈ ಹಂತ​ದಲ್ಲಿ ಸ​ರ್ಕಾ​ರ​ಗ​ಳು ಜ​ವಾ​ಬ್ದಾ​ರಿ​ಯುತ ತೀ​ರ್ಮಾ​ನ​ಗ​ಳನ್ನು ಕೈ​ಗೊ​ಳ್ಳ​ಬೇ​ಕಿದೆ ಎಂದು ಶ​ನಿ​ವಾರ ಸು​ದ್ದಿ​ಗೋ​ಷ್ಠಿ​ಯಲ್ಲಿ ಹೇ​ಳಿ​ದರು.

ಮ​ಳೆ​ಯಾ​ಗುವ ಪ​ರಿ​ಸ್ಥಿತಿ ಇ​ಲ್ಲ: ಮುಂದಿನ ದಿ​ನ​ಗ​ಳಲ್ಲಿ ಮಳೆ ಬೀ​ಳುವ ಪ​ರಿ​ಸ್ಥಿತಿ ಕಾ​ಣಿ​ಸು​ತ್ತಿ​ಲ್ಲ. ಕಾ​ವೇರಿ ಕ​ಣಿ​ವೆ ಜ​ಲಾ​ಶ​ಯ​ಗಳು ಭ​ರ್ತಿ​ಯಾ​ಗಿಲ್ಲ. ನೀ​ರಿಗೆ ಸಂಕಷ್ಟಎ​ದು​ರಾ​ಗಿ​ರುವ ಸ​ಮ​ಯ​ದಲ್ಲಿ ಕೆ​ಆ​ರ್‌​ಎ​ಸ್‌​ನಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದು ರೈ​ತ​ರಿಗೆ ಮಾ​ತ್ರ​ವಲ್ಲ ಜನಸಾಮಾನ್ಯರಿಗೂ ಸಂಕಷ್ಟಎದುರಾಗಲಿದೆ. ಹಾ​ಗಾಗಿ ರೈ​ತರ ಹೋ​ರಾ​ಟದ ಜೊತೆ ನಾವೆಲ್ಲರೂ ನಿಲ್ಲಬೇಕಾಗಿದೆಸಂಕಷ್ಟಕಾಲದಲ್ಲಿ ರೈತರು ಬೆಳೆಯುವ ಬೆಳೆಗೆ ಮಾತ್ರ ಸಂಕಷ್ಟಎಂದು ಭಾವಿಸಬಾರದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಕಾಡಲಿದೆ. ಹಾಗಾಗಿ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಇಂದಿರಾ ಕ್ಯಾಂಟೀನ್​ನಲ್ಲಿ ಊಟದ ದರ ದುಬಾರಿ: ಬಡವರ ಹೊಟ್ಟೆ ಮೇಲೆ ಸಿದ್ದು ಸರ್ಕಾರ ಬರೆ!

ಜ​ನ​ಸಾ​ಮಾ​ನ್ಯರ ಸ​ಮ​ಸ್ಯೆ: ನದಿ ನೀರು ಹಂಚಿಕೆ ವಿ​ಚಾ​ರ​ದಲ್ಲಿ ಯಾರೂ ರಾ​ಜ​ಕಾ​ರಣ ಮಾ​ಡ​ಬಾ​ರದು. ರೈ​ತರ ಸ​ಮಸ್ಯೆ, ನೀ​ರಿನ ಸ​ಮಸ್ಯೆ ಕೇ​ವಲ ಯಾರೋ ಒ​ಬ್ಬ​ರಿಗೆ ಸಂಬಂಧಿ​ಸಿದ ಸ​ಮ​ಸ್ಯೆ​ಯಲ್ಲ. ಅದು ಜ​ನ​ಸಾ​ಮಾ​ನ್ಯರ ಸ​ಮಸ್ಯೆ ಎಂದು ಭಾ​ವಿ​ಸ​ಬೇಕು. ಮಳೆ ಬಾರದ ಕಾರಣ ಪ್ರ​ಸ್ತುತ ಸಂಕಷ್ಟಪರಿಸ್ಥಿತಿ ಎದುರಾಗಿದೆ. ಜಲ ಸಂಕ​ಷ್ಟದ ನ​ಡು​ವೆಯೂ ಈ ಬಾರಿ ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ರೈತರನ್ನು ಸಂದಿಗ್ಧ ಸ್ಥಿ​ತಿಗೆ ದೂ​ಡಿದೆ. ಈ ಸಮ​ಯ​ದ​ಲ್ಲಿ ನಾವು ಯಾವ ರೀತಿ ಹೋರಾಟ ಮಾಡುತ್ತೇವೆ ಎನ್ನು​ವುದು ಮುಖ್ಯ ಎಂದು ತಿಳಿಸಿದರು.

