Asianet Suvarna News Asianet Suvarna News

ಸುಳ್ಳು ಆರೋಪಗಳಿಂದ ಕಾಲ ಕಳೆಯುತ್ತಿರುವ ಎಚ್ಡಿಕೆ: ಸಚಿ​ವ ರಾಮ​ಲಿಂಗಾ​ರೆಡ್ಡಿ

ನಮ್ಮ ಕಾಂಗ್ರೆಸ್‌ ಸರ್ಕಾ​ರ​ದಲ್ಲಿ ಯಾವ ​ದಂಧೆ​ಯಾ​ಗಲಿ, ಭ್ರಷ್ಟಾ​ಚಾ​ರವಾಗಲಿ ನಡೆ​ಯು​ತ್ತಿಲ್ಲ. ವಿರೋಧ ಪಕ್ಷ​ದ​ಲ್ಲಿ​ರುವ ಕಾರ​ಣಕ್ಕೆ ಕೆಲ​ವರು ಸುಳ್ಳು ಆರೋ​ಪ ಮಾಡಿಕೊಂಡು ಕಾಲ ದೂಡು​ತ್ತಿ​ದ್ದಾರೆ ಎಂದು ಮಾಜಿ ಸಿಎಂ ಕುಮಾ​ರ​ಸ್ವಾಮಿಯವರ ವೈಎಸ್‌ಟಿ ಟ್ಯಾಕ್ಸ್‌ ಆರೋ​ಪಕ್ಕೆ ಸಾರಿಗೆ ಸಚಿ​ವ ರಾಮ​ಲಿಂಗಾ​ರೆಡ್ಡಿ ತಿರು​ಗೇಟು ನೀಡಿ​ದ​ರು. 
 

Minister Ramalinga Reddy Slams On HD Kumaraswamy gvd
Author
First Published Aug 6, 2023, 5:33 PM IST

ರಾಮ​ನ​ಗರ (ಆ.06): ನಮ್ಮ ಕಾಂಗ್ರೆಸ್‌ ಸರ್ಕಾ​ರ​ದಲ್ಲಿ ಯಾವ ​ದಂಧೆ​ಯಾ​ಗಲಿ, ಭ್ರಷ್ಟಾ​ಚಾ​ರವಾಗಲಿ ನಡೆ​ಯು​ತ್ತಿಲ್ಲ. ವಿರೋಧ ಪಕ್ಷ​ದ​ಲ್ಲಿ​ರುವ ಕಾರ​ಣಕ್ಕೆ ಕೆಲ​ವರು ಸುಳ್ಳು ಆರೋ​ಪ ಮಾಡಿಕೊಂಡು ಕಾಲ ದೂಡು​ತ್ತಿ​ದ್ದಾರೆ ಎಂದು ಮಾಜಿ ಸಿಎಂ ಕುಮಾ​ರ​ಸ್ವಾಮಿಯವರ ವೈಎಸ್‌ಟಿ ಟ್ಯಾಕ್ಸ್‌ ಆರೋ​ಪಕ್ಕೆ ಸಾರಿಗೆ ಸಚಿ​ವ ರಾಮ​ಲಿಂಗಾ​ರೆಡ್ಡಿ ತಿರು​ಗೇಟು ನೀಡಿ​ದ​ರು. ನಗ​ರದ ಜಿಲ್ಲಾ​ಧಿ​ಕಾ​ರಿ​ಗಳ ಕಚೇರಿ ಸಭಾಂಗ​ಣ​ದಲ್ಲಿ ಜಿಲ್ಲಾ ಮಟ್ಟದ ಅಧಿ​ಕಾ​ರಿ​ಗಳ ಸಭೆಗೂ ಮುನ್ನ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಕಾಂಗ್ರೆಸ್‌ ಪಕ್ಷ ರಾಜ್ಯ​ದಲ್ಲಿ ಸ್ವಚ್ಛ ಆಡ​ಳಿತ ನೀಡು​ತ್ತಿದೆ. ಇದನ್ನು ಸಹಿ​ಸ​ದ​ ವಿಪ​ಕ್ಷ​ಗಳು ಆರೋ​ಪ​ಗ​ಳಲ್ಲಿ ತೊಡ​ಗಿವೆ. 

ಈಗ ಮಾಜಿ ಸಿಎಂ ಕುಮಾ​ರ​ಸ್ವಾಮಿ ವಿರೋಧ ಪಕ್ಷ​ದಲ್ಲಿದ್ದಾರೆ. ಅದ​ಕ್ಕಾಗಿ ಅವರು ರಾಜ್ಯ​ದಲ್ಲಿ ವೈಎಸ್‌ಟಿ ಟ್ಯಾಕ್ಸ್‌ ಅಂತೆಲ್ಲ ಆರೋಪ ಮಾಡು​ತ್ತಿ​ದ್ದಾರೆ. ನಮ್ಮಲ್ಲಿ ಯಾವ ದಂಧೆಯೂ ಇಲ್ಲ, ಯಾವ ಭ್ರಷ್ಟಾ​ಚಾ​ರವೂ ಇಲ್ಲ. ನಮ್ಮದು ಸ್ವಚ್ಛ ಆಡ​ಳಿತ ಎಂದು ಹೇಳಿ​ದ​ರು. ಪೊಲೀಸ್‌ ಹಾಗೂ ಸಾರಿಗೆ ಇಲಾಖೆಯಲ್ಲಿ ವೇತನ ಪಾವತಿ ವಿಚಾ​ರ​ವಾಗಿ ಕೇಳಿದ ಪ್ರಶ್ನೆಗೆ ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿಯ ಕಾರ್ಯವೈಖರಿ ಇದೆ. ನಮ್ಮ ಕೆಎಸ್‌ಆರ್‌ಟಿಸಿಯಲ್ಲಿ 1ನೇ ತಾರೀಖು ಸಂಬಳ ನೀಡಲಾಗುತ್ತದೆ. ಬಿಎಂಟಿಸಿಯಲ್ಲಿ 7ನೇ ತಾರೀಖು, ಕಲ್ಯಾಣ ಕರ್ನಾಟಕ ಸಾರಿಗೆಗೆ ಒಂದು ದಿನ ನಿಗದಿ ಮಾಡಲಾಗಿದೆ. 

