ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಹಣವನ್ನು ಜನರಿಗೆ ನೀಡುವ ಕೆಲಸ ಮಾಡು​ತ್ತಿದೆ. ವಿಪಕ್ಷ​ಗಳು ಟೀಕಿ​ಸುವ ಹಾಗೂ ಜನ​ರಲ್ಲಿ ಗೊಂದಲ ಮೂಡಿ​ಸುವ ಬದಲು ರಚನಾತ್ಮಕ ಸಲಹೆ ಸೂಚನೆ ನೀಡುವ ಕೆಲಸ ಮಾಡಲಿ ಎಂದು ಸಾರಿಗೆ ಸಚಿವರು ಆದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿ​ದ​ರು. 

ರಾಮನಗರ (ಆ.06): ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಹಣವನ್ನು ಜನರಿಗೆ ನೀಡುವ ಕೆಲಸ ಮಾಡು​ತ್ತಿದೆ. ವಿಪಕ್ಷ​ಗಳು ಟೀಕಿ​ಸುವ ಹಾಗೂ ಜನ​ರಲ್ಲಿ ಗೊಂದಲ ಮೂಡಿ​ಸುವ ಬದಲು ರಚನಾತ್ಮಕ ಸಲಹೆ ಸೂಚನೆ ನೀಡುವ ಕೆಲಸ ಮಾಡಲಿ ಎಂದು ಸಾರಿಗೆ ಸಚಿವರು ಆದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿ​ದ​ರು. ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಿರೋಧ ಪಕ್ಷಗಳು ಎಷ್ಟೇ ಅಡ್ಡಗಾಲು ಹಾಕಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚುನಾವಣಾ ಪೂರ್ವ ನೀಡಿದ್ದ ಗ್ಯಾರಂಟಿಗಳನ್ನು ಕಾಂಗ್ರೆಸ್‌ ಸರ್ಕಾರ ಜಾರಿ​ಗೊ​ಳಿ​ಸ​ಲಿದೆ. ರಾಜ್ಯದ ಜನರಿಗೆ ಮಾಡಿದ್ದ ವಾಗ್ದಾನಗಳನ್ನು ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡುವ ಜವಾಬ್ದಾರಿ ನಮ್ಮದು ಎಂಬ ಭರವಸೆಯನ್ನೂ ನೀಡಲಾಗಿತ್ತು. 2013-18 ರಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ ಸರ್ಕಾರ ಕೊಟ್ಟಂತಹ 165 ಭರವಸೆಗಳನ್ನು 158 ಈಡೇರಿಸಿ, 30 ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಜಾರಿಗೊಳಿಸಿತ್ತು. ಆದರೆ, ಬಿಜೆಪಿ ಸರ್ಕಾರ 610 ಭರ​ವ​ಸೆ​ಗ​ಳಲ್ಲಿ ಕೇವಲ 60 ಭರ​ವ​ಸೆ​ಗ​ಳನ್ನು ಈಡೇ​ರಿ​ಸಿತು ಎಂದು ವ್ಯಂಗ್ಯ​ವಾ​ಡಿ​ದರು.

ವರ್ಗಾ​ವ​ಣೆಗೂ ನನಗೂ ಯಾವುದೇ ಸಂಬಂಧ ಇಲ್ಲ: ಸಂಸದ ಡಿ.ಕೆ.​ಸು​ರೇಶ್‌

ಕಾಂಗ್ರೆಸ್‌ನ ಬದ್ಧ​ತೆ ಹಾಗೂ ಕಾರ್ಯ​ಕ್ರ​ಮ​ಗ​ಳನ್ನು ನೋಡಿ ಜನರು ಪಕ್ಷಕ್ಕೆ ಅಭೂತಪೂರ್ವ ಗೆಲುವು ನೀಡಿದರು. ಸರ್ಕಾರ ಐದು ಗ್ಯಾರಂಟಿಗಳ ಜೊತೆಗೆ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ 76 ಭರವಸೆಗಳನ್ನೂ ಜಾರಿಗೆ ತರಲಿದೆ. ಮುಂದಿನ ಐದು ವರ್ಷಗಳಲ್ಲಿ ಪ್ರಣಾಳಿಕೆಯಲ್ಲಿ ತಿಳಿಸಿರುವ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು ಎಂದರು. ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯಾದ್ಯಂತ 32 ಕೋಟಿಯಷ್ಟುಮಂದಿ ಬಸ್ಸಿ​ನಲ್ಲಿ ಪ್ರಯಾಣ ಮಾಡಿದ್ದಾರೆ. ಈ ಹಿಂದೆ ಮಾಸಿಕ 80 ಲಕ್ಷದಷ್ಟುಮಹಿಳೆಯರು ಮಾತ್ರ ಬಸ್‌ ಬಳಕೆ ಮಾಡುತ್ತಿದ್ದರು. ಆದರೆ, ಶಕ್ತಿ ಯೋಜನೆ ಜಾರಿ ಬಳಿಕ ಮಾಸಿಕ ಹೆಚ್ಚುವರಿ 20 ಲಕ್ಷ ಮಂದಿ ಬಸ್ಸಿನಲ್ಲಿ ಪ್ರಯಾಣಿಸು​ತ್ತಿದ್ದು, ಈಗ ಅದು ಒಂದು ಕೋಟಿಗೆ ದಾಟಿದೆ. 

ಸಿದ್ದರಾಮಯ್ಯರವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರತಿಯೊಬ್ಬರಿಗೆ 7 ಕೆಜಿ ಅಕ್ಕಿ ನೀಡುತ್ತಿದ್ದರು. ಬಿಜೆಪಿ ಸರ್ಕಾರ ಅದನ್ನು 5 ಕೆಜಿಗೆ ಇಳಿ​ಸಿತು. ಈಗ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ನೀಡಲು ಅನ್ನ ಭಾಗ್ಯ ಯೋಜನೆ ಜಾರಿ ತರ​ಲಾ​ಗಿದೆ. ಆದರೆ, ಕೇಂದ್ರ ಸರ್ಕಾರದ ಬಳಿ ಗೋದಾಮಿನಲ್ಲಿ 130 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ದಾಸ್ತಾನಿದ್ದರೂ ನೀಡು​ತ್ತಿಲ್ಲ. ಈ ಕಾರ​ಣ​ದಿಂದಾಗಿ ತಾತ್ಕಾಲಿಕವಾಗಿ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಹಾಗೂ ಪ್ರತಿ 1 ಕೆಜಿಗೆ 34 ರು.ನಂತೆ 5 ಕೆ.ಜಿಗೆ ತಗ​ಲುವ ಮೊತ್ತ​ವನ್ನು ಡಿಬಿಟಿ ಮೂಲಕ ವರ್ಗಾ​ಯಿ​ಸ​ಲಾ​ಗು​ತ್ತಿದೆ. 

ಅಕ್ಕಿ ನೀಡಲು ಸಾಧ್ಯ​ವಿ​ಲ್ಲ​ದಿ​ದ್ದರೆ ಹಣ ನೀಡಬೇ​ಕೆಂದು ಹೇಳಿದ್ದ ಬಿಜೆಪಿ ಇದೀಗ ಹಣದ ಬದಲು ಅಕ್ಕಿ ನೀಡ​ಬೇ​ಕೆಂದು ಚಿಕ್ಕ ಮಕ್ಕ​ಳಂತೆ ಚಂಡಿ ಹಿಡಿ​ಯು​ತ್ತಿ​ದ್ದಾರೆಂದು ರಾಮ​ಲಿಂಗಾ​ರೆಡ್ಡಿ ಟೀಕಿ​ಸಿ​ದ​ರು. ಶಾಸಕ ಇಕ್ಬಾಲ್‌ ಹುಸೇನ್‌ ಮಾತನಾಡಿ, ಈ ಹಿಂದಿನ ಬಿಜೆಪಿ ಸರ್ಕಾರ ಕೊರೋನಾ ಸಮಯದಲ್ಲಿ ಹೆಣದ ಮೇಲೆ ಹಣ ಮಾಡುವ ಕೆಲಸ ಮಾಡಿತು. ಜನರ ಸಾವಿಗೆ ಬೆಲೆ ಇರಲಿಲ್ಲ. ಕೋವಿಡ್‌ಗೆ ಬಲಿಯಾದವರಿಗೆ ಸಂಪ್ರದಾಯ ಬದ್ಧವಾಗಿ ಶವ ಸಂಸ್ಕಾರ ಮಾಡಲು ಸಾಧ್ಯ​ವಾ​ಗ​ಲಿಲ್ಲ. ಆದರೆ ಕಾಂಗ್ರೆಸ್‌ ನಾಯಕರು ನೆರವಿಗೆ ಧಾವಿಸಿ ಧೈರ್ಯ ತುಂಬುವ ಕೆಲಸ ಮಾಡಿದರು. 

ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಶರತ್‌ ಬಚ್ಚೇಗೌಡ

ನೋವು ಮತ್ತು ಸಂಕಷ್ಟದಲ್ಲಿದ್ದ ಜನರು ಭರವಸೆ ಇಟ್ಟು ಕಾಂಗ್ರೆಸ್‌ ಪಕ್ಷ​ವನ್ನು ಅಧಿ​ಕಾ​ರಕ್ಕೆ ತಂದಿ​ದ್ದಾರೆ. ರಾಮನಗದಿಂದ ಆಯ್ಕೆಯಾದವರು ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಯಾದರು. ನಗರದ ಮೂಲ ಸೌಕರ್ಯಕ್ಕೆ ಒತ್ತು ನೀಡಲಿಲ್ಲ. ಇಂದಿಗೂ ಜನರು ಕುಡಿ​ಯುವ ನೀರಿಗೆ ಕಷ್ಟಪಡು​ತ್ತಿ​ದ್ದಾರೆ. ಅದೇ ಸಿ.ಪಿ.​ಯೋ​ಗೇ​ಶ್ವರ್‌ ಕೇವಲ ಶಾಸ​ಕ​ರಾಗಿ ಶಿಂಷಾ​ನ​ದಿ​ಯಿಂದ ನೀರು ತಂದು ಜನ​ರಿಗೆ ನೀಡಿ​ದರು ಎಂದು ಹೇಳಿ​ದ​ರು. ಈ ವೇಳೆ ನಗರಸಭೆ ಪ್ರಭಾರ ಅಧ್ಯಕ್ಷ ಸೋಮಶೇಖರ್‌(ಮಣಿ), ಜಿಲ್ಲಾಧಿಕಾರಿ ಡಾ.ಅವಿನಾಶ್‌, ಜಿಪಂ ಸಿಇಒ ದಿಗ್ವಿಜಯ ಬೋಡ್ಕೆ, ಎಸ್ಪಿ ಕಾರ್ತಿಕ್‌ ರೆಡ್ಡಿ, ಅಪ​ರ ಜಿಲ್ಲಾ​ಧಿಕಾರಿ ಶಿವಾನಂದ ಮೂರ್ತಿ, ಬೆಸ್ಕಾಂ ಅ​ಧೀಕ್ಷಕ ಶಿವಣ್ಣ ಮತ್ತಿ​ತ​ರರು ಉಪ​ಸ್ಥಿ​ತ​ರಿದ್ದರು.