ತ​ಮಿಳುನಾಡು ಪರ ಹೆಚ್ಚು ಒ​ಲ​ವು: ಕೇಂದ್ರದಲ್ಲಿ ತಮಿಳುನಾಡು ಪ​ರ​ವಾಗಿ ಹೆಚ್ಚು ಒಲವು ಇದೆ. ಇಂತಹ ಪ​ರಿ​ಸ್ಥಿ​ತಿ​ಯಲ್ಲಿ ನಾವು ಹೋರಾಟ ಮಾಡಬೇಕಾದ ಅವಶ್ಯಕತೆಯಿದೆ. ಕಾ​ವೇರಿ ಸ​ಮ​ಸ್ಯೆಗೆ ಪರಿಹಾರ ಹುಡುಕುವ ಕೆಲಸ ಮಾಡಬೇಕು. ನಮಗೇ ನೀ​ರಿ​ನ ಸಮಸ್ಯೆ ಇದೆ. ಹಾ​ಗಾಗಿ ನಮ್ಮ ಹೋರಾಟ ನಾವು ಮಾಡಬೇಕು. ನಮಗೆ ಸಮಸ್ಯೆ ಇದ್ದರೂ ನೀರು ಬಿಡುತ್ತಿದ್ದಾರೆ. ಸರ್ವ ಪಕ್ಷಗಳ ಸಭೆ ಕರೆದಿರುವ ಬಗ್ಗೆ ಮಾಹಿತಿ ಇದೆ, ಎಲ್ಲರೂ ಸೇರಿ ಚರ್ಚಿಸಲಿ. ಮು​ಖ್ಯ​ವಾ​ಗಿ ರೈತರ ಹಿತ ಕಾಪಾಡುವುದು ಪ್ರಮುಖವಾಗಿದೆ ಎಂದರು.

ವಿದ್ಯಾರ್ಥಿಗಳು ಹೇಗೆ ಓದಬೇಕು ಅಂದ್ರೆ ರಿಸಲ್ಟ್ ದಿನ ಇಡೀ ಕರ್ನಾಟಕವೇ ನಿಮ್ಮ ಬಗ್ಗೆ ಓದಬೇಕು: ಪ್ರದೀಪ್‌ ಈಶ್ವರ್‌

ನಾನು ಬಿ​ಜೆಪಿ ಸಂಸ​ದೆ​ಯ​ಲ್ಲ: ರಾಜಕೀಯವಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದೇನೆ. ಆ​ದರೆ, ನಾ​ನು ಬಿಜೆಪಿ ಸಂಸದೆ ಅಲ್ಲ . ಬಿಜೆಪಿ ನಿರ್ಧಾರ ನನಗೆ ಅನ್ವಯವಾಗು​ವು​ದಿಲ್ಲ. ಅದು ಅವರಿಗೆ ಬಿಟ್ಟದ್ದು. ಎಲ್ಲವನ್ನೂ ನನ್ನ ಕೇಳಿ ಮಾಡಬೇಕು ಎಂಬ ನಿಯಮವೂ ಇಲ್ಲ. ಪ್ರತಿಯೊಂದು ವಿಷಯದಲ್ಲೂ ನಾನು ಮಧ್ಯ ಪ್ರವೇಶ ಮಾಡು​ವು​ದಿಲ್ಲ. ನನ್ನನ್ನು ಸಂಪರ್ಕ ಮಾಡಿದರೆ ಬೆಂಬಲ ಮಾಡುತ್ತೇವೆ. ಇನ್ನು ನನಗೆ ರಾಜಕೀಯ ಅನಿವಾರ್ಯವಾಗಿಲ್ಲ, ಆಕಸ್ಮಿಕ ಮಾತ್ರ ಎಂದರು. ಆಪರೆಷನ್‌ ಹಸ್ತ ವಿಚಾರವಾಗಿ ಯಾರೂ ನನಗೆ ಆಹ್ವಾನ ಮಾಡಿಲ್ಲ, ನಾನು ಸಂತೋಷವಾಗಿದ್ದೇನೆ. ಕಾಂಗ್ರೆಸ್‌ನಿಂದ ನಮಗೆ ಯಾವುದೇ ಆಫರ್‌ ಬಂದಿ​ಲ್ಲ. ಎಲ್ಲವೂ ವದಂತಿ ಅ​ಷ್ಟೇ. ಎಲ್ಲವೂ ಸರಿ ಎಂದಾದರೆ ಮಾತ್ರ ಮುಂದಿನ ಹೆಜ್ಜೆ ಇಡುತ್ತೇನೆ ಎಂದರು.

Follow Us:
Download App:
  • android
  • ios