ನನ್ನ ಪಾಡಿಗೆ ನಾನಿರ್ತೇನೆ, ನಿಮ್ಮ ಪಾಡಿಗೆ ನೀವಿರಿ ಅಷ್ಟೆ. ನಾನು ಏನೂ ಮಾತನಾಡಲ್ಲ, ನೀವು ಏನೂ ಮಾತಾಡಬೇಡಿ ಅಷ್ಟೆಎಂದು ಶಾಸಕ ಶಿವಲಿಂಗೇಗೌಡ ಜೆಡಿಎಸ್‌ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. 

ಅರಸೀಕೆರೆ (ಫೆ.13): ನನ್ನ ಪಾಡಿಗೆ ನಾನಿರ್ತೇನೆ, ನಿಮ್ಮ ಪಾಡಿಗೆ ನೀವಿರಿ ಅಷ್ಟೆ. ನಾನು ಏನೂ ಮಾತನಾಡಲ್ಲ, ನೀವು ಏನೂ ಮಾತಾಡಬೇಡಿ ಅಷ್ಟೆಎಂದು ಶಾಸಕ ಶಿವಲಿಂಗೇಗೌಡ ಜೆಡಿಎಸ್‌ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ತಮ್ಮ ಮೇಲಿನ ಕುಮಾರಸ್ವಾಮಿ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು ಅವರೇನಾದರೂ ಬಿಚ್ಚಿದ್ರೆ ನಾವೂ ಬಿಚ್ಚಬೇ​ಕಾ​ಗು​ತ್ತೆ. ಹಾಲು ಉತ್ಪಾದಕರ ಸಂಘದವರನ್ನು ಪಂಚ​ರತ್ನ ಯಾತ್ರೆ ಸಭೆಗೆ ಕರೆದುಕೊಂಡು ಬರಲು ಯಾರು ಹೇಳಿದ್ದು? ಡಿಸಿಸಿ ಬ್ಯಾಂಕ್‌ ಸೂಪ​ರ್‌​ವೈ​ಸರ್‌ ದುಡ್ಡು ಹಂಚಲೆಂದೇ ಇರೋದಾ? ಹೇಗೆ ಜನ​ರನ್ನು ಕರೆ​ದು​ಕೊಂಡು ಬಂದರು ಎಂದು ಹೇಳಲಾ ಎಂದು ಪ್ರಶ್ನಿ​ಸಿ​ದ​ರು. ಯಾರು ಏನೇ ಹೇಳಿದರೂ ಅರಸೀಕೆರೆ ಕ್ಷೇತ್ರದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಭೆ ಕರೆಯುತ್ತೇನೆ. ಅವ​ರು ಏನು ಹೇಳು​ತ್ತಾರೋ ಅದೇ ರೀತಿ ನನ್ನ ಮುಂದಿನ ನಿರ್ಧಾರ ತೆಗೆ​ದು​ಕೊ​ಳ್ಳು​ತ್ತೇ​ನೆ ಎಂದ​ರು.

ನಾನು ಕಾಂಗ್ರೆಸ್‌ ಸೇರು​ತ್ತೇ​ನೆಂಬ ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮ​ಯ್ಯ ಹೇಳಿಕೆಗೆ ಸಂಬಂಧಿಸಿ ಪ್ರತಿ​ಕ್ರಿ​ಯಿ​ಸಿದ ಶಿವ​ಲಿಂಗೇ​ಗೌಡ, ಅವರ ಹೇಳಿಕೆ ಕುರಿತು ನನಗೆ ಮಾಹಿತಿ ಇಲ್ಲ. ಇಷ್ಟೆಲ್ಲ ಆದ ಮೇಲೆ ನಾನು ಪಕ್ಷ ಬಿಡಬಹುದು ಎಂದು ಸ್ವಾಗತ ಮಾಡಿ​ರ​ಬ​ಹುದು. ಅನಾರೋಗ್ಯ ಪೀಡಿತ ಮಾಜಿ ಪ್ರಧಾನಿ ಎಚ್‌.​ಡಿ.ದೇವೇಗೌಡರನ್ನು ನೋಡಲು ಎರಡು ದಿನ ಹೋಗಿದ್ದೆ. ಫಿಜಿಯೋಥೆರಪಿಯಲ್ಲಿ ಇದ್ದ ಕಾರಣ ಸಿಗಲಿಲ್ಲ. ದೂರ​ವಾಣಿ ಮೂಲಕ ಮಾತ​ನಾ​ಡಿ​ದರು. ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ್ದು ಬೇಜಾರ್‌ ಆಯ್ತು ಅಷ್ಟೆಅಂದೆ. ಎರಡ್ಮೂರು ಸಾರಿ ಅವರ ಬಳಿ ನೇರ​ವಾಗಿ ಮಾತ​ನಾ​ಡಲು ಯ​ತ್ನಿ​ಸಿದೆ, ಆಗಲಿಲ್ಲ ಎಂದ​ರು.

