ಕಾಂಗ್ರೆಸ್‌ಗೆ ಇಂತಿಷ್ಟೇ ಜನ ಬರುತ್ತಾರೆಂದು ಸ್ಪಷ್ಟವಾಗಿ ಹೇಳಲಾಗದು. ಕಲ್ಯಾಣ ಕರ್ನಾಟಕ ಹಲವರು ನನ್ನ ಸಂಪರ್ಕ ದಲ್ಲಿದ್ದಾರೆ. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವವರನ್ನು ಪಕ್ಷ ಬರಮಾಡಿಕೊಳ್ಳಲ್ಲಿದೆ. ಇನ್ನು, ಈ ಮುಖಂಡರು ಪಕ್ಷಕ್ಕೆ ಬರುವುದರಿಂದ ಆಗುವ ಲಾಭ ನಷ್ಟಗಳ ಕುರಿತು ರಾಜ್ಯ ನಾಯಕರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದ ಅವರು, ಇದಕ್ಕೆ ನಾವು ‘ಆಪರೇಷನ್‌ ಹಸ್ತ’ ಪದ ಬಳಕೆ ಮಾಡಲ್ಲ.‘ಆಪರೇಷನ್‌’ ಎಂಬ ಕೆಟ್ಟಶಬ್ದ ತಂದಿದ್ದೇ ಬಿಜೆಪಿ ಎಂದ ಸಚಿವ ಎನ್‌.ಎಸ್‌.ಬೋಸರಾಜು 

ಮಡಿಕೇರಿ(ಆ.29): ಬಿಜೆಪಿಯ ಪ್ರಮುಖ ನಾಯಕರು, ಹಾಲಿ ಶಾಸಕರು, ಮಾಜಿ ಶಾಸಕರು ಸೇರಿ ನಾವು ನಂಬಲು ಆಗದೇ ಇರುವಂತಹ ಅನೇಕರು ಪಕ್ಷಕ್ಕೆ ಬಂದರೆ ಅಚ್ಚರಿ ಪಡಬೇಕಿಲ್ಲ. ಕಲ್ಯಾಣ ಕರ್ನಾಟಕದಲ್ಲಂತೂ ಬಿಜೆಪಿಗೆ ಆಘಾತ ಕಾದಿದೆ ಎಂದು ಸಚಿವ ಎನ್‌.ಎಸ್‌.ಬೋಸರಾಜು ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ಕಾಂಗ್ರೆಸ್‌ಗೆ ಇಂತಿಷ್ಟೇ ಜನ ಬರುತ್ತಾರೆಂದು ಸ್ಪಷ್ಟವಾಗಿ ಹೇಳಲಾಗದು. ಕಲ್ಯಾಣ ಕರ್ನಾಟಕ ಹಲವರು ನನ್ನ ಸಂಪರ್ಕ ದಲ್ಲಿದ್ದಾರೆ. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವವರನ್ನು ಪಕ್ಷ ಬರಮಾಡಿಕೊಳ್ಳಲ್ಲಿದೆ. ಇನ್ನು, ಈ ಮುಖಂಡರು ಪಕ್ಷಕ್ಕೆ ಬರುವುದರಿಂದ ಆಗುವ ಲಾಭ ನಷ್ಟಗಳ ಕುರಿತು ರಾಜ್ಯ ನಾಯಕರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದ ಅವರು, ಇದಕ್ಕೆ ನಾವು ‘ಆಪರೇಷನ್‌ ಹಸ್ತ’ ಪದ ಬಳಕೆ ಮಾಡಲ್ಲ.‘ಆಪರೇಷನ್‌’ ಎಂಬ ಕೆಟ್ಟಶಬ್ದ ತಂದಿದ್ದೇ ಬಿಜೆಪಿ ಎಂದರು.

Karnataka Politics: ಆಪರೇಶನ್‌ ಹಸ್ತ ಟಾಸ್ಕ್ ಯಾರಿ​ಗೂ ಕೊಟ್ಟಿ​ಲ್ಲ: ಎನ್‌.ಎಸ್‌.ಬೋಸರಾಜ್

ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ನಡೆಸಲಾಗುತ್ತಿದೆ. ರಾಷ್ಟ್ರೀಯ ನಾಯಕರು ಈಗಾಗಲೇ ಈ ಬಗ್ಗೆ ಸಭೆ ನಡೆಸಿದ್ದಾರೆ. ಜಿಲ್ಲಾಮಟ್ಟದಲ್ಲಿ ಉಸ್ತುವಾರಿ ಸಚಿವರಿಗೆ ಚುನಾವಣೆ ಜವಾಬ್ದಾರಿ ನೀಡಲಾಗಿದೆ ಎಂದರು.