Asianet Suvarna News Asianet Suvarna News

ಬೆಂಗ​ಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಗ್ಗೆ ಪ್ರತಾಪ್‌ ಸಿಂಹ ಚೈಲ್ಡಿಶ್‌ ಮಾತು: ನಿಖಿಲ್‌ ಕುಮಾ​ರ​ಸ್ವಾಮಿ

ಬೆಂಗ​ಳೂರು-ಮೈಸೂರು ರಾಷ್ಟ್ರೀಯ ಹೆದ್ದಾ​ರಿಯಲ್ಲಿ ನೂರಾರು ಸಮ​ಸ್ಯೆ​ಗ​ಳಿ​ದ್ದರೂ ಸಂಸದ ಪ್ರತಾಪ್‌ ಸಿಂಹ ಚೈಲ್ಡಿಶ್‌ ಆಗಿ ಮಾತ​ನಾ​ಡು​ತ್ತಿದ್ದಾರೆ ಎಂದು ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಕಿಡಿ​ಕಾ​ರಿ​ದರು. 

MP Pratap Simha childish talk about Bangalore Mysore National Highway Says Nikhil Kumaraswamy gvd
Author
First Published Mar 17, 2023, 4:20 AM IST

ರಾಮ​ನ​ಗರ (ಮಾ.17): ಬೆಂಗ​ಳೂರು-ಮೈಸೂರು ರಾಷ್ಟ್ರೀಯ ಹೆದ್ದಾ​ರಿಯಲ್ಲಿ ನೂರಾರು ಸಮ​ಸ್ಯೆ​ಗ​ಳಿ​ದ್ದರೂ ಸಂಸದ ಪ್ರತಾಪ್‌ ಸಿಂಹ ಚೈಲ್ಡಿಶ್‌ ಆಗಿ ಮಾತ​ನಾ​ಡು​ತ್ತಿದ್ದಾರೆ ಎಂದು ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಕಿಡಿ​ಕಾ​ರಿ​ದರು. ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಮನೆ ಕಟ್ಟಿದರೂ ಸಹ ಸಣ್ಣ ಸಮಸ್ಯೆ ಆಗುತ್ತದೆ. ಹೀಗಿರುವ ರಸ್ತೆಯಲ್ಲಿಯು ಕೆಲ ಸಮಸ್ಯೆ ಆಗುತ್ತದೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ. ಆದರೆ, ಮನೆ ಅವರ ದುಡ್ಡಿನಲ್ಲಿ ಕಟ್ಟುತ್ತಾರೆ. ಆದರೆ, ರಸ್ತೆ ನಿಮ್ಮ ದುಡ್ಡಲ್ಲಿ ಕಟ್ಟಿದ್ದೀರಾ ಎಂದು ಕಿಡಿ​ಕಾ​ರಿ​ದ​ರು.

ಪ್ರತಾಪ್‌ ಸಿಂಹ ಸೆಲ್ಪಿ ವಿಡಿಯೋ ಮಾಡಿ ರಸ್ತೆಯನ್ನೇ ಮಾಡಿಬಿಟ್ಟಿದ್ದಾರೆ. ಜನಪ್ರತಿನಿಧಿಯಾಗಿ ಸರಿಯಾದ ಮಾಹಿತಿ ನೀಡುವ ಕೆಲಸ ಮಾಡಬೇಕು. ಚೈಲ್ಡಿಶ್‌ ಆಗಿ ಪ್ರತಾಪ್‌ಸಿಂಹ ಮಾತನಾಡುತ್ತಾರೆ. ಈ ರಸ್ತೆ ಜನಸಾಮಾನ್ಯರ ದುಡ್ಡಿನಲ್ಲಿ ಕಟ್ಟಿದ್ದಾರೆ ಎಂಬು​ದನ್ನು ಮರೆ​ಯ​ಬಾ​ರದು ಎಂದರು. ಈಗಾಗಲೇ ಈ ರಸ್ತೆಯಲ್ಲಿ 80ಕ್ಕೂ ಹೆಚ್ಚು ಮಂದಿ ಮೃತ ಪಟ್ಟಿದ್ದಾರೆ. 10 ಸಾವಿರ ರುಪಾ​ಯಿಗಳನ್ನು ತಿಂಗಳಿಗೆ ಟೊಯಿ ಗೆ ಕಟ್ಟಬೇಕಾಗುತ್ತದೆ. ಹೀಗಿರುವಾಗ ಜೀವನ ನಡೆಸುವುದಾದರೂ ಹೇಗೆ? ಸೌಲಭ್ಯಗಳನ್ನು ಕಲ್ಪಿಸುವವರೆಗೂ ಟೋಲ್‌ ಸಂಗ್ರಹ ನಡೆಸಬಾರದು. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಸಹ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲ್ಲಿದ್ದಾರೆ ಎಂದು ನಿಖಿಲ್‌ ಕುಮಾರ​ಸ್ವಾಮಿ ಹೇಳಿ​ದರು.

ಬಳ್ಳಾರಿಯಲ್ಲಿ ಶ್ರೀರಾಮುಲು ಸ್ಪರ್ಧೆ ಮಾಡುವುದರಿಂದ ನನಗೆ ಮತ್ತಷ್ಟು ಆನೆ ಬಲ: ಶಾಸಕ ಸೋಮಶೇಖರ್ ರೆಡ್ಡಿ

ಟೋಲ್‌ ಸಂಗ್ರ​ಹದ ಉದ್ದೇ​ಶ​ದಿಂದ ಸರ್ವಿಸ್‌ ರಸ್ತೆ ಕಂಟ್ಯು​ನಿಟಿ ನೀಡಿ​ಲ್ಲ​ವೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿ​ಕಾ​ರದ ಯೋಜನಾ ನಿರ್ದೇ​ಶ​ಕರೆ ಹೇಳು​ತ್ತಿ​ದ್ದಾರೆ. ಹಾಗಾ​ದರೆ ಈ ಹೆದ್ದಾ​ರಿ​ಯಲ್ಲಿ ಆರ್ಥಿ​ಕ​ವಾಗಿ ಸಬ​ಲ​ರಾ​ಗಿ​ರುವ ಶ್ರೀಮಂತರು ಮಾತ್ರ ಹೆದ್ದಾ​ರಿ​ಯಲ್ಲಿ ಓಡಾ​ಡ​ಬೇ​ಕಾ. ರೈತರು, ಬಡ​ವರು, ವಿದ್ಯಾ​ರ್ಥಿ​ಗಳು ಓಡಾ​ಡ​ಬಾ​ರ​ದಾ ಎಂದು ಪ್ರಶ್ನಿಸಿ​ದರು.

ಪ್ರತಾಪ್‌ಸಿಂಹ ಹೆದ್ದಾರಿ ಸಮ​ರ್ಥನೆ ಮಾಡಿ​ಕೊ​ಳ್ಳು​ತ್ತಿ​ರುವ ಏಕೈಕ ಭೂಪ: ಅವ್ಯ​ವ​ಸ್ಥೆ​ಯಿಂದ ಕೂಡಿ​ರುವ ಬೆಂಗ​ಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಸದ ಪ್ರತಾಪ್‌ ಸಿಂಹ ಸಮರ್ಥನೆ ಮಾಡಿ​ಕೊ​ಳ್ಳು​ತ್ತಿ​ರುವ ಏಕೈಕ ಭೂಪ ಎಂದು ಮಾಗಡಿ ಕ್ಷೇತ್ರ ಶಾಸಕ ಎ.ಮಂಜು​ನಾಥ್‌ ಲೇವಡಿ ಮಾಡಿ​ದರು ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಬೆಂಗ​ಳೂರು-ಮೈಸೂರು ರಾಷ್ಟ್ರೀಯ ಹೆದ್ದಾ​ರಿಯ ಭ್ರಷ್ಟ​ತೆಗೆ ಇನ್ನೊಂದು ಹೆಸರು ಎನ್ನ​ಬ​ಹುದು.​ ಹೆ​ದ್ದಾರಿ ಹೆಸ​ರಿ​ನಲ್ಲಿ ಸಾವಿ​ರಾರು ಕೋಟಿ ರುಪಾ​ಯಿ​ಗ​ಳನ್ನು ದುರು​ಪ​ಯೋಗ ಪಡಿ​ಸಿ​ಕೊ​ಳ್ಳ​ಲಾ​ಗಿದೆ ಎಂದು ಆರೋ​ಪಿ​ಸಿ​ದ​ರು.

ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕಳಪೆ ಕಾಮಗಾರಿ ಮಾಡಲಾಗಿದೆ. ಎರಡು ಪಥದ ರಸ್ತೆ ಮಾಡೋಕೆ ಸಾವಿರಾರು ಕೋಟಿ ಹಣ ವ್ಯಯಿಸಲಾಗಿದೆ. ಬೇನಾಮಿಗಳಿಗೆ ಹಣ ನೀಡಿ ಲೂಟಿ ಮಾಡಲಾಗಿದೆ. ಆದರೆ, ಇದನ್ನು ಸಮರ್ಥಿಸಿಕೊಳ್ಳುವ ಭೂಪ ಅಂದರೆ ಪ್ರತಾಪ್‌ ಸಿಂಹ ಎಂದು ಕಿಡಿ​ಕಾ​ರಿ​ದರು. ಈ ರಸ್ತೆ​ಯಲ್ಲಿ ಒಬ್ಬರು ಇಬ್ಬರು ಹೋಗಲು ಆಗು​ವು​ದಿಲ್ಲ. ನಾವು ಲೋಕಲ್‌ ಜನ. ನಾವ್ಯಾಕೆ ಟೋಲ್‌ ಕಟ್ಟಿಓಡಾಡಬೇಕು. ರೈತರು ಎಕ್ಸ್‌ ಪ್ರೆಸ್‌ ವೇನಲ್ಲಿ ಓಡಾಡದೆ ಸರ್ವಿಸ್‌ ರಸ್ತೆ​ಯ​ಲ್ಲಿಯೇ ಓಡಾ​ಡ​ಬೇ​ಕೆಂದು ಎಲ್ಲಿ ರೂಲ್ಸ್‌ ಇದೆ. ಡೈರೆಕ್ಟ್ ಮೈಸೂರು ಹೋಗುವವರಿಗೆ ಮಾತ್ರ ಟೋಲ್‌ ಪಡೆ​ದು​ಕೊ​ಳ್ಳಬೇಕು. ಹೆದ್ದಾ​ರಿ​ಯ​ಲ್ಲಿನ ಅವ್ಯ​ವಸ್ಥೆ ಸರಿ​ಪ​ಡಿ​ಸು​ವ​ವ​ರೆಗೂ ಟೋಲ್‌ ಸಂಗ್ರಹ ಮಾಡ​ಬಾ​ರ​ದೆಂದು ಮಂಜು​ನಾಥ್‌ ಒತ್ತಾ​ಯಿ​ಸಿ​ದರು.

ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿಕೊಂಡಂತೆ ಬಿಜೆಪಿ ಸಮಾವೇಶ ಮಾಡುವುದಿಲ್ಲ: ನಳಿನ್‌ ಕುಮಾರ್ ಕಟೀಲ್

ಪ್ರಧಾನಿಗಳು ಹೆದ್ದಾರಿ ಲೋಕಾರ್ಪಣೆ ಬದಲಿಗೆ ಟೋಲಾರ್ಪಾಣೆ ಮಾಡಿರಬೇಕು ಎಂದು ಜನ ಕೇಳುತ್ತಿದ್ದಾರೆ. ಸವೀರ್‍ಸ್‌ ರಸ್ತೆ ಓಪನ್‌ ಆಗಿಲ್ಲ. ಹೀಗಿದ್ದರೂ, ತರಾತುರಿಯಲ್ಲಿ ಟೋಲ್‌ ಸಂಗ್ರಹಣೆ ಮಾಡುತ್ತಿರುವ ಬಗ್ಗೆ ಜನ ಪ್ರಶ್ನೆ ಮಾಡುತ್ತಿ​ದ್ದಾರೆ. ದೊಡ್ಡ ಮಟ್ಟದಲ್ಲಿ ಸ್ವಚ್ಛ ಭಾರತ್‌ ಅಂಥ ಬಿಜೆಪಿ ಹೇಳುತ್ತಿದೆ. ಆದರೆ, ಈ ಟೋಲ್‌ ರಸ್ತೆಯಲ್ಲಿ ಶೌಚಾಲಯ ಎಲ್ಲಿದೆ?.
-ನಿಖಿಲ್‌ ಕುಮಾರಸ್ವಾಮಿ, ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ

Follow Us:
Download App:
  • android
  • ios