ಯಶ್‌, ರಿಷಬ್‌ ಸೇರಿ ಗಣ್ಯರಿಂದ ಮೋದಿ ಭೇಟಿ: ರಾಜಭವನದಲ್ಲಿ ಅನೌಪಚಾರಿಕ ಮಾತುಕತೆ

ನನ್ನನ್ನು ಪಕ್ಷದಿಂದ ಹೊರಕಳಿಸಲು ಜೆಡಿಎಸ್‌ ಸಂಚು: ನಾನಿನ್ನೂ ಜೆಡಿಎಸ್‌ ಪಕ್ಷದ ಶಾಸಕ. ಆದರೆ ಫೆ.9ರಂದು ಅರ​ಸೀ​ಕೆ​ರೆ​ಯಲ್ಲಿ ಪಕ್ಷದ ಕಚೇರಿ ಉದ್ಘಾಟಿಸಿದ್ದಾರೆ. ಆ ಸಭೆಗೆ ನನ್ನನ್ನೂ ಆಹ್ವಾನಿಸಿಲ್ಲ. ಜೊತೆಗೆ ಭಾನು​ವಾರ ಹಮ್ಮಿ​ಕೊ​ಳ್ಳ​ಲಾ​ಗಿ​ರುವ ಸಭೆಗೂ ಆಹ್ವಾನ ನೀಡಿ​ಲ್ಲ. ನಾನೇ ಪಕ್ಷ​ದಿಂದ ಹೊರ​ಹೋ​ಗು​ವಂತೆ ಸಂಚು ರೂಪಿ​ಸ​ಲಾ​ಗು​ತ್ತಿದೆ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದ್ದಾರೆ. ಶನಿ​ವಾರ ಸುದ್ದಿ​ಗಾ​ರರ ಜತೆಗೆ ಮಾತ​ನಾಡಿ, ಎರಡು ವರ್ಷಗಳ ಹಿಂದೆ ಕಾಂಗ್ರೆಸ್‌ ಸೇರ್ಪಡೆ ಕುರಿತು ಮಾತು​ಕತೆ ನಡೆದದ್ದು ನಿಜ. ಹಲವು ಸನ್ನಿವೇಶ ಹಾಗೂ ನಿದರ್ಶನಗಳನ್ನು ನೀಡಿ ನಾನೇನಾದರೂ ಕಾಂಗ್ರೆಸ್‌ ಪಕ್ಷಕ್ಕೆ ಹೋದಲ್ಲಿ ಕನಿಷ್ಠ ಸಾಂಪ್ರದಾಯಿಕ ಮತಗಳು ಮತ್ತು ನಮ್ಮ ಅಭಿವೃದ್ಧಿ ಕಾರ‍್ಯಗಳಿಗೆ ಮೆಚ್ಚಿ ಮತ ಬೀಳುತ್ತದೆಂದು ಹೇಳಿದ್ದೆ. 

ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಪಾಠ ಕಲಿಸಿ: ಎಚ್‌.ಡಿ.ಕುಮಾರಸ್ವಾಮಿ

ಎಂದೋ ಹಿತೈಷಿಗಳೊಂದಿಗೆ ಮಾತನಾಡಿದ ಆ ವಿಚಾರವನ್ನು ಚುನಾವಣೆ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ದುರುಪಯೋಗ ಪಡಿಸಿಕೊಳ್ಳಲಾ​ಗು​ತ್ತಿದೆ ಎಂದು ಆರೋ​ಪಿ​ಸಿ​ದ​ರು. ಅರಸೀಕೆರೆಯಲ್ಲಿ ರಾಜಕೀಯ ಗೊಂದಲ ಎಬ್ಬಿಸಲಾಗುತ್ತಿದೆ. ನಾನು ನನ್ನ ಅಭಿಮಾನಿಗಳ ಸಭೆ ಕರೆದು ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದೆ. ಆದರೆ ಕ್ಷೇತ್ರದಲ್ಲಿ 6 ತಿಂಗಳ ಹಿಂದಿನಿಂದಲೇ ಸ್ವಯಂಘೋಷಿತ ಅಭ್ಯರ್ಥಿಯೊಬ್ಬ ಪ್ರಚಾರ ಆರಂಭಿಸಿದ್ದಾರೆ. ಆತ ಕಾಂಗ್ರೆಸ್‌ನಲ್ಲಿದ್ದು, ಅದ್ಯಾವಾಗ ನನಗೆ ತಿಳಿಯದೆ ಜೆಡಿಎಸ್‌ಗೆ ಸೇರ್ಪಡೆಯಾದ ಎಂಬುದೇ ನನಗೆ ಅಚ್ಚ​ರಿ. ನಾನು ಇನ್ನೂ ಜೆಡಿಎಸ್‌ ಪಕ್ಷದಲ್ಲಿದ್ದೇನೆ, ಶಾಸಕನಾಗಿದ್ದೇನೆ. ಅವರ ಪಕ್ಷ ಅವ​ರಿಗೆ ಯಾರು ಇಷ್ಟವೋ ಅವ​ರನ್ನು ಅಭ್ಯರ್ಥಿ ಮಾಡು​ತ್ತಾ​ರೆ. ನಾನು ನನ್ನ ಕಾರ್ಯಕರ್ತರು ನೀಡುವ ಸೂಚನೆ ಮೇರೆಗೆ ಮುಂದಿನ ಹೆಜ್ಜೆ ಇಡು​ತ್ತೇನೆ ಎಂದು ತಿಳಿ​ಸಿ​ದ​ರು.