ಲೋಕಸಭಾ ಚುನಾವಣೆ ಹಿನ್ನೆಲೆ: ಮಾಗಡಿ ವಿಧಾ​ನ​ಸಭಾ ಕ್ಷೇತ್ರ​ದಲ್ಲಿ ಆಪ​ರೇ​ಷನ್‌ ಹಸ್ತ!

ಎಲ್ಲಾ ಇಲಾಖೆಗಳಲ್ಲೂ ಈ ರೀತಿಯಾಗಿ ವೇತನ ಪಾವತಿ ಮಾಡು​ತ್ತಾರೆ. ಆದರೆ, ಇದ​ರ​ಲ್ಲಿಯೂ ಕೆಲ​ವರು ರಾಜ​ಕೀಯ ಮಾಡು​ತ್ತಿ​ದ್ದಾರೆ. ಮಾಜಿ ಸಿಎಂ ಬಸ​ವ​ರಾಜ ಬೊಮ್ಮಾಯಿ ನಮ್ಮ ಸಾರಿಗೆ ಇಲಾಖೆ ಕುರಿತು ಟ್ವೀಚ್‌ ಮಾಡಿ ಅರ್ಧ ಸಂಬಳ ಅಂತ ಆರೋಪ ಮಾಡಿದ್ದರು. ಪೂರ್ಣ ಮಾಹಿತಿ ಇಲ್ಲದೆ ಈ ರೀತಿಯ ಹೇಳಿಕೆ ನೀಡಬಾರದು. ಇದು ಅವ​ರಿಗೆ ಶೋಭೆ ತರು​ವು​ದಿಲ್ಲ ಎಂದು ಹೇಳಿದರು. ಬಸ​ವ​ರಾಜ ಬೊಮ್ಮಾಯಿ ಮುಖ್ಯ​ಮಂತ್ರಿ​ಯಾಗಿ ಆಡ​ಳಿತ ನಡೆ​ಸಿ​ದವರು. ಅವರ ಅವಧಿಯಲ್ಲಿ ಯಾವ ರೀತಿ ಸಮಸ್ಯೆ ಆಗಿತ್ತು ಅಂತ ಎಲ್ಲರಿಗೂ ಗೊತ್ತು. ಈಗ ನಮಗೆ ನೀತಿ ಪಾಠ ಹೇಳಿ​ಕೊ​ಡಲು ಬರು​ತ್ತಿ​ದ್ದಾರೆ ಎಂದು ಬಿಜೆಪಿ ನಾಯ​ಕ​ರಿಗೆ ಟಾಂಗ್‌ ನೀಡಿ​ದರು. 

ಡಿಸಿಎಂ ಸ್ವಕ್ಷೇ​ತ್ರ​ದಲ್ಲಿ ಸಾರಿಗೆ ಬಸ್ಸಿ​ನ ಅವ್ಯ​ವಸ್ಥೆ ಖಂಡಿಸಿ ಪ್ರತಿಭಟನೆ: ವಾಹನ ಸಂಚಾರ ಅಸ್ತವ್ಯಸ್ಥೆ!

ಶಾಸಕರು ಹಾಗೂ ಸಚಿವರ ನಡುವೆ ಸಣ್ಣಪುಟ್ಟ ಅಸಮಾಧಾನ ಇದ್ದೆ ಇರು​ತ್ತದೆ. ಇಲ್ಲ ಅಂತ ಏನಿಲ್ಲ. ಆದರೆ, ಎಲ್ಲವನ್ನೂ ಕೂತು ಬಗೆಹರಿಸಿಕೊಳ್ಳುತ್ತೇವೆ ಎಂದು ರಾಮ​ಲಿಂಗಾ​ರೆಡ್ಡಿ ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದ​ರು. ಲೋಕಸಭಾ ಚುನಾವಣೆ ವಿಚಾರವಾಗಿ ಹೈಕಮಾಂಡ್‌ ಎಲ್ಲ​ರಿಗೂ ಹಲವು ಸಲಹೆ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಗೆ ಸೂಚನೆ ನೀಡಿದ್ದಾರೆ. ಲೋಕಸಭಾ ಚುನಾವಣೆಯ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಕುರಿತು ಹೈಕಮಾಂಡ್‌ ನಾಯಕರು ಚರ್ಚೆ ಮಾಡಿದ್ದಾರೆ ಎಂದು ಹೇಳಿ​ದರು. ಶಾಸಕ ಇಕ್ಬಾಲ್‌ ಹುಸೇನ್‌, ಮಾಜಿ ಶಾಸಕ ಕೆ.ರಾಜು, ನಗ​ರ​ಸಭೆ ಪ್ರಭಾರ ಅಧ್ಯಕ್ಷ ಸೋಮ​ಶೇ​ಖರ್‌(ಮ​ಣಿ) ಮತ್ತಿ​ತ​ರರು ಹಾಜರಿದ್ದರು.

Follow Us:
Download App:
  • android
  